ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪ ಐಎಎಸ್ ಸಿಂಧೂರಿ ಕಿತ್ತಾಟ ವಿಚಾರ ನಿಮ್ಮ ಗಲಾಟೆ ವಿಚಾರದಲ್ಲಿ ನನ್ನ ಮಗನ ಹೆಸರು ಎಳುದು ತರಬೇಡಿ ಡಿ ರೂಪಮ್ಮ ನೀನು ನನ್ನ ಒಬ್ಬಳು ಮಗಳು ಇದ್ದಂಗೆ. ನನ್ನ ತಾಯಿ ಅಂತ ತಿಳಕೊಂಡು ತಾಯಿಗೆ ನೋವು ಕೊಡುಬಾರದು ಅಂತ ನಿನ್ನಲ್ಲಿ ಕನಿಕರ ಇಲ್ಲವೇನಮ್ಮ. ರೂಪಮ್ಮ ಮತ್ತೆ ಸಿಂಧೂರಿಮ್ಮ ಇಬ್ಬರು ನನ್ನ ಮಗನ ವಿಚಾರ ಪದೇ ಪದೇ ಮಾತಾಡಿ ನಮಗೆ ನೋವು ಕೊಡಬೇಡಿ ಎಂದು.ಕೆ ರವಿ ತಾಯಿ ಗೌರಮ್ಮ ಮನವಿ ಮಾಡಿಕೊಂಡರು.
ಆ ರೂಪಮ್ಮ ನಾ ಗೆ ಹೇಳೋದು ಒಂದೇ ದಯವಿಟ್ಟು ನಾನು ಹೇಳೋದು ಕೇಳಿ ನಾನು ನಿಮ್ಮ ಅಷ್ಟು ಓದಿಲ್ಲ ಬುದ್ದಿವಂತೆ ಅಲ್ಲ ನಾನು ಹೇಳೋದು ಇಷ್ಟೇ ಕೇಳಿ ಹಿಂದೆದೂ ಮಂದೆದೂ ವಿಚಾರ ಮಾಡಿ ಮಾತಾಡಿ ನೋವು ಕೊಡಬೇಡಿ ಎಂದು ಅಲವತ್ತುಕೊಂಡರು.
ಸಿಂಧೂರಿಮ್ಮ ನನ್ನ ಮಗ ಇವರ ಇಬ್ಬರು ಕ್ಲಾಸ್ಮೇಟ್ ಜೊತೆಯಲ್ಲಿ ಮಾತಾಡಿರಬಹುದು ಒಂದು ಒಂದು ರೀತಿಯಲ್ಲಿ ಮಾತಾಡಿ. ನಮಗೆ ನೀವು ಇಬ್ಬರು ಏನು ಬೇಕಾದರು ಮಾಡಿಕೋಳ್ಳಿ ಅದ್ರೆ ನನ್ನ ಮಗ ನಾ ವಿಚಾರ ಮಾತಾಡಬೇಡಿ. ನನ್ನ ಮಗನ ಆತ್ಮಕ್ಕೆ ಶಾಂತಿ ಸಿಕಿಲ್ಲ ನೋಡಿ ಇನ್ನೋದು ಸಲ ಹೇಳ್ತೀನಿ. ನನ್ನ ಸಂಕಟ ಯಾರಿಗೂ ಬೇಡ ನನ್ನ ಮಗನ ನಾನು ನೆಪಿಸಿಕೊಂಡ್ರೆ ನೋವು ದಯವಿಟ್ಟು ಬಿಟ್ಟುಬಿಡಿ ಎಂದು ಮನವಿ ಮಾಡಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕದರಮಂಗಳ ಗ್ರಾಮದಲ್ಲಿ ಡಿಕೆ ರವಿಯನ್ನು ನಾನು ಸಾಕಿ ಬೆಳೆಸಿದ್ದೇನೆ .ಆಯ್ಯೋ ಡಿಕೆ ರವಿ ಜತೆ ಕುಸುಮಾ ೫ ವರ್ಷ ಅಷ್ಟೆ ಸಂಸಾರ ಮಾಡಿದ್ದಾಳೆ . ನನ್ನ ಸಾಕೋಕೆ ಅಂತ ಶಿವಪ್ಪ ರಮೇಶ ಇದ್ದಾರೆ ನನ್ನ ಮಗ ಅಂತನೇ ನಾನು ಅವರನ್ನು ನಂಬಿದ್ದೇನೆ. ನನ್ನ ಮಗ ಇರುವವರೆಗೂ ಮಾತ್ರ ಆಕೆ ಸೊಸೆ. ಹೀಗಾಗಿ ನೀವ್ಯಾರು ನನ್ನ ಮಗನ ಹೆಸರನ್ನು ತರಬೇಡಿ ಎಂದು ಮೂರು ಜನಕ್ಕೂ ಗೌರಮ್ಮ ಮನವಿ ಜೊತೆಗೆ ಎಚ್ಚರಿಕೆ ನೀಡಿದ್ದಾರೆ .