ನಮ್ಮಲಿ ವೀಳ್ಯದೆಲೆಗೆ ಹಿಂದಿನಿಂದಲೂ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅದರಲ್ಲಿ ಕೂಡ ಪೂಜೆಯ ಸಂದರ್ಭದಲ್ಲಿ ವೀಳ್ಯದೆಲೆಗೆ ಹೆಚ್ಚು ಬಳಸ್ತಾರೆ ,ಮಾತ್ರವಲ್ಲದೆ ನಮ್ಮ ಹಿರಿಯರು ಪ್ರತಿನಿತ್ಯ ಊಟದ ನಂತರ ವೀಳ್ಯದೆಲೆ ಮತ್ತು ಅಡಿಕೆಯನ್ನು ತಿನ್ನುತ್ತಲಿದ್ರು.. ಆದರೆ ಇತ್ತೀಚಿನ ದಿನಗಳಲ್ಲಿ ವೀಳ್ಯದೆಲೆ ಮತ್ತು ಅಡಿಕೆಯನ್ನು ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ, ಕಾರಣ ಸಾಕಷ್ಟಿವೆ.. ಇನ್ನು ಆಯುರ್ವೇದದಲ್ಲಿ ವೀಳ್ಯದೆಲೆಯನ್ನ ಸಾಕಷ್ಟು ಔಷಧಿಗಳನ್ನ ತಯಾರಿಸಲು ಬಳಸಿಕೊಳ್ಳಲಾಗುತ್ತದೆ ಹಾಗೂ ವೀಳ್ಯದೆಲೆಯನ್ನ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ವೀಳ್ಯದೆಲೆಯ ಆರೋಗ್ಯ ಪ್ರಯೋಜನಗಳು ಏನೆಲ್ಲ ಎಂಬುದರ ಮಾಹಿತಿ ಹೀಗಿದೆ..
ಮಧುಮೇಹವನ್ನು ನಿಯಂತ್ರಿಸುತ್ತದೆ
ವೀಳ್ಯದೆಲೆಯಲ್ಲಿ ಟ್ಯಾನಿನ್ ಎಂಬ ಅಂಶವಿದೆ. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ, ಹಾಗೂ ಇದರಲ್ಲಿ ಇರುವಂತಹ ಗ್ರಂಥ ಫಾಲಿಪೆನಾಲ್ ಮೇಧೋಜೀರಕ ಗ್ರಂಥಿಯ ಕೋಶಕ್ಕೆ ಫ್ರೈ ಯಾರ್ಡಿಕಲ್ನಿಂದ ಹಾನಿಯಾಗದಂತೆ ತಡೆಯುತ್ತದೆ. ಇನ್ನು ಮಧುಮೇಹ ಇರುವವರಲ್ಲಿ ತೂಕ ಇಳಿಯುವುದನ್ನು ಕೂಡ ತಡೆಯುತ್ತದೆ.
ಗಾಯವನ್ನು ಬೇಗ ಒಣಗಿಸುತ್ತದೆ
ಟೈಪ್ 1 ಮಧುಮೇಹ ಇರುವವರಲ್ಲಿ ಗಾಯವಾದರೆ ಬೇಗನೆ ಒಣಗುವುದಿಲ್ಲ..ಇಂತಹ ಸಮಯದಲ್ಲಿ ವೀಳ್ಯದೆಲೆಯು ತುಂಬಾನೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.. ದೇಹದಲ್ಲಿ ಇರುವಂತಹ ಫ್ರೈ ಯಾರ್ಡಿಕಲ್ನಿಂದ ನಿಂದಾಗಿ ಗಾಯು ಒಣಗಲು ತುಂಬಾನೇ ಸಮಯವನ್ನು ತೆಗೆದುಕೊಳ್ಳುತ್ತದೆ.. ವೀಳ್ಯದೆಲೆನ ಚೆನ್ನಾಗಿ ಜಜ್ಜಿ ಅದರ ರಸವನ್ನ ಗಾಯದ ಮೇಲೆ ಹಚ್ಚಿ ಹಾಗೆ ಬಿಡುವುದರಿಂದ ಗಾಯ ಬೇಗನೆ ಒಣಗುತ್ತದೆ..
ಹಲ್ಲುಗಳ ಆರೋಗ್ಯಕ್ಕೆ ಉತ್ತಮ
ವೀಳ್ಯದೆಲೆ ಮತ್ತೆ ಅಡಿಕೆಯನ್ನು ಜಗಿಯುವುದರಿಂದ ಹಲ್ಲು ನೋವು ಅಥವಾ ಕ್ಯಾವಿಟಿಸ್ ಬೇಗನೆ ಕಡಿಮೆಯಾಗುತ್ತದೆ.. ಇನ್ನು ಕೆಲವರ ಪ್ರಕಾರ ವೀಳ್ಯದೆಲೆ ಮತ್ತು ಅಡಿಕೆಯನ್ನು ಸೇವಿಸುವುದರಿಂದ ಹಲ್ಲುಗಳು ಕೆಂಪಾಗುವುದು ಎಂದು, ಹೌದು ಆದರೆ ಪ್ರತಿದಿನಕ್ಕಿಂತಲೂ ವಾರಕ್ಕೆ ಎರಡರಿಂದ ಮೂರು ಬಾರಿ ವೀಳ್ಯದೆಲೆ ಮತ್ತು ಅಡಿಕೆಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತಿದೆ.
ಇದಲ್ಲದರ ಜೊತೆಗೆ ಕೆಮ್ಮು ಅಥವಾ ಶೀತ, ಕಫ ಕಟ್ಟಿದಾಗ ವೀಳ್ಯದೆಲೆಯನ್ನ ಸಾಸಿವೆಯಲ್ಲಿ ನೆನೆಸಬೇಕು ನಂತರ ಸ್ವಲ್ಪ ಬಿಸಿ ಮಾಡಿ ಎದೆಯ ಮೇಲೆ ಹಚ್ಚುವುದರಿಂದ ಕಫ ಬೇಗನೆ ಕಡಿಮೆಯಾಗುತ್ತದೆ. ಇನ್ನು ಮಕ್ಕಳಿಗೆ ಜೇನುತುಪ್ಪದ ಜೊತೆಗೆ ವೀಳ್ಯದೆಲೆಯ ರಸವನ್ನು ಹಾಕಿ ಕುಡಿಸಿದರೆ ಒನಕೆಮ್ಮು ಮತ್ತು ಕಫ ತಕ್ಷಣಕ್ಕೆ ನಿಯಂತ್ರಣ ಗೊಳ್ಳುತ್ತದೆ.