ನಾಡಪ್ರಭು ಕೆಂಪೇಗೌಡ (Kempegowda) ಟೈಟಲ್ಗಾಗಿ ಟಿ.ಎಸ್.ನಾಗಾಭರಣ (TS Nagabharana) ನ್ಯಾಯಾಲಯದ ಮೆಟ್ಟಿಲು ಏರಿದ್ರು. ನಾಡಪ್ರಭು ಕೆಂಪೇಗೌಡ ಟೈಟಲ್ ಇಡಬಾರದು, ಕೆಂಪೇಗೌಡ ಇತಿಹಾಸವನ್ನು ನಮ್ಮನ್ನು ಬಿಟ್ಟು, ಯಾರೂ ಸಿನಿಮಾ (Cinema) ಮಾಡಬಾರದು ಅಂತಾ ಸ್ಟೇ ತಂದಿದ್ರು.
ಈ ವಿಚಾರವಾಗಿ ಧರ್ಮಬೀರು ನಾಡಪ್ರಭು ಕೆಂಪೇಗೌಡ ಟೀಂ ಸ್ಟೇ ವಿರುದ್ಧವಾಗಿ ಹೋರಾಟ ನಡೆಸಿದ್ರು.ಇದೀಗ ನ್ಯಾಯಾಲಯ ಆದೇಶ ನೀಡಿದ್ದು, ಫಿಲ್ಡ್ ಚೇಂಬರ್ನಲ್ಲಿ (Film chamber) ಟೈಟಲ್ ರಿಜಿಸ್ಟರ್ ಮಾಡಿಸೋದು ಲೀಗಲ್ ಅಲ್ಲಾ ಎಂದು ತಿಳಿಸಿದೆ.
ಇದರಿಂದ ಉಪೇಂದ್ರ (upendra) ನಾಯಕನಾಗಿ ನಟಿಸುತ್ತಿರುವ ಧರ್ಮಬೀರು ನಾಡಪ್ರಭು ಕೆಂಪೇಗೌಡ ತಂಡಕ್ಕೆ ಗೆಲುವು ಸಿಕ್ಕಿದೆ. ಇತ್ತೀಚೆಗೆ ಡಾಲಿ (dali Dhananjaya) ನಾಯಕತ್ವದಲ್ಲಿ ಟಿ.ಎಸ್.ನಾಗಾಭರಣ ನಾಡಪ್ರಭು ಕೆಂಪೇಗೌಡ ಅನೌನ್ಸ್ ಮಾಡಿದ್ರು. ಇದೀಗ ನಾಗಾಭರಣಗೆ ನ್ಯಾಯಾಲಯದಲ್ಲಿ ಸೋಲು ಅನುಭವಿಸಿದೆ.