ಅಹಮದಾಬಾದ್ ನಲ್ಲಿ (Ahemadabad) ನಡೆದ ವಿಮಾನ ದುರಂತದಲ್ಲಿ (Plane crash) 274 ಜನ ಪ್ರಾಣ ಕಳೆದುಕೊಂಡ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಘೋರ ದುರಂತ ಸಂಭವಿಸಿದೆ. ಕೇದಾರನಾಥಕ್ಕೆ (Kedarnath) ತೆರಳುತ್ತಿದ್ದ ಹೆಲಿಕಾಪ್ಟರ್ (Helicopter) ಪತನವಾಗಿ 7 ಜನ ಸಾವಿಗೀಡಾಗಿದ್ದಾರೆ.

ಇಂದು (ಜೂನ್ 15) ಬೆಳಿಗ್ಗೆ 5:30 ಕ್ಕೆ ಈ ಘಟನೆ ಸಂಭವಿಸಿದೆ. ಉತ್ತರಾಖಂಡ್ ನಿಂದ ಕೇದಾರನಾಥ್ ಕಡೆಗೆ ಹೊರಟಿದ್ದ ಈ ಹೆಲಿಕಾಪ್ಟರ್ ಗೌರಿಕುಂಡದ ಬಳಿ ಅರಣ್ಯ ಪ್ರದೇಶದಲ್ಲಿ ಪತನವಾಗಿದೆ. ಈ ದುರಂತದಲ್ಲಿ ಓರ್ವ ಪೈಲಟ್, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ.
ಇನ್ನು ಈ ಘಟನೆಗೆ ಹವಾಮಾನ ವೈಪರೀತ್ಯ ಕಾರಣ ಎನ್ನಲಾಗಿದ್ದು, ಹೆಲಿಕ್ಯಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಗೆ ಪ್ರಯತ್ನ ಪಟ್ಟವೇಳೆ ಈ ಅವಘಡ ನಡೆದಿರಬಹುದು ಎನ್ನಲಾಗಿದೆ. ಈಗಾಗಲೇ ಘಟನೆ ನಡೆದ ಸ್ಥಳಕ್ಕೆ NDRF ಮತ್ತು SDRD ಸಿಬ್ಬಂದಿ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.