ʼಜೈಲರ್ʼ ಚಿತ್ರದ ಯಶಸ್ಸನ್ನು ಸಂಭ್ರಮಿಸುತ್ತಿರುವ ಸೂಪರ್ಸ್ಟಾರ್ ನಟ ರಜನಿಕಾಂತ್ ಮಂಗಳವಾರ (ಆಗಸ್ಟ್ 29) ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದಾರೆ, ಬಳಿಕ ಸೀತಾಪತಿ ಅಗ್ರಹಾರ ಶ್ರೀ ರಾಘವೇಂದ್ರ ಮಠಕ್ಕೆ ತೆರಳಿ ರಾಯರ ದರ್ಶನ ಪಡೆದರು.
ಚಿತ್ರರಂಗ ಪ್ರವೇಶಿಸುವ ಮುನ್ನ ಸಾರಿಗೆ ಸಂಸ್ಥೆಯ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಜನಿಕಾಂತ್, ಸೀತಾಪತಿ ಅಗ್ರಹಾರದಲ್ಲಿ ರಾಯರ ದರ್ಶನ ಬಳಿಕ ಜಯನಗದರ ಬಿಎಂಟಿಸಿ ಡಿಪೊ 4ಕ್ಕೆ ಭೇಟಿ ನೀಡಿ ನೌಕರರೊಡನೆ ಕೆಲ ಕಾಲ ಕುಶಲೋಪರಿ ನಡೆಸಿದರು.
ಈ ವೇಳೆ ಅಲ್ಲಿದ್ದ ನೌಕರರು ನಟ ರಜನಿಕಾಂತ್ ಜೊತೆ ಸೆಲ್ಫಿ ತೆಗೆದು ಸಂಭ್ರಮಿಸಿದರು.
ಹಳೆಯ ಸಹ್ಯೋದ್ಯೋಗಿಗಳ ಜೊತೆ ಮಾತಾಡಿದ ರಜನಿ ಕಂಡು ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ನೌಕರರೆಲ್ಲಾ ಶಾಕ್ ಆಗಿದ್ದಾರೆ. ಹತ್ತು ನಿಮಿಷ ಬಿಎಂಟಿಸಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ರು.
ಈ ಮೊದಲು ಬಿಎಂಟಿಸಿ ಕಂಡೆಕ್ಟರ್ ಆಗಿ ಕೆಲಸ ಮಾಡ್ತಿದ್ದ ರಜನಿ, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ರು. ಜೈಲರ್ ಟ್ರೈಲರ್ ಲಾಂಚ್ ವೇಳೆ ಬಿಎಂಟಿಸಿಯಲ್ಲಿ ಕೆಲಸ ಮಾಡಿದ ನೆನಪುಗಳನ್ನು ರಜನಿಕಾಂತ್ ಹಂಚಿಕೊಂಡಿದ್ರು.
ಸ್ನೇಹಿತ ರಾಜ್ ಬಹದ್ದೂರ್ ಬಿಎಂಟಿಸಿ ಡ್ರೈವರ್ ಆಗಿ, ಅದೇ ಬಸ್ ಗೆ ಕಂಡೆಕ್ಟರ್ ಆಗಿ ರಜನಿ ಕೆಲಸ ಮಾಡುತ್ತಿದ್ದರು. ಇಬ್ಬರು ಸ್ನೇಹಿತರು ಮತ್ತೆ ಬಿಎಂಟಿಸಿ ಡಿಪೋದಲ್ಲಿ ಕೆಲ ಕಾಲ ಕಳೆದ ರಜನಿಕಾಂತ್ ಫುಲ್ ಖುಷ್ ಆಗಿದ್ದಾರೆ.