ವಸತಿ ಯೋಜನೆಗಳಲ್ಲಿ ಲಂಚದ ವ್ಯವಹಾರ ನಡೆಯುತ್ತಿರುವ ಬಗ್ಗೆ ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ (BR Patil) ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಸುನಿಲ್ ಕುಮಾರ್ (Sunil kumar) ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು ಹೊಸದಲ್ಲ ಎಂದಿದ್ದಾರೆ.
ಈ ರೀತಿ ಹಲವು ಬಾರಿ ಸರ್ಕಾರದಲ್ಲಿನ ಭ್ರಷ್ಟಾಚಾರ ಬಗ್ಗೆ ಕಾಂಗ್ರೆಸ್ ಶಾಸಕರೇ ಒಪ್ಪಿಕೊಂಡಿದ್ದಾರೆ.ಹೀಗೆ ಆಡಳಿತ ಪಕ್ಷದ ಶಾಸಕರೇ ಲಂಚ ಕೊಡಬೇಕೆಂದು ಹೇಳಿದ್ದು ಕಳವಳದ ಸಂಗತಿ.ಇದರ ಬಗ್ಗೆ ಸರ್ಕಾರ ತನಿಖೆಗೆ ಒಳಪಡಿಸಲಿ. ಇವತ್ತು ಎಲ್ಲಾ ಇಲಾಖೆಯಲ್ಲಿ 60 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರ ನಡೀತ್ತಿದೆ ಎಂದು ಆರೋಪಿಸಿದ್ದಾರೆ.

ಇಷ್ಟೆಲ್ಲಾ ಭ್ರಷ್ಟಾಚಾರ ನಡೆಯುತ್ತಿದ್ದರೂ, ತಮ್ಮದೇ ಪಕ್ಷದ ಶಾಸಕರು ಬಹಿರಂಗವಾಗಿ ಆರೋಪ ಮಾಡುತ್ತಿದ್ದರೂ,ದೃತರಾಷ್ಟ್ರನ ರೀತಿಯಲ್ಲಿ ಅದೆಲ್ಲವನ್ನು ಸಿದ್ದರಾಮಯ್ಯ ಇದೆಲ್ಲವನ್ನೂ ನೋಡಿ ಸುಮ್ಮನಾಗುತ್ತಿದ್ದಾರೆ. ಇವತ್ತು ಬಿ ಆರ್ ಪಾಟೀಲ್ ಹೇಳಿದ್ದಾರೆ, ನಾಳೆ ಎಲ್ಲಾ ಶಾಸಕರು ಇದನ್ನೇ ಹೇಳ್ತಾರೆ ಎಂದು ಶಾಸಕ ಸುನೀಲ್ ಕುಮಾರ್ ಕಿಡಿ ಕಾರಿದ್ದಾರೆ.







