• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ವಲಸೆ ಕಾರ್ಮಿಕರ ವಿಚಾರದಲ್ಲಿ ಮೋದಿ ಮಾಡಿದ 6 ಎಡವಟ್ಟುಗಳೇನು..?

by
May 22, 2020
in ದೇಶ
0
ವಲಸೆ ಕಾರ್ಮಿಕರ ವಿಚಾರದಲ್ಲಿ ಮೋದಿ ಮಾಡಿದ 6 ಎಡವಟ್ಟುಗಳೇನು..?
Share on WhatsAppShare on FacebookShare on Telegram

ಭಾರತದಲ್ಲಿ ಕರೋನಾ ಸೋಂಕು ಕೇವಲ 396 ಜನರಿಗೆ ಬಂದಿದ್ದಾಗ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದರು. ಮಾರ್ಚ್ 22ರಂದು ಜನರೆಲ್ಲರೂ ಮನೆಯೊಳಗೆ ಸೇರಿಕೊಂಡು ಸಂಜೆ 5 ಗಂಟೆಗೆ ಬೀದಿಗೆ ಬಂದು ಗಂಟೆ ಬಾರಿದ್ದರು. ಜಾಗಟೆ ಹೊಡೆದಿದ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಆ ಬಳಿಕ ಮಾರ್ಚ್ 24 ರಂದು ಭಾರತದಲ್ಲಿ ಕರೋನಾ ಸೋಂಕಿನ ಸಂಖ್ಯೆ 536 ಆಗಿತ್ತು. ಆಗ ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ದೇಶವನ್ನು ಏಪ್ರಿಲ್ 14ರ ತನಕ ಅಂದರೆ 21 ದಿನಗಳ ಕಾಲ ಲಾಕ್ಡೌನ್ ಮಾಡುತ್ತಿದ್ದೇವೆ. ಕರೋನಾ ಸೋಂಕನ್ನು ತಡೆಗೆ ಇರುವುದು ಇದೊಂದೇ ಉಪಾಯ. ಸಾಮಾಜಿಕ ಅಂತರದಿಂದ ನಾವು ಕರೋನಾ ಹೆಮ್ಮಾರಿಯನ್ನೂ ಓಡಿಸೋಣ ಎಂದು ಮಹತ್ವದ ಸಂದೇಶ ಕೊಟ್ಟಿದ್ದರು. ಜನರೂ ಕೂಡ ‘ಹೌದು ಹುಲಿಯಾ’ ಎಂದಿದ್ದರು. ಆ ನಂತರ ಮತ್ತೊಮ್ಮೆ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14 ಬೆಳಗ್ಗೆ 10 ಗಂಟೆಗೆ ಮಾತನಾಡಿ ಮತ್ತೆ 19 ನಗಳ ಕಾಲ ಎಂದರೆ ಮೇ 3 ರ ತನಕ ಲಾಕ್ಡೌನ್ ಎಂದು ಬಿಟ್ಟರು. ಈ ವೇಳೆಯಲ್ಲಿ ಕರೋನಾ ನಿಯಂತ್ರಣಕ್ಕೆ ಬಂದರೆ ಸಾಕು ಎನ್ನುವ ಉದ್ದೇಶದಿಂದ ಪ್ರಧಾನಿ ಮಾತನ್ನು ಶೇಕಡವಾರು ಜನರು ಅಕ್ಷರಶಃ ಪಾಲಿಸಿದ್ದರು. ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವ ಹುಮ್ಮಸ್ಸು ಕಳೆದುಕೊಂಡರು. ಕೇಂದ್ರ ಗೃಹ ಇಲಾಖೆ ಮೂಲಕ ಒಂದೊಂದೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಾ ಸಾಗಿದರು. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಮಹಾನ್ ಎಡವಟ್ಟುಗಳ ಪಟ್ಟಿಯನ್ನು ಕಣ್ಣಾಡಿಸಿದರೆ ಹೀಗಿದೆ.

ADVERTISEMENT

ಸ್ವತಂತ್ರ್ಯ ಭಾರತದ ಬಳಿಕ ಭಾರತ ವಿಭಜನೆಯಾದ ಕೂಡಲೇ ನಡೆದ ವಲಸೆ ಸಂಕಷ್ಟ ಈ ಬಾರಿಯ ಲಾಕ್ಡೌನ್ ಸಮಯದಲ್ಲಿ ಎದುರಾಗಿದೆ ಎಂದು ಹೇಳಲಾಗ್ತಿದೆ. ಕರೋನಾ ಸೋಂಕನ್ನು ರಾಷ್ಟ್ರೀಯ ವಿಪತ್ತು ಎಂದು ಒಪ್ಪಿಕೊಂಡಿರುವ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನು ನಿಭಾಯಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿ ನಿಶ್ಚಿಂತೆಯಿಂದ ಇತ್ತು. ಸಾವಿರಾರು ಕಿಲೋ ಮೀಟರ್ ದೂರು ಕಾಲ್ನಡಿಗೆಯಲ್ಲೇ ಸಾಗುವ ಅನಿವಾರ್ಯೆತೆಯೂ ಎದುರಾಯ್ತು. 170ಕ್ಕೂ ಹೆಚ್ಚು ಜನರು ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ರಾಷ್ಟ್ರೀಯ ಸುದ್ದಿ ಪತ್ರಿಕೆ ಇಂಡಿಯನ್ ಎಕ್ಸ್ಪ್ರೆಸ್ ‘ದುರಂತ ಮತ್ತು ಅವಮಾನ’ ಎಂದು ಬಣ್ಣಿಸಿ ವರದಿ ಮಾಡಿದೆ.

ಕೇವಲ 4 ಗಂಟೆಯಲ್ಲಿ ಲಾಕ್ಡೌನ್ ಘೋಷಣೆ

ಜನವರಿ 30ರಂದು ಭಾರತಕ್ಕೆ ಕಾಲಿಟ್ಟ ಕರೋನಾ ವೈರಸ್ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಯೋಜನೆ ಮಾಡಿಕೊಳ್ಳಬಹುದಿತ್ತು. ಯಾಕಂದ್ರೆ ಕರೋನಾ ಸೋಂಕು ಭಾರತದಲ್ಲಿ ಏಕಾಏಕಿ ಹರಡಲಿಲ್ಲ. ಮಾರ್ಚ್ 13ರಂದು ಈ ಬಗ್ಗೆ ಮಾಹಿತಿ ನೀಡಿದ್ದ ಅಧಿಕಾರಿಗಳು ಕರೋನಾ ಸೋಂಕು ಸಾಂಕ್ರಾಮಿಕವೂ ಅಲ್ಲ, ತುರ್ತು ಪರಿಸ್ಥಿತಿಯೂ ಅಲ್ಲ ಅಂದು ಬಣ್ಣಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಅಂದರೆ ಮಾರ್ಚ್ 18 ರಂದು ದೂರದರ್ಶನದಲ್ಲಿ ಮಾತನಾಡಿ ಮಾರ್ಚ್ 22ರಂದು ಸ್ವಯಂ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೊರಡಬೇಕು ಎನ್ನುವಷ್ಟರಲ್ಲಿ ಮಾರ್ಚ್ 21ರಿಂದ ರೈಲು ತನ್ನ ಸಂಚಾರವನ್ನು ನಿಲ್ಲಿಸಿತು. ಆ ನಂತರ ಮಾರ್ಚ್ 24ರಂದು ರಾತ್ರಿ 8 ಗಂಟೆಗೆ ದೇಶವನ್ನು ಮೂರು ವಾರಗಳ ಕಾಲ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಣೆ ಮಾಡಿದರು. ಘೋಷಣೆ ಮಾಡಿದ ಕೇವಲ 4 ಗಂಟೆಗಳ ಅವಧಿಯಲ್ಲಿ ಎನ್ನುವುದು ವಿಶೇಷ.

ಕಾರ್ಮಿಕರ ಹಿತ ಕಾಯುವ ಸಲಹೆ ಮಾತ್ರ.. ಸಹಾಯವಿಲ್ಲ!

ಲಾಕ್ಡೌನ್ ಸಂಕಷ್ಟದ ಸುಳಿಗೆ ಸಿಲುಕಿದ ವಲಸೆ ಕಾರ್ಮಿಕರ ಹಿತ ಕಾಯುವಂತೆ ಕೇಂದ್ರ ಸರ್ಕಾರ ರಾಜ್ದಯ ಸರ್ಕಾಋಗಳಿಗೆ ಸಲಹೆ ನೀಡಿತ್ತು. ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ಣ ವೇತನ ಮತ್ತು ವೇತನವನ್ನು ನೀಡುವಂತೆ ಉದ್ಯೋಗದಾತರಿಗೆ ಸಲಹೆ ನೀಡಿತು. ಆದರೆ ಅನೇಕ ಸಣ್ಣ ಉದ್ಯಮಗಳು ಸಣ್ಣ ಪ್ರಮಾಣದ ಹಣಕಾಸು ಹೊಂದಿದ್ದವು ಎನ್ನುವುದು ಕೇಂದ್ರದ ಪರಿಜ್ಞಾನಕ್ಕೆ ಬರಲೇ ಇಲ್ಲ. ಈ ಅವಧಿಯಲ್ಲಿ ಸಣ್ಣ ಉದ್ಯಮಗಳಿಗೆ ಬೆಂಬಲವಾಗಿ ನಿಲ್ಲುವ ಯಾವುದೇ ಔದಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಲಿಲ್ಲ. ಪಡಿತರ ವಿತರಣಾ ವ್ಯವಸ್ಥೆಯಲ್ಲಿ ದಾಖಲಿಸಿಕೊಂಡ ಭಾರತೀಯರಿಗೆ ಆಹಾರ ಧಾನ್ಯವನ್ನು ದ್ವಿಗುಣಗೊಳಿಸಿ ಹಂಚುವುದಾಗಿ ಮಾರ್ಚ್ 26 ರಂದು ಸರ್ಕಾರ ಘೋಷಿಸಿತು. ಆದರೆ ಹೆಚ್ಚಿನ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಯೇ ಇಲ್ಲ ಎಂಬ ಅಂಶವನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿತು. ಅಂತಿಮವಾಗಿ, ಲಾಕ್‌ಡೌನ್‌ಗೆ 50 ದಿನಗಳು ಕಳೆಯುವ ಹೊತ್ತಿಗೆ ಎಚ್ಚೆತ್ತುಕೊಂಡ ಕೇಂದ್ರ 80 ದಶಲಕ್ಷ ಭಾರತೀಯರಿಗೆ ಆಹಾರ ಬೆಂಬಲವನ್ನು ಘೋಷಿಸಿತು. ಅಷ್ಟರಲ್ಲಿ ಅನ್ನ ನೀರು ಸಿಗದೆ ಸಾವನ್ನಪ್ಪಿದ ವರದಿಗಳು ಬಂದಿದ್ದವು ಎನ್ನುವುದು ವಿಪರ್ಯಾಸ.

ವಲಸೆ ಕಾರ್ಮಿಕರಿಗಾಗಿ ಶ್ರಮಿಕ್ ರೈಲು ಬಿಟ್ಟಾಗಲು ಎಡವಟ್ಟು..!

