ಸಾವು ಬದುಕಿನ ನಡುವೆ ಹೋರಾಡುತ್ತಿದ್ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ನಿರಾಕರಿಸಿ ಕರ್ತವ್ಯ ಲೋಪ ಎಸಗಿದ 108 ಆಂಬ್ಯುಲೆನ್ಸ್ ಸಿಬ್ಬಂದಿಯ ಕರ್ಮಾಕಾಂಡವನ್ನ ತುಮಕೂರು ಜಿಲ್ಲೆ ಕೊರಟಗೆರೆ ತಹಶೀಲ್ದಾರ್ ನಹೀದಾ ಜಂಜಂ ಬಯಲಿಗೆಳೆದಿದ್ದಾರೆ.
ಇತ್ತೀಚಿಗೆ ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಚಿರತೆ ದಾಳಿಗೊಳಗಾಗಿದ್ದ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲು 108 ಸಿಬ್ಬಂದಿಗೆ ಕರೆ ಮಾಡಿದ್ದಾಗ ಸ್ಥಳದಲ್ಲೇ ಆಂಬ್ಯುಲೆನ್ಸ್ ಇದ್ದರೂ ಸ್ಥಳಕ್ಕೆ ತೆರಳದೇ ಬೇಜವಾಬ್ದಾರಿ ತೋರಿದ್ದ ಸಿಬ್ಬಂದಿ.
ವಿಚಾರ ತಿಳಿಯುತ್ತಿದ್ದಂತೆ ಕೆಂಡಾಮಂಡಲರಾದ ತಹಶೀಲ್ದಾರ್ ರಾಮಕ್ಕ ಎನ್ನುವವರ ಹೆಸರಿನಲ್ಲಿ ಕರೆ ಮಾಡಿ ವಡ್ಡಗೆರೆ ಬಳಿ ಅಪಘಾತವಾಗಿದೆ ಕೂಡಲೇ ಆಂಬ್ಯುಲೆನ್ಸ್ ಬೇಕು ಎಂದು ಕರೆ ಮಾಡಿದ್ದಾರೆ.
ತೋವಿನಕೆರೆಯಲ್ಲಿ ಆಂಬ್ಯುಲೆನ್ಸ್ ಇದೆ 1 ಘಂಟೆ ತಡವಾಗುತ್ತೆ ಖಾಸಗಿ ವಾಹನದಲ್ಲಿ ತೆರಳುವಂತೆ ಸಿಬ್ಬಂದಿ ಹಾರಿಕೆ ಉತ್ತರ ನೀಡಿದ್ದಾರೆ. ಆಂಬ್ಯುಲೆನ್ಸ್ ಇದ್ದರೂ ಸ್ಥಳಕ್ಕೆ ತೆರಳದೇ ಬೇಜವಾಬ್ದಾರಿತನ ಪ್ರದರ್ಶಿಸಿದ 108 ಸಿಬ್ಬಂದಿ.
1 ಗಂಟೆಯಾದರೂ ಆಂಬ್ಯುಲೆನ್ಸ್ ಬಾರದ್ದಕ್ಕೆ ಸ್ಥಳದಿಂದ ವಾಪಸ್ ತೆರಳಿದ ತಹಶೀಲ್ದಾರ್ ನಿರ್ಲಕ್ಷ ತೋರಿದ 108 ಆಂಬ್ಯುಲೆನ್ಸ್ ವ್ಯವಸ್ಥೆ ವಿರುದ್ದ ಸರ್ಕಾರ, ಜಿಲ್ಲಾಧಿಕಾರಿ,ಜಿಲ್ಲಾ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿದ ತಹಶೀಲ್ದಾರ್ ನಹೀದಾ ಜಂಜಂ