
ಬೆಂಗಳೂರು: ಕುಮಾರಸ್ವಾಮಿ ತನ್ನ ಮಗನ ಬೆಳವಣಿಗೆಗಾಗಿ ಸ್ವಂತ ಅಣ್ಣನ ಮಕ್ಕಳನ್ನೇ ಜೈಲಿಗೆ ಕಳುಹಿಸಿದ್ರು ಎಂದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಕುಮಾರಸ್ವಾಮಿ, ತಿರುಗೇಟು ನೀಡಿದ್ದಾರೆ.ನನ್ನ ಅಣ್ಣನ ಮಗನನ್ನು ನಾನು ಜೈಲಿಗೆ ಕಳುಹಿಸಿದ್ದೀನಿ ಅಂದಿದ್ದೀರಿ.
ಮಿಸ್ಟರ್ ಶಿವಕುಮಾರ್, ನಾನು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಿಂತು ಮಾತನಾಡ್ತಿದ್ದೇನೆ. ಕಾಫಿ ಡೇ ಸಿದ್ದಾರ್ಥ ಸಾವಿಗೆ ಕಾರಣ ಯಾರು ಅಂತಾ ಹೇಳ್ತೀರಾ..? ಎಂದು ಪ್ರಶ್ನೆ ಮಾಡಿದ್ದಾರೆ.ಜೇಡರಹಳ್ಳಿ ಅಂತಾ ಬೆಂಗಳೂರಲ್ಲಿ ಇದೆ, ವಾಸು ಅಂತಾ ಇವರ ಸ್ನೇಹಿತರು, ಮ್ಯಾನ್ ಓಲ್ ಚೇಂಬರ್ಗಳನ್ನು ಕದ್ದು ಮಾರಾಟ ಮಾಡ್ತಿದ್ದ ಶಿವಕುಮಾರ್.ನೀನು ಇವಾಗ ದೇವೇಗೌಡ್ರು ಮತ್ತೆ ಕುಮಾರಸ್ವಾಮಿ ಬಗ್ಗೆ ಮಾತಾಡ್ತೀಯಾ..?ಯಾವ ನೈತಿಕತೆ ಇದೆ ನಿನಗೆ..? ಎಂದು ಡಿ.ಕೆ ಶಿವಕುಮಾರ್ ವಿರುದ್ಧ ಏಕ ವಚನದಲ್ಲೇ ತಿರುಗೇಟು ಕೊಟ್ಟಿದ್ದಾರೆ ಕುಮಾರಸ್ವಾಮಿ. ನಾನು ರಾಜಕೀಯಕ್ಕೆ ಬಂದಾಗ ನಿಖಿಲ್ ಹುಟ್ಟಿರಲಿಲ್ಲ ಅಂದಿದ್ದೀರಿ.
ಆದರೆ ದೇವೇಗೌಡ್ರು ಆಸ್ತಿ ಕೇಳಿದ್ದೀರಿ, ಅವ್ರು ರಾಜಕಾರಣಕ್ಕೆ ಬರೋಕೆ ಮುನ್ನ ಇಂಜಿನಿಯರ್ ಆಗಿದ್ರು. ನಿಮ್ಮ ತಂದೆಯವರು ಏನ್ ಆಗಿದ್ದರು..? ಎಂದು ಚಾಟಿ ಬೀಸಿದ್ದಾರೆ. ಈ ವೇಳೆ ಕಾರ್ಯಕರ್ತರು ಸಿಡಿ ಶಿವಕುಮಾರ್.. ಸಿಡಿ ಶಿವಕುಮಾರ್ ಎಂದಾಗ, ಸಿಡಿ ಶಿವಕುಮಾರ್ ಬೇರೆ ಎಂದು ಮಾತು ಎನ್ನುತ್ತ ಮಾತು ಮುಂದುವರಿಸಿ ರೌಡಿ ಕೊತ್ವಾಲ್ ಜೊತೆ ಇದ್ದಂತ ನಿನ್ನನ್ನು, ಎಸ್ ಎಂ ಕೃಷ್ಣ ಅವರು ರಾಜಕೀಯಕ್ಕೆ ಕರೆದುಕೊಂಡು ಬಂದ್ರು, ಎಸ್.ಎಂ ಕೃಷ್ಣ ನಿನಗೆ ರಾಜಕೀಯ ಗುರುಗಳು ಅಂತಹ ಎಸ್ ಎಂ ಕೃಷ್ಣ ಕುಟುಂಬದ ಶ್ರಮ ಜೀವಿ ಸಿದ್ದಾರ್ಥ ಆತ್ಮಹತ್ಯೆ ಹೇಗೆ ಆಯ್ತು..? ಅದಕ್ಕೆ ಕಾರಣ ಯಾರು..? ಅಂತಾ ಈ ರಾಜ್ಯದ ಜನರ ಮುಂದೆ ಬಿಚ್ಚಿಡುವ ತಾಕತ್ ನಿನಗೆ ಇದೆಯಾ..? ಎಂದು ಟೀಕಿಸಿದ್ದಾರೆ.
2008 ರಿಂದ 2013ರ ವರೆಗೆ ವಿಪಕ್ಷ ನಾಯಕರಾಗಿ ಯಾವುದಾದರೂ ಭ್ರಷ್ಟಾಚಾರದ ಬಗ್ಗೆ ಒಂದು ದಾಖಲೆ ಬಿಡುಗಡೆ ಮಾಡಿದ್ದೀರಾ..? ಯಾರೋ ಮಾಡಿದ್ದ ದುಡಿಮೆಯಲ್ಲಿ ನೀವು ಬಂದು ಜೀವನ ಮಾಡೋರು, ನೀವು ನಮ್ಮ ಬಗ್ಗೆ ಮಾತಾಡ್ತೀರಾ ಸಿದ್ದರಾಮಯ್ಯನವರೇ ಎಂದಿರುವ ಕುಮಾರಸ್ವಾಮಿ, ನಿಮಗೆ ಏನ್ ಯೋಗ್ಯತೆ ಇದೆ..? ಎಂದು ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ಮಾಡಿದ್ದಾರೆ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ಯಡಿಯೂರಪ್ಪನವರು, ಇದನ್ನು ಎಲ್ಲಿ ಬೇಕಿದ್ರೂ ಘಂಟಘೋಷವಾಗಿ ಹೇಳ್ತೀನಿ.
ದೇವೇಗೌಡರನ್ನು ನೀವು ಪ್ರಧಾನಿಗಳಾಗಿ ಮಾಡಿದ್ರಾ..? ಇವತ್ತು ಹೇಳ್ತೇನೆ, ಅವತ್ತು ಯಡಿಯೂರಪ್ಪಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದಿದ್ದವನು ನಾನು. ಅಗ ನಾನು ಮಾಡದಿರುವ ತಪ್ಪಿಗೆ ಬಹಳ ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದೇನೆ. ನಾನು ಇಲ್ಲಿ ದೇವರ ಸನ್ನಿಧಾನದಲ್ಲಿ ನಿಂತು ನಿಜ ಹೇಳ್ತಿದ್ದೇನೆ ಎಂದು ತಮ್ಮಿಂದ ಆಗಿರುವ ತಪ್ಪನ್ನೂ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ.