ಸಿಎಂ(cm) ಗರ್ವಭಂಗ ಮಾಡಬೇಕೆಂಬ ದೇವೇಗೌಡರ (Devegowda) ಹೇಳಿಕೆಯನ್ನ ಸವಾಲಾಗಿ ತೆಗೆದುಕೊಂಡಿರುವ ಸಿಎಂ ಸಿದ್ದರಾಮಯ್ಯ (cm siddaramaiah) ಮೂರು ದಿನಗಳ ಕಾಲ ಮೈಸೂರು (Mysore) ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ಮೈಸೂರಿಗೆ ಪ್ರಯಾಣ ಬೆಳಸಲಿರುವ ಸಿಎಂ ವರುಣಾದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ. ಬಳಿಕ ಬಿಷಪ್ ರನ್ನ ಭೇಟಿ ಮಾಡಿ ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ಬೆಳಗ್ಗೆ ಚಾಮರಾಜ ಕ್ಷೇತ್ರದ ಶಂಕರಮಠಕ್ಕೆ ಭೇಟಿ ನೀಡಿ, ಸಂಜೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ನಂತರ ಚಾಮರಾಜನಗರ ಕೈ ಅಭ್ಯರ್ಥಿ ಸುನಿಲ್ ಭೋಸ್ (Sunil bose)ನಾಮಪತ್ರ ಸಲ್ಲಿಕೆ ವೇಳೆ ಹಾಜರಾಗಲಿದ್ದಾರೆ.

ಈ ಹಿಂದೆ ಸಿದ್ದರಾಮನ್ನಯನವರ ಗರ್ವಭಂಗ ಮಾಡಬೇಕು ಎಂದು ಹೇಳಿದ್ದ ಗೌಡ್ರು, ಇತ್ತೀಚೆಗೆ ಮುಖ್ಯಮಂತ್ರಿಗಳ ಅಧಿಕಾರದ ಅಹಂ ಬಗ್ಗೆಯೂ ಮಾತನಾಡಿದ್ದರು.ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ದೇವೇಗೌಡ್ರು (HD Devegowda) ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮತ್ತೆ ಗುಡುಗಿದ್ದರು.

ಕಾಂಗ್ರೇಸ್ (congress) ನಾಯಕರು ಜೆಡಿಎಸ್ ತೆಗಿತಿನಿ ಅಂತಾರೆ. ಯಾವ ಅಧಿಕಾರದ ಮದದಿಂದ ಈ ಮಾತು ಆಡುತ್ತಿದ್ದೀರೋ, ನಿಮ್ಮ ಆ ಅಹಂನ್ನು ಇಳಿಸುತ್ತೇನೆ ಎಂದು ದೇವೇಗೌಡ್ರು ವಾರ್ನಿಂಗ್ ಕೊಟ್ಟಿದ್ರು. ಹೀಗಾಗಿ ಅಲರ್ಟ್ ಆಗಿರುವ ಸಿಎಂ ಸಿದ್ದು ಮತ್ತೆ ಮೂರು ದಿನ ಮೈಸೂರಿನಲ್ಲಿ ಠಿಕಾಣಿ ಹೂಡಲಿದ್ದಾರೆ.