ದರ್ಶನ್ & ಗ್ಯಾಂಗ್ (Darshan & gang) ಸದ್ಯ ಅಂದರ್ ಆಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case), ಇದೀಗ ಕನ್ನಡ ಸ್ವಾರ್ ನಟ, ರೇಣುಕಾಸ್ವಾಮಿ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ. ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ನೈತಿಕ ಬೆಂಬಲಕ್ಕೆ ನಿಂತಿದ್ದಾರೆ.
![](https://pratidhvani.com/wp-content/uploads/2024/06/IMG_8430-1.jpeg)
ಸ್ಟಾರ್ ನಟ ಧ್ರುವ ಸರ್ಜಾ (Druva sarja) ಇಂಥ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ. ಧ್ರುವ ಅಭಿಮಾನಿ ಸಂಘದ ಅಧ್ಯಕ್ಷ ರೇಣುಕಾಸ್ವಾಮಿ ಕುಟುಂಬಸ್ಥರನ್ನ ಭೇಟಿ ಮಾಡಿ, ಸಾಂತ್ವನ ಹೇಳಿ,ಜೊತೆಗೆ ಧನಸಹಾಯ ಮಾಡಿದ್ರು.
ಈ ವೇಳೆ ದೂರವಾಣಿ ಮೂಲಕ ನಟ ಧ್ರುವ ಸರ್ಜಾ ಕೂಡ ರೇಣುಕಾಸ್ವಾಮಿ ಪೋಷಕರ ಜೊತೆ ಮಾತನಾಡಿದ್ದು, ನಿಮ್ಮೊಂದಿಗೆ ಸದಾ ನಾವು ಇದ್ದೀವಿ, ಏನೇ ಇದ್ದರೂ ತಿಳಿಸಿ ಎಂದು ಧೈರ್ಯ ತುಂಬುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.