37 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಇರಾನ್ನ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಮರಣ ನಂತರದ ಉತ್ತರಾಧಿಕಾರಿಯ ಬಗ್ಗೆ ಪ್ರಶ್ನೆ ಹುಟ್ಟುಹಾಕುತ್ತಿದೆ. ಖಮೇನಿ ಹತ್ಯೆಯ ನಂತರದ ಸಂಕೀರ್ಣ ಉತ್ತರಾಧಿಕಾರ ಪ್ರಕ್ರಿಯೆ ಏನು ಗೊತ್ತೆ ?

ಇರಾನ್ನ ಸಂವಿಧಾನದ ಪ್ರಕಾರ, ದೇಶದ ನಾಯಕತ್ವ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಮತ್ತು ಆಡಳಿತ ನಡೆಸಲು ಒಂದು ಮಂಡಳಿಯನ್ನು ರಚಿಸಲಾಗಿದೆ. ಈ ಮಂಡಳಿಯಲ್ಲಿ ಇರಾನ್ನ ಹಾಲಿ ಅಧ್ಯಕ್ಷರು, ದೇಶದ ನ್ಯಾಯಾಂಗ ಮುಖ್ಯಸ್ಥರು ಹಾಗೂ ಸಂಸತ್ತಿಗೆ ಸಲಹೆ ನೀಡುವ ಮತ್ತು ಪರಮೋಚ್ಛ ನಾಯಕರಿಗೆ ಮಾರ್ಗದರ್ಶನ ನೀಡುವ ಎಕ್ಸ್ಪಿಡಿಯೆನ್ಸಿ ಕೌನ್ಸಿಲ್ ಆಯ್ಕೆ ಮಾಡಿದ ಗಾರ್ಡಿಯನ್ ಕೌನ್ಸಿಲ್ನ ಒಬ್ಬ ಸದಸ್ಯರು ಸೇರಿರುತ್ತಾರೆ.

ಇರಾನ್ ಕಾನೂನು ಪ್ರಕಾರ 88 ಸದಸ್ಯರ “ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್” ಹೊಸ ಸುಪ್ರೀಂ ನಾಯಕರನ್ನು ಆಯ್ಕೆ ಮಾಡುತ್ತದೆ.ಈ ಮಂಡಳಿಯಲ್ಲಿ ಸಂಪೂರ್ಣವಾಗಿ ಶಿಯಾ ಧಾರ್ಮಿಕ ಪಂಡಿತರು ಇದ್ದು, ಇವರನ್ನು ಪ್ರತಿ ಎಂಟು ವರ್ಷಗಳಿಗೊಮ್ಮೆ ಜನರಿಂದ ಆಯ್ಕೆ ಮಾಡಲಾಗುತ್ತದೆ. ಆದರೆ ಅವರ ಅಭ್ಯರ್ಥಿತ್ವವನ್ನು ಇರಾನ್ನ ಸಂವಿಧಾನ ಪರಿವೀಕ್ಷಕ ಸಂಸ್ಥೆಯಾಗಿರುವ ಗಾರ್ಡಿಯನ್ ಕೌನ್ಸಿಲ್ ಅನುಮೋದಿಸಬೇಕು.

ಉತ್ತರಾಧಿಕಾರದ ವಿಚಾರದಲ್ಲಿ ನಡೆಯುವ ಚರ್ಚೆಗಳು ಸಾರ್ವಜನಿಕ ವಲಯದಿಂದ ದೂರ ನಡೆಯುತ್ತದೆ.ಅಯತೊಲ್ಲಾ ಅರಾಫಿ ಅವರನ್ನು ಮಧ್ಯಂತರ ಸರ್ವೋಚ್ಚ ನಾಯಕನನ್ನಾಗಿ (Interim Supreme Leader) ನೇಮಕ ಮಾಡಲಾಗಿದೆ.ಅಯತೊಲ್ಲಾ ಅರಾಫಿ ಅವರು ಇರಾನ್ನ ಶೈಕ್ಷಣಿಕ ಮತ್ತು ಧಾರ್ಮಿಕ ವಲಯದಲ್ಲಿ ಅತೀವ ಪ್ರಭಾವ ಹೊಂದಿರುವ ವ್ಯಕ್ತಿ. ಅವರು ಈ ಹಿಂದೆ ಇರಾನ್ನ ಪ್ರಸಿದ್ಧ ಧಾರ್ಮಿಕ ಶಿಕ್ಷಣ ಸಂಸ್ಥೆಗಳ (Seminaries) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಖಮೇನಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಇವರು, ಈಗ ದೇಶದ ಸಂಕಷ್ಟದ ಸಮಯದಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.






