ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹರಿಹರೇಶ್ವರ ಕಡಲ ತೀರದಲ್ಲಿ ಗುರುವಾರ ಬೆಳ್ಳಗ್ಗೆ ಎಕೆ-47 ರೈಫಲ್ಗಳು ತುಂಬಿರುವ ಬೋಟ್ ಪತ್ತೆಯಾಗಿದ್ದು ದೋಣಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಿಚಾರ ಹೊರಬರುತ್ತಿದ್ದಂತೆ ರಾಜ್ಯದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು ಜನನಿಬಿಡ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕೃಷ್ಣ ಜನ್ಮಾಷ್ಠಮಿ, ದಹಿ ಹಂಡಿ, ಗಣೇಶೋತ್ಸವ ವೇಳೆ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗಿದೆ.

ಮಹಾರಾಷ್ಟ್ರದ ಕಡಲ ತೀರ ಜಿಲ್ಲೆಗಳಾದ ಮುಂಬೈ, ಥಾಣೆ, ಪಾಲ್ವರ್, ರಾಯಗಢ, ರತ್ನಗಿರಿ ಹಾಗು ಸಿಂಧುದುರ್ಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಪರಿಸ್ಥಿತಿ ಕುರಿತು ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಮುಂಜಾಗ್ರತ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.






