• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಟ್ರಂಪ್ ಮೆಚ್ಚಿಸುವ ಪ್ರಯತ್ನ: ಮೋದಿ ಸರಕಾರದಿಂದ “ಹೈನುಗಾರ”ರಿಗೆ ಬರೆ?

by
February 17, 2020
in ದೇಶ
0
ಟ್ರಂಪ್ ಮೆಚ್ಚಿಸುವ ಪ್ರಯತ್ನ: ಮೋದಿ ಸರಕಾರದಿಂದ “ಹೈನುಗಾರ”ರಿಗೆ ಬರೆ?
Share on WhatsAppShare on FacebookShare on Telegram

ಫೆಬ್ರವರಿ 24-25ರಂದು ದೊಡ್ಡಣ್ಣ ಅಮೇರಿಕಾದ ವಿವಾದಾತ್ಮಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಗುಜರಾತ್‍ನ ಮೂಲಕ ಅವರು ಭಾರತ ಪ್ರವಾಸ ಆರಂಭಿಸಲಿದ್ದಾರೆ. ಅಹಮದಾಬಾದ್‍ನಲ್ಲಿ ಟ್ರಂಪ್ -ಮೋದಿ ಜುಗಲ್‍ಬಂದಿ ಕಾರ್ಯಕ್ರಮದಲ್ಲಿ 1.5 ಲಕ್ಷ ಜನ ಸೇರಲಿದ್ದಾರೆ ಎಂದು ಅಮೇರಿಕಾದ ಅಧಿಕಾರಿಗಳೇ ಘೋಷಿಸಿದ್ದಾರೆ. ಟ್ರಂಪ್ ಕಣ್ಣಿಗೆ ಸ್ಥಳೀಯ ಕೊಳಗೇರಿಗಳು ಬೀಳದಿರಲಿ ಎಂಬ ಕಾರಣಕ್ಕೆ ದೊಡ್ಡ ಗೋಡೆ ನಿರ್ಮಾಣವಾಗುತ್ತಿದೆ. ಇವೆಲ್ಲದರ ನಡುವೆ ಇನ್ನೊಂದು ಆಘಾತಕಾರಿ ಸುದ್ದಿ ಭಾರತದ ಬಡ ರೈತ-ಹೈನುಗಾರರನ್ನು ಅಪ್ಪಳಿಸಿದೆ.

ADVERTISEMENT

ಈವರೆಗೆ ಭಾರತದ ಹೈನೋದ್ಯಮ ಹಾಗೂ ಕುಕ್ಕುಟೋದ್ಯಮ ಅಮೇರಿಕಾ ಸಂಸ್ಥೆಗಳಿಗೆ ಮುಕ್ತವಾಗಿರಲಿಲ್ಲ. ಏಕೆಂದರೆ, ಒಂದೊಮ್ಮೆ ಅಮೇರಿಕಾ ತನ್ನ ಹೈನುಗಾರಿಕಾ ಹಾಗೂ ಕುಕ್ಕುಟೋದ್ಯಮದ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡಲಾರಂಭಿಸಿದರೆ, ಕನಿಷ್ಠ 80 ಲಕ್ಷ ಕುಟುಂಬಗಳು ಸಮಸ್ಯೆ ಎದುರಿಸಬಹುದು ಎಂಬ ಕಾರಣಕ್ಕೆ ಭಾರತ ಬಿಗಿ ನೀತಿ ಅನುಸರಿಸಿತ್ತು. ಆದರೆ ಇದೀಗ ಅತ್ಯಂತ ವಿಶ್ವಾಸಾರ್ಹ ಅಮೇರಿಕಾ ಮಾಧ್ಯಮಗಳ ಪ್ರಕಾರ ಟ್ರಂಪ್ ಭೇಟಿ ಸಮಯದಲ್ಲಿ ಭಾರತ, ಈ ನೀತಿಯನ್ನು ಸಡಿಲಗೊಳಿಸಿ, ಅಮೇರಿಕಾದ ಹೈನುಗಾರಿಕಾ ಹಾಗೂ ಕುಕ್ಕುಟೋದ್ಯಮದ ಉತ್ಪನ್ನಗಳಿಗೆ ಭಾರತ ಮಾರುಕಟ್ಟೆಗೆ ಪ್ರವೇಶಿಸಲು ಅನುವು ಮಾಡಿಕೊಡುವ ಘೋಷಣೆ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ಭಾರತದ ರೈತರ ಮೇಲೆ ಇನ್ನೊಂದು ಸುತ್ತಿನ ಗದಾ ಪ್ರಹಾರಕ್ಕೆ ಮೋದಿ ಸರಕಾರ ಸಜ್ಜಾಗಿದೆ.

