ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ಕ್ಕೆ ಭರ್ಜರಿ ತಯಾರಿ ನಡೆದಿದೆ.ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಅರಂಭವಾಗಿದೆ.
ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯುವಿಗೆ ಸೋಮವಾರ ಸಂಜೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯ್ತು ಮರದ ಅಂಬಾರಿ ಕಟ್ಟುವ ವೇಳೆಗೆ ಭಾರೀ ಮಳೆ ಸುರಿಯಿತು.
ಸತತ ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಯ ನಡುವೆಯೇ ಗಜಪಡೆ ಕ್ಯಾಪ್ಟನ್ ಅಭಿಮನ್ಯುವಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯ್ತು. ಅರ್ಚಕ ಪ್ರಹ್ಲಾದ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನೆರವೇರಿತು.ಸಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಂಬಾರಿ ಕಟ್ಟುವ ಕಾರ್ಯಕ್ಕೆ ಚಾಲನೆ ಕೊಟ್ಟಿತು. ಅರಮನೆ ಆವರಣದ ಮೂಲಕ ಸಾಗಿ ಬಲರಾಮ ದ್ವಾರದ ಮೂಲಕ ಹೊರಬಂದು ತಾಲೀಮು ನಡೆಸಿದ ಆನೆಗಳು ಸುರಿಯುತ್ತಿದ್ದ ಮಳೆಯ ನಡುವೆಯೇ ರಸ್ತೆಯಲ್ಲಿ ಸಾಗಿದ್ವು.

ಈ ಬಾರಿಯೂ ಅಂಬಾರಿ ಹೊರುವ ಫೇವರಿಟ್ ಆಗಿರುವ ಅಭಿಮನ್ಯು ಆನೆಯ ಫೋಟೋವನ್ನ ಎಲ್ಲರೂ ಕ್ಲಿಕ್ಕಿಸಿದ್ರು ಅಭಿಮನ್ಯು ಆನೆಗೆ ಮರದ ಅಂಬಾರಿ ಕಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ ತಾಲೀಮನ್ನು ಸೂಕ್ಷ್ಮವಾಗಿ ಗಮನಿಸಿದರು. ಇದೇ ವೇಳೆ ಅರಣ್ಯಾಧಿಕಾರಿ ಸೌರಭ್ ಕುಮಾರ್ ಮಾಧ್ಯಮಗಳ ಜೊತೆ ಮಾತಾಡಿದ್ರು ಅಭಿಮನ್ಯು ಜೊತೆಗೆ ಮತ್ತೆರಡು ಆನೆಗಳಿಗೂ ಮರದ ಅಂಬಾರಿ ತಾಲೀಮು ನಡೆಸಲಾಗುತ್ತದೆ.
ಮಹೇಂದ್ರ ಹಾಗೂ ಧನಂಜಯ ಆನೆಗೆ ಅಂಬಾರಿ ತಾಲೀಮು ನಡೆಸಲಾಗುವುದು. ಮೊದಲ ಬಾರಿ ದಸರಾಗೆ ಬಂದಿರುವ 4 ಆನೆಗಳೂ ಅತ್ಯತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.
ಸರತಿ ಸಾಲಿನಲ್ಲಿ ಸಾಗುವುದು, ಸೌಮ್ಯತೆ ಎಲ್ಲವೂ ಸರಿ ಇದೆ. ಅಂಬಾರಿ ಹೊರಲು ಅಭಿಮನ್ಯು ಆನೆ ನೂರಕ್ಕೆ ನೂರಿ ಫಿಟ್ ಆಗಿದೆ ಅಂತ ಡಿಸಿಎಫ್ ಸೌರಭ್ ಕುಮಾರ್ ಹೇಳಿಕೆ ನೀಡಿದ್ರು.