ವಲಸೆ ಕಾರ್ಮಿಕರ ಸಂಕಷ್ಟದ ಕೇಂದ್ರ ಸರ್ಕಾರ ಮುಟ್ಟುವ ವೇಳೆಗೆ ಏಪ್ರಿಲ್ 29 ಆಗಿತ್ತು. ಆಗ ಎಚ್ಚೆತ್ತ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಗೆ ಮನೆಗಳಿಗೆ ಪ್ರಯಾಣಿಸಲು ಅವಕಾಶ ನೀಡುವುದಾಗಿ ಘೋಷಿಸಿತು. 5 ವಾರಗಳ ದುಃಖವನ್ನು , ಹಸಿವು ಸಂಕಟವನ್ನು ತಡೆದುಕೊಂಡಿದ್ದ ಜನ ತಮ್ಮ ಹುಟ್ಟೂರುಗಳಿಗೆ ತೆರಳಲು ಮುಂದಾಗಿದ್ದರು. ಮೊದಲು ಬಸ್ ಮೂಲಕ ಎಂದಿದ್ದ ಕೇಂದ್ರ 2 ದಿನಗಳ ಬಳಿಕ ಶ್ರಮಿಕ್ ರೈಲು ಓಡಿಸುವುದಾಗಿ ತಿಳಿಸಿತ್ತು. ಭಾರತೀಯ ರೈಲ್ವೆಯನ್ನು ಸಾರಿಗೆ ಸಂಸ್ಥೆ ಹಂತಕ್ಕೆ ಇಳಿಸಲಾಯಿತು. ಕಾರ್ಮಿಕರು ಇರುವ ರಾಜ್ಯ ಹಾಗೂ ಕಾರ್ಮಿಕರ ಮೂಲ ರಾಜ್ಯದಲ್ಲಿರುವ ಸರ್ಕಾರಗಳು ಒಪ್ಪಿಕೊಂಡರೆ ಮಾತ್ರ ರೈಲು ಸಂಚಾರ ಎನ್ನುವ ಮೂಲಕ ರಾಜ್ಯಗಳಿಗೆ ಪೂರ್ಣಾಧಿಕಾರ ಕೊಟ್ಟಿತ್ತು. ಜೊತೆಗೆ ಕರ್ನಾಟಕವು ಬೇರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ದೆಹಲಿ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು 13 ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳಾಗಿ ನೇಮಿಸಿತು. ಅದು ಸಫಲ ಆಗುವಲ್ಲಿ ತಡವಾಯ್ತು. ಕೆಲವು ರಾಜ್ಯಗಳು ಸೋಂಖು ಹರಡುವ ಭೀತಿಯಲ್ಲಿ ಕಾರ್ಮಿಕರನ್ನು ಕರೆಸಿಕೊಳ್ಳಲು ಹಿಂದೇಟು ಹಾಕಿದವು. ಇದೀಗ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಇಲಾಖೆ ಜೂನ್ 1 ರಿಂದ 200 ಹೆಚ್ಚುವರಿ ರೈಲು ಓಡಿಸುವ ನಿರ್ಧಾರ ಮಾಡಿದೆ. ಯಾವುದೇ ರಾಜ್ಯದ ಮರ್ಜಿಗೆ ಕಾಯುವುದಿಲ್ಲ ಎಂದಿದೆ. ಇದು ಮೊದಲೇ ಆಗಬೇಕಿಲ್ಲ ಕೆಲಸ. ಅರ್ಥವಾಗಲು ಬೇಕಾಗಿದ್ದು ಒಂದು ತಿಂಗಳ ಕಾಲಾವಧಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಕೇಂದ್ರದ ನಿರ್ಧಾರ ವಲಸೆ ಕಾರ್ಮಿಕರಿಗೆ ನರಕ ಯಾತನೆ..!

ಕೇಂದ್ರ ಸರ್ಕಾರ ಶ್ರಮಿಕ್ ರೈಲು ಆರಂಭಿಸಿದ ಕೂಡಲೇ ಕಾರ್ಮಿಕರನ್ನು ಕರೆದುಕೊಂಡು ಅವರ ಸ್ವಂತ ರಾಜ್ಯಗಳಿಗೆ ತಲುಪಿಸಲು ಕೆಲಸ ಮಾಡಲಿಲ್ಲ. ಏಪ್ರಿಲ್ 29 ರ ಆದೇಶದ ಪ್ರಕಾರ ವಲಸೆ ಕಾರ್ಮಿಕರಿಗೆ ತಪಾಸಣೆ ಮತ್ತು ರೋಗಲಕ್ಷಣವಿಲ್ಲದಿದ್ದರೆ ಮಾತ್ರ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತದೆ ಎಂದು ಇಳಿಸಿತ್ತು. ಇದಕ್ಕಾಗಿ ವಲಸೆ ಕಾರ್ಮಿಕರು ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡರು. ಕೆಲವು ರಾಜ್ಯಗಳು ವಲಸೆ ಕಾರ್ಮಿಕರಿಗೆ ರೈಲು ಹತ್ತುವ ಮೊದಲು ವೈದ್ಯಕೀಯ ಪ್ರಮಾಣ ಪತ್ರದ ಬೇಡಿಕೆ ಇಟ್ಟವು ಇದು ಕೂಲಿ ಕಾರ್ಮಿಕರಿಗೆ ಸಂಕಷ್ಟದಾಯಕ ಕೆಲಸವಾಗಿತ್ತು. ವಲಸೆ ಕಾರ್ಮಿಕರು ಮೊದಲು ಆನ್‌ಲೈನ್‌ ನಲ್ಲಿ ಅರ್ಜಿ ಭರ್ತಿ ಮಾಡಬೇಕು. ತಮ್ಮ ತವರು ರಾಜ್ಯಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಪ್ರಯಾಣಕ್ಕೆ ಯೋಗ್ಯ ಎನ್ನಲು ವೈದ್ಯಕೀಯ ಪ್ರಮಾಣ ಪತ್ರ ಪಡೆಯಬೇಕು. ರೈಲ್ವೆ ನಿಲ್ದಾಣವನ್ನು ತೆರಳಲು ಟ್ರಾವೆಲ್ ಪಾಸ್‌ ಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಬೇಕು. ಇಷ್ಟೆಲ್ಲಾ ಮಾಡಿಕೊಂಡ ಬಳಿಕ ಊರುಗಳಿಗೆ ಹೋಗಲು ಟಿಕೆಟ್ ಕನ್ಫರ್ಮ್ ಆಗಿದ್ಯಾ ಎನ್ನುವ ಬಗ್ಗೆಯೂ ಪರಿಶೀಲನೆ ಮಾಡಿಕೊಳ್ಳಬೇಕು. ವಲಸೆ ಕಾರ್ಮಿಕರಲ್ಲಿ ಅದೆಷ್ಟು ಜನ ಉತ್ತಮ ಇಂಟರ್ನೆಟ್ ಸೌಲಭ್ಯದ ಮೊಬೈಲ್ ಬಳಸುತ್ತಾರೆ..? ಒಂದು ವೇಳೆ ಉತ್ತಮ ಮೊಬೈಲ್ ಬಳಸಿದರೂ ಸಂವಹನ ಮಾಡಲು ಸಮರ್ಥರೇ ಎಂಬುದನ್ನು ನಮ್ಮ ಸರ್ಕಾರ ಅರ್ಥ ಮಾಡಿಕೊಳ್ಳಲಿಲ್ಲ. ಇಷ್ಟೆಲ್ಲಾ ಪ್ರಕ್ರಿಯೆ ನಡೆಸುವಾಗ ಸೋಂಕು ಯಾರಿಗೆ ಎಲ್ಲಿ ಬೇಕಾದರೂ ಹರಡುವ ಸಾಧ್ಯತೆ ಇದೆ ಎನ್ನುವ ಕನಿಷ್ಠ ಆಲೋಚನೆಯೂ ಅಧಿಕಾರಿಗಳಿಗೆ ಬರಲಿಲ್ಲ. ಸಾವಿರಾರು ಜನರನ್ನು ಗುಂಪೂಗೂಡಿಸಿಕೊಂಡು ಮಾತನಾಡುವಾಗಲೂ ಅವರ ಅರಿವಿಗೆ ಬಾರದಿದ್ದದ್ದು ದುರಂತ.

ವಲಸೆ ಕಾರ್ಮಿಕರ ವಿಚಾರದಲ್ಲೂ ಮೋದಿ ಸರ್ಕಾರದ ಸುಳ್ಳು..!

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳುವ ವಲಸೆ ಕಾರ್ಮಿಕರ ರೈಲು ದರದ ಶೇಕಡ 85ರಷ್ಟು ಪಾಲನ್ನು ನಾವು ಪಾವತಿ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಬಿಡಿಗಾಸನ್ನೂ ವಲಸೆ ಕಾರ್ಮಿಕರಿಗಾಗಿ ವೆಚ್ಚ ಮಾಡಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಣ ಪಾವತಿಸುತ್ತಿರುವುದಾಗಿ ಹೇಳಿದ್ದ ಮೋದಿ ಸರ್ಕಾರ ಅಂತಿಮವಾಗಿ ವಾರಗಳ ಕಾಲ ಕೆಲಸವಿಲ್ಲದೆ, ತಿನ್ನಲು ಅನ್ನವಿಲ್ಲದೆ, ನಿರ್ಗತಿಕರಾಗಿದ್ದ ವಲಸೆ ಕಾರ್ಮಿಕರಿಂದಲೇ ಭಾರತೀಯ ರೈಲ್ವೆ ಶ್ರಮಿಕ್ ರೈಲುಗಳ ಸಂಪೂರ