ಅಮೇರಿಕಾ ಸುದ್ದಿ ಮಾಧ್ಯಮಗಳ ಪ್ರಕಾರ, ಟ್ರಂಪ್ ಮನವೊಲಿಕೆ ಪ್ರಯತ್ನದ ಭಾಗವಾಗಿ, 5% ತೆರಿಗೆ ಮೂಲಕ ನಿರ್ದಿಷ್ಟ ಪ್ರಮಾಣದ ಹೈನುಗಾರಿಕಾ ಉತ್ಪನ್ನಗಳನ್ನು ಅಮೇರಿಕಾದಿಂದ ಆಮದು ಮಾಡಿಕೊಳ್ಳಲು ಭಾರತ ಸಜ್ಜಾಗಿದೆ. ಜತೆಗೆ ಅಮೇರಿಕಾದಿಂದ ಆಮದು ಮಾಡಿಕೊಳ್ಳಲಾಗುವ ಚಿಕನ್ ಹಾಗೂ ಇತರ ಕುಕ್ಕುಟೋದ್ಯಮದ ಸಿದ್ದ ಆಹಾರ ಪದಾರ್ಥಗಳ ಮೇಲೆ ದೊಡ್ಡ ಮಟ್ಟದಲ್ಲಿ (100 ಶೇಕಡಾದಿಂದ 25%ಕ್ಕೆ) ತೆರಿಗೆ ಇಳಿಸಲು ಭಾರತ ಮುಂದಾಗಿದೆ. ಈ ಎಲ್ಲಾ ಹೊಸ ಒಪ್ಪಂದಗಳನ್ನು ಟ್ರಂಪ್ ಹಾಗೂ ಮೋದಿ ನವದೆಹಲಿಲ್ಲಿ 25ಂದು ಘೋಷಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.

ಭಾರತದ ಮಾಧ್ಯಮಗಳು ಮೋದಿ ವಿರೋದಿ ಎಂಬುದಾದರೆ, ಅಮೇರಿಕಾ ಮಾಧ್ಯಮ ವರದಿಗಳು, ಅಲ್ಲಿನ ಅಧಿಕಾರಿಗಳ ಹೇಳಿಕೆಗಳನ್ನೇ ಗಮನದಲ್ಲಿಟ್ಟುಕೊಂಡರೆ, ಪ್ರಧಾನಿ ಮೋದಿಯವರ ಈ ನಿರ್ಧಾರದ ಹಿಂದಿರುವುದು, ಒಂದು ಗುಂಪಿನ ಕೈಗಾರಿಕೋದ್ಯಮಿಗಳನ್ನು ಮೆಚ್ಚಿಸುವ ಪ್ರಯತ್ನ. ಅದು ಯಾವ ಗುಂಪು ಅನ್ನುವುದು ಓದುಗರ ಊಹೆಗೆ ಬಿಟ್ಟದ್ದು. ಭಾರತದ ಕೃಷಿ ಕ್ಷೇತ್ರ ಐತಿಹಾಸಿಕ ಕುಸಿತ ಕಂಡಿರುವಾಗ, ದಿನ ನಿತ್ಯ ರೈತರ ಆತ್ಮಹತ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮೋದಿ ಸರಕಾರ ರೈತರ ಬೆನ್ನೆಲುಬಾಗಿರುವ ಹೈನುಗಾರಿಕೆಯ ನಡು ಮುರಿಯಲು ಹೊರಟಿರುವುದು ಹೊಸ ದುರಂತದ ಅಧ್ಯಾಯವೊಂದಕ್ಕೆ ಮುನ್ನುಡಿ ಹಾಡಿದೆ.

ಕೆಎಂಎಫ್‍ನ ಅಧಿಕಾರಿಗಳ ಪ್ರಕಾರ, ಇಂತಹ ನಿರ್ಧಾರ ಯಾರ ಗಮನಕ್ಕೂ ಬಂದಿಲ್ಲ. “ಭ್ರಷ್ಟ ಆಡಳಿತದಿಂದಾಗಿ ಕೆಎಂಎಫ್ ಇನ್ನೂ ವಿದೇಶಿ ಕಂಪನಿಗಳಿಗೆ ಸ್ಪರ್ಧೆ ನೀಡುವ ಮಟ್ಟಕ್ಕೆ ಬೆಳೆದಿಲ್ಲ. ಇಲ್ಲಿ ರೈತರ ಹೆಸರಿನಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದೆ. ಆದರೆ ಉತ್ತಮ ಮಾರುಕಟ್ಟೆ ಕಾರಣದಿಂದಾಗಿ, ಎಲ್ಲವೂ ಸರಿ ಇದೆ ಎನ್ನುವ ಭಾವನೆ ಹೈನುಗಾರರಲ್ಲಿದೆ. ಒಂದೊಮ್ಮೆ ಅಮೇರಿಕಾದ ಹೈನುಗಾರಿಕಾ ಉತ್ಪನ್ನಗಳಿಗೆ ನಮ್ಮ ಮಾರುಕಟ್ಟೆಯ ದಿಡ್ಡಿ ಬಾಗಿಲು ತೆಗೆದರೆ ಕರ್ನಾಟದಲ್ಲೆ ಸುಮಾರು 15 ಲಕ್ಷ ಕುಟುಂಬಗಳು ಬೀದಿಗೆ ಬೀಳಲಿವೆ,” ಎನ್ನುತ್ತಾರೆ ಈ ಅಧಿಕಾರಿ.

ಕುಕ್ಕುಟೋದ್ಯಮ ಕ್ಷೇತ್ರದ ಸವಾಲುಗಳು ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ದುರಂತವೆಂದರೆ, ಭಾರತದ ಮಾಧ್ಯಮಗಳಲ್ಲಿ ಈ ಹೊಸ ಪ್ರಸ್ತಾಪಗಳು ಸುದ್ದಿಯಾಗುತ್ತಿಲ್ಲ. ನಮ್ಮ ರೈತ ಸಂಘಟನೆಗಳು ಈಗಾಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಟ್ರಂಪ್ ಮೆಚ್ಚಿಸಲು ಕೋಟ್ಯಂತರ ಜನರ ಬದುಕನ್ನು ಬೀದಿಪಾಲು ಮಾಡಲು ಮೋದಿಗೆ ಬಿಡಬಾರದು.

Tags: ಟ್ರಂಪ್ಮೋದಿರಫ್ತು
Previous Post

ಪೌರತ್ವ ತಿದ್ದುಪಡಿ ಕಾಯ್ದೆಗೆ ಬಲಿಯಾಗುತ್ತಾ ಮಹಾರಾಷ್ಟ್ರ ಸರ್ಕಾರ?

Next Post

ಇತಿಹಾಸ ಕಾಣದ ಆರ್ಥಿಕ ಕುಸಿತದತ್ತ ಭಾರತ; ಆರ್ಥಿಕತೆ ಎಂದರೇನು? ದೇಶದ ಪ್ರಸ್ತುತ ಸ್ಥಿತಿ ಹೇಗಿದೆ?

Related Posts

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”
Top Story

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

by ಪ್ರತಿಧ್ವನಿ
March 4, 2026
0

ಮಾಗಡಿ :  ತಾಲೂಕಿನ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್ ಗಳನ್ನು ಈಗಾಗಲೇ ಕರೆಯಲಾಗಿದೆ” ಎಂದು ಜಲಸಂಪನ್ಮೂಲ...

Read moreDetails
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

March 4, 2026
Next Post
ಇತಿಹಾಸ ಕಾಣದ ಆರ್ಥಿಕ ಕುಸಿತದತ್ತ ಭಾರತ; ಆರ್ಥಿಕತೆ ಎಂದರೇನು? ದೇಶದ ಪ್ರಸ್ತುತ ಸ್ಥಿತಿ ಹೇಗಿದೆ?

ಇತಿಹಾಸ ಕಾಣದ ಆರ್ಥಿಕ ಕುಸಿತದತ್ತ ಭಾರತ; ಆರ್ಥಿಕತೆ ಎಂದರೇನು? ದೇಶದ ಪ್ರಸ್ತುತ ಸ್ಥಿತಿ ಹೇಗಿದೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada