ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಚರ್ಚೆಯಾಗ್ತಿರುವ ಸಿಎಂ (Cm) ಬದಲಾವಣೆ ವಚಾರದ ಬಗ್ಗೆ ಚಿತ್ರದುರ್ಗದಲ್ಲಿ ಹರಿಹರ ಪೀಠದ ವಚನಾನಂದ ಶ್ರೀ (Vachanananda sri) ಅಚ್ಚರಿ ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಡಿ.ಕೆ ಶಿವಕುಮಾರ್ಗೆ (Dk shivakumar) ಸಿಎಂ ಆಗೋ ಯೋಗ ಇದೆ ಅಂತ ವಚನಾನಂದ ಶ್ರೀ ಹೇಳಿದ್ದಾರೆ.
![](https://pratidhvani.com/wp-content/uploads/2024/07/IMG_8496.jpeg)
ಯಾವುದು ಬರಬಾರದು ಅಂತಿರತ್ತೋ ಎಂದಿಗೂ ಅದು ಬರಲ್ಲ. ಯಾವುದು ಬರಬೇಕು ಅಂದಿದ್ದು ತಪ್ಪಲ್ಲ, ಎಲ್ಲರಿಗೂ ಒಂದು ಅವಕಾಶ ಬರಲಿದೆ, ಹಾಗೇ ಡಿಕೆಶಿಗೂ ಕೂಡ ಎಂದು ಹೇಳಿದ್ದಾರೆ. ಈಗಾಗಲೇ ಚಂದ್ರಶೇಖರನಾಥ ಸ್ವಾಮೀಜಿ (Chandra shekara swamiji) e ໐ (congress) ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು ಇದೀಗ ವಚನಾನಂದ ಶ್ರೀಗಳ ಸರದಿ.
ಇನ್ನು, ಮುಂಬರುವ ದಿನಗಳಲ್ಲಿ ಡಿಕೆಶಿಗೆ ಸಿಎಂ ಆಗೋ ಯೋಗ ಇದೆ ಅಂತಾ ಹೇಳಿದ್ದಷ್ಟೇ ಅಲ್ಲದೇ. ಅಲ್ಲದೇ ಡಾ. ಜಿ ಪರಮೇಶ್ವರ್ ಪರವೂ ವಚನಾನಂದ ಶ್ರೀ ಬ್ಯಾಟಿಂಗ್ ಮಾಡಿದ್ದು, ದಲಿತ ಸಿಎಂ (Dalit cm) ಬಗ್ಗೆಯೂ ದನಿಯೆತ್ತಿದ್ದಾರೆ