• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

PPE ಕೊರತೆ ಎಫೆಕ್ಟ್;‌ ದಾದಿಯರಲ್ಲೂ ಕಂಡು ಬರುತ್ತಿದೆ ಕರೋನಾ ಸೋಂಕು!

by
April 7, 2020
in ದೇಶ
0
PPE ಕೊರತೆ ಎಫೆಕ್ಟ್;‌ ದಾದಿಯರಲ್ಲೂ ಕಂಡು ಬರುತ್ತಿದೆ ಕರೋನಾ ಸೋಂಕು!
Share on WhatsAppShare on FacebookShare on Telegram

ದೇಶದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಮತ್ತಷ್ಟು ಆತಂಕ ಹುಟ್ಟಿಸಿರುವ ಸಂಗತಿ ಎಂದರೆ ಸೋಂಕಿತರನ್ನೂ, ರೋಗಿಗಳನ್ನೂ ಚಿಕಿತ್ಸೆ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೂ ಇದು ಹಬ್ಬುತ್ತಿರುವುದು. ವೈದ್ಯಕೀಯ ಸಿಬ್ಬಂದಿಗಳಿಗೂ ಇದು ಹಬ್ಬುವುದಾದರೆ ಮುಂದೆ ಚಿಕಿತ್ಸೆ ನೀಡಲೂ ವೈದ್ಯರು ಹಿಂಜರಿಯುವುದು ಖಚಿತ. ವೈದ್ಯಕೀಯ ಸಿಬ್ಬಂದಿಗಳಿಗೂ ಈ ಮಹಾಮಾರಿ ಹಬ್ಬುತ್ತದೆ ಎಂದು ಚೀನಾದಲ್ಲೇ ಸಾಬೀತಾಗಿತ್ತು. ಹಾಗಾಗಿ ಭಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡೇ ಎಲ್ಲ ವೈದ್ಯಕೀಯ ಸಿಬ್ಬಂದಿಗಳೂ ಚಿಕಿತ್ಸೆ ನೀಡುತ್ತಿದ್ದಾರೆ. ಈ ಎಲ್ಲ ಕ್ರಮಗಳ ನಡುವೆಯೂ ಸಿಬ್ಬಂದಿಗಳಿಗೆ ಸೋಂಕು ತಗುಲಿರುವುದು ಆತಂಕ ಸೃಷ್ಟಿಸಿದೆ.

ADVERTISEMENT

ಕಳೆದ ಒಂದು ವಾರದ ಅವಧಿಯಲ್ಲಿ 26 ದಾದಿಯರು (NURSE) ಮತ್ತು ಮೂವರು ವೈದ್ಯರು ಕೋವಿಡ್ -19 ಪಾಸಿಟಿವ್‌ ಹೊಂದಿದ್ದಾರೆ ಎಂದು ಖಚಿತಗೊಂಡ ನಂತರ ಬೃಹತ್‌ ಮುಂಬೈ ಮಹಾನಗರ ಪಾಲಿಕೆ ಮುಂಬೈ ಸೆಂಟ್ರಲ್‌ನ ವೋಕ್‌ಹಾರ್ಡ್ ಆಸ್ಪತ್ರೆಯನ್ನು ಧಾರಕ ವಲಯವೆಂದು ಘೋಷಿಸಿದೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ. ಅಲ್ಲಿನ ಪ್ರತಿಯೊಬ್ಬ ಸೋಂಕಿತ ವ್ಯಕ್ತಿಯನ್ನು ಎರಡು ಬಾರಿ ಪರೀಕ್ಷಿಸಲಾಗುತಿದ್ದು, ಕೋವಿಡ್‌ ನೆಗೆಟಿವ್‌ ಕಂಡು ಬಂದರೆ ಮಾತ್ರ ಆಸ್ಪತ್ರೆಗೆ ಪ್ರವೇಶಿಸಲು ಅಥವಾ ಹೊರಹೋಗಲು ಅನುಮತಿ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸೋಂಕು ಹೇಗೆ ಹರಡಿತು ಎಂದು ತನಿಖೆ ನಡೆಸಲು ಕಾರ್ಯನಿರ್ವಾಹಕ ಆರೋಗ್ಯ ಅಧಿಕಾರಿಯ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ ಎಂದು ಹೆಚ್ಚುವರಿ ನಗರಸಭೆ ಆಯುಕ್ತ ಸುರೇಶ್ ಕಾಕಾನಿ ತಿಳಿಸಿದ್ದಾರೆ. ಇಂತಹ ದೊಡ್ಡ ಪ್ರಕರಣಗಳು ವೈದ್ಯಕೀಯ ಕ್ಷೇತ್ರದಿಂದಲೇ ಬಂದಿರುವುದು ದುರದೃಷ್ಟಕರ ಎಂದು ಅವರು ಹೇಳಿದರು. ವೈದ್ಯಕೀಯ ಸಿಬ್ಬಂದಿ ಅವರು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದೂ ಅವರು ಹೇಳಿದರು.

ಅಧಿಕಾರಿಗಳು 270 ಕ್ಕೂ ಹೆಚ್ಚು ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳ ಗಂಟಲ ದ್ರವ ಮಾದರಿಗಳನ್ನು ತೆಗೆದು ಪರೀಕ್ಷೆಗಳಿಗೆ ಕಳುಹಿಸಿದ್ದಾರೆ. ಅಗ್ರಿಪಾಡಾ ಪೊಲೀಸ್ ಠಾಣೆ ಹಿರಿಯ ಇನ್ಸ್‌ಪೆಕ್ಟರ್ ಸವಲಾರಂ ಅಂಗವಾನೆ ಮಾತನಾಡಿ, ಒಬ್ಬ ಅಧಿಕಾರಿ ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಆಸ್ಪತ್ರೆ ಸಮೀಪದ ಸಂಚಾರವನ್ನು ನಿಯಂತ್ರಿಸಲು ನಿಯೋಜಿಸಲಾಗಿದೆ ಎಂದರು. ಆಸ್ಪತ್ರೆಯ ವಕ್ತಾರರ ಪ್ರಕಾರ ಹೊರ ರೋಗಿಗಳ ಮತ್ತು ತುರ್ತು ಸೇವೆಗಳನ್ನು ಮುಚ್ಚಲಾಗಿದೆ ಮತ್ತು ಹೊರ ರೋಗಿಗಳ ಪ್ರವೇಶವನ್ನೇ ನಿಷೇಧಿಸಲಾಗಿದೆ. ಆದರೆ ಎಷ್ಟು ಜನರು ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ ಎಂಬುದರ ಕುರಿತು ಯಾವುದೇ ವಿವರಣೆಯನ್ನು ನೀಡಲಿಲ್ಲ. ಮಾರ್ಚ್ 27 ರಂದು ಹೃದಯಾಘಾತದಿಂದ ಬಳಲುತ್ತಿದ್ದ 70 ವರ್ಷದ ರೋಗಿಯೊಬ್ಬರು ಕೋವಿಡ್‌ ಸೋಂಕು ಹೊಂದಿರುವುದು ಪರೀಕ್ಷೆಯಲ್ಲಿ ದೃಡ ಪಟ್ಟಿತು. ಈ ರೋಗಿಯನ್ನು ಪರೀಕ್ಷಿಸುತ್ತಿದ್ದ ಇಬ್ಬರು ದಾದಿಯರು ಸೋಂಕಿಗೆ ಒಳಗಾಗಿದ್ದಾರೆ. ಇದರಿಂದಾಗಿ ಸೋಂಕು ಇತರ ದಾದಿಗಳಿಗೂ ಹರಡಿ ದಾದಿಯರು ಅನಾರೋಗ್ಯಕ್ಕೆ ಒಳಗಾದರು ನಂತರ ಅವರಲ್ಲೂ ಕೂಡ ಕೋವಿಡ್‌ ನ ಸೋಂಕು ತಗುಲಿರುವುದು ಪತ್ತೆಯಾಯಿತು. ಸೋಂಕಿತ ಇಬ್ಬರು ವೈದ್ಯರನ್ನು ಸೆವೆನ್ ಹಿಲ್ಸ್ ಆಸ್ಪತ್ರೆಗೆ ಮತ್ತು ಒಬ್ಬರನ್ನು ಮಾಹಿಮ್‌ ನ ಎಸ್.ಎಲ್.ರಹೇಜಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ,

ಆರಂಭದಲ್ಲಿ ಕೋವಿಡ್‌ ಸೋಂಕು ಪತ್ತೆಯಾದ ಇಬ್ಬರು ದಾದಿಯರನ್ನು (NURSE) ಆಸ್ಪತ್ರೆಯು ನಿರ್ಬಂಧಿಸದ ಕಾರಣ ಸೋಂಕು ಇತರ ದಾದಿಯರಿಗೂ (NURSE) ಹರಡಿತು ಎಂದು ವೋಕ್‌ಹಾರ್ಡ್ ಸಿಬ್ಬಂದಿ ಆರೋಪಿಸಿದ್ದಾರೆ. ರೋಗಲಕ್ಷಣಗಳು ಪತ್ತೆ ಆಗುವರೆಗೂ ಅವರನ್ನು ಪರೀಕ್ಷೆಗೊಳಪಡಿಸಲಿಲ್ಲ, ಅಥವಾ ಶಿಫ್ಟ್‌ಗಳಿಂದ ತೆಗೆದುಹಾಕಲಾಗಿಲ್ಲ ಎಂದು ಸಂಯುಕ್ತ ದಾದಿಯರ ಸಂಘ ಹೇಳಿದೆ. ವೈಯಕ್ತಿಕ ರಕ್ಷಣಾ ಸಾಧನಗಳನ್ನು ಒದಗಿಸಿಲ್ಲ ಎಂದು ಅದು ಹೇಳಿದೆ. ಆದರೆ, ಆಸ್ಪತ್ರೆ ಆಡಳಿತವು ಆರೋಪಗಳನ್ನು ನಿರಾಕರಿಸಿದೆ. ಮಹಾರಾಷ್ಟ್ರದಲ್ಲಿ ಈವರೆಗೆ 532 ಕರೋನ ವೈರಸ್ ಪ್ರಕರಣಗಳು ಪತ್ತೆ ಅಗಿವೆ. ದೇಶದಲ್ಲಿ 4,067 ಕೋವಿಡ್‌ 19 ಪ್ರಕರಣಗಳು ವರದಿಯಾಗಿದ್ದು, 109 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈ ನಡುವೆ ಸೋಂಕಿನ ವಿರುದ್ದ ಬೃಹತ್‌ ಯುದ್ದವನ್ನೇ ಸಾರಿರುವ ನಮ್ಮ ವೈದ್ಯಕೀಯ ಪಡೆಗಳಿಗೆ ಇನ್ನೂ ಸೂಕ್ತ ವೈಯಕ್ತಿಕ ಸುರಕ್ಷತಾ ಸಾಧನಗಳು ತಲುಪಿಲ್ಲ ಎಂಬ ಕೂಗೂ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ (ಸಿಜಿಎಚ್‌ಎಸ್) ವೈದ್ಯರೊಬ್ಬರು ಸಚಿವಾಲಯದ `ಉನ್ನತ ಮಟ್ಟದವರಿಗೆ ಸುರಕ್ಷತಾ ಸಾಧನಗಳಿಗೆ ‘ವಿನಂತಿಯನ್ನು ಕಳುಹಿಸಿದಾಗ, N-95 ಮುಖವಾಡಗಳನ್ನು ವಲಸೆ ಅಧಿಕಾರಿಗಳು ವಿಮಾನ ನಿಲ್ದಾಣಗಳಲ್ಲಿ ಸ್ಕ್ಯಾನ್ ಮಾಡಲು ಒದಗಿಸಲಾಗಿದೆ ಎಂದು ತಿಳಿಸಲಾಯಿತು. ಇದೇ ರೀತಿಯ ಮತ್ತೊಂದು ಉದಾಹರಣೆಯಲ್ಲಿ,
ಹಿರಿಯ ಅಧಿಕಾರಿಗಳಿಂದ ಯಾವುದೇ ಉತ್ತರ ಬರಲಿಲ್ಲ.

ಶಂಕಿತ ರೋಗಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವೈದ್ಯರು ಮತ್ತು ದಾದಿಯರು (NURSE) ಸೇರಿದಂತೆ ಅಟೆಂಡೆಂಟ್ ಸಿಬ್ಬಂದಿ ವೈಯಕ್ತಿಕ ರಕ್ಷಣಾ ಸಾಧನಗಳು ಅಥವಾ ಪಿಪಿಇ ಹೊದಿಸುವುದು ಕಡ್ಡಾಯವಾಗಿದೆ. ಇದು ಪೂರ್ಣ ಕಿಟ್ ಅನ್ನು ಒಳಗೊಂಡಿದೆ ಮತ್ತು ಮುಖವಾಡಗಳು, ಆಂಟಿ-ವೈರಸ್ ಬೂಟುಗಳು, ಕನ್ನಡಕ, ಕೈಗವಸುಗಳು ಮತ್ತು ಗಂಟಲಿನ ಹೊದಿಕೆ. ಆರೋಗ್ಯ ಸಚಿವಾಲಯದೊಂದಿಗೆ ಸಾಕಷ್ಟು ಪಿಪಿಇಗಳಿವೆ. ಆದರೂ, ಕೂಡ ಅವು ನಿಗದಿತ ಆಸ್ಪತ್ರೆಗಳಿಗೆ ಸೂಕ್ತವಾಗಿ ರವಾನೆ ಆಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಇದು ಸಾವಿರಾರು ವೈದ್ಯರನ್ನು ಮಾರಣಾಂತಿಕ ಅಪಾಯಕ್ಕೆ ಸಿಲುಕಿಸುತ್ತದೆ.

ಭಾರತದ ರಾಜಕೀಯವಾಗಿ ಅತ್ಯಂತ ಶಕ್ತಿಶಾಲಿ ರಾಜ್ಯವಾದ ಉತ್ತರಪ್ರದೇಶದಲ್ಲಿ, ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಸುಮಾರು 4,700 ಆಂಬುಲೆನ್ಸ್‌ಗಳ ಚಾಲಕರು ಕಳೆದ ವಾರ ಮುಷ್ಕರ ನಡೆಸಿದ್ದು, ಸರಿಯಾದ ಸುರಕ್ಷತಾ ಸಾಧನ ಮತ್ತು ಆರೋಗ್ಯ ವಿಮೆಯನ್ನು ಒದಗಿಸುವಂತೆ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಬಿಹಾರದ ಸರ್ಕಾರಿ ಆಸ್ಪತ್ರೆಗಳಲ್ಲಿ, ವೈದ್ಯರು, ದಾದಿಯರು (NURSE) ಮತ್ತು ಇತರ ಆರೋಗ್ಯ ಕಾರ್ಯಕರ್ತರು ಯಾವುದೇ ಮೂಲಭೂತ ಸುರಕ್ಷತಾ ಸಾಧನಗಳಿಲ್ಲದೆ ಶಂಕಿತರನ್ನು ಪರೀಕ್ಷಿಸುತ್ತಿದ್ದಾರೆ. ಪಿಪಿಇ ಕೊರತೆಯಿಂದಾಗಿ ಆರೋಗ್ಯ ಕಾರ್ಯಕರ್ತರು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಸಂಪರ್ಕ ತಡೆಗೆ ಕಳುಹಿಸಬೇಕೆಂದು ಒತ್ತಾಯಿಸುತಿದ್ದಾರೆ. “ನಮಗೆ ಪಿಪಿಇ ಬದಲಿಗೆ ಎಚ್‌ಐವಿ ಕಿಟ್‌ಗಳನ್ನು ನೀಡಲಾಗುತ್ತದೆ. ಇದರಿಂದಾಗಿ ಒಮ್ಮೆ ನಾವು ಸೋಂಕಿಗೆ ಒಳಗಾದರೆ ಇತರರಿಗೂ ಸೋಂಕು ತಗುಲುತ್ತದೆ ಎಂದು ಬಿಹಾರದ ಅತಿದೊಡ್ಡ ವೈದ್ಯಕೀಯ ಕಾಲೇಜು ಮತ್ತು ಆರೋಗ್ಯ ಕೇಂದ್ರವಾಗಿರುವ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ವಿಶ್ವದ ವಿವಿಧ ಭಾಗಗಳಿಂದ ಕೋವಿಡ್‌ -19 ರೋಗಿಗಳನ್ನು ಹಿಂದಕ್ಕೆ ಕರೆ ತಂದ ಏರ್ ಇಂಡಿಯಾ ಪೈಲಟ್‌ಗಳು ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದು, ವಿಮಾನಗಳಲ್ಲಿ ಬಳಸುತ್ತಿರುವ ಪಿಪಿಇ ಕಿಟ್‌ಗಳ ಗುಣಮಟ್ಟವು ಕಳಪೆ ಆಗಿದೆ ಎಂದು ದೂರಿಕೊಂಡಿದ್ದಾರೆ. ಸರ್ಕಾರವು ಕೂಡಲೇ ಎಚ್ಚತ್ತುಕೊಂಡು ಗುಣ ಮಟ್ಟದ ಪಿಪಿಇ ಕಿಟ್‌ ಗಳನ್ನು ಒದಗಿಸಿದರೆ ಮಾತ್ರ ವೈದ್ಯಕೀಯ ಸಿಬ್ಬಂದಿ ಸುರಕ್ಷಿತವಾಗಿರಲು ಸಾದ್ಯ.

Tags: Covid 19lack of PPEmumbaiNursesಕೋವಿಡ್-19ನರ್ಸ್‌ಪಿಪಿಇ ಕೊರತೆಮುಂಬೈ
Previous Post

‌ಆರ್ಥಿಕ ಸಂಕಷ್ಟದಿಂದ ಹೊರಬರಲು ಸರಕಾರಕ್ಕೆ ರಘುರಾಂ ರಾಜನ್‌ ನೀಡಿದ್ದಾರೆ ಸಲಹೆಗಳು

Next Post

ತುಳು, ಕನ್ನಡ ಭಾಷೆಗಳಿಗೆ ಅಪಾಯ ಎಲ್ಲಿಂದ?

Related Posts

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”
Top Story

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

by ಪ್ರತಿಧ್ವನಿ
March 4, 2026
0

ಮಾಗಡಿ :  ತಾಲೂಕಿನ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್ ಗಳನ್ನು ಈಗಾಗಲೇ ಕರೆಯಲಾಗಿದೆ” ಎಂದು ಜಲಸಂಪನ್ಮೂಲ...

Read moreDetails
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

March 4, 2026
Next Post
ತುಳು

ತುಳು, ಕನ್ನಡ ಭಾಷೆಗಳಿಗೆ ಅಪಾಯ ಎಲ್ಲಿಂದ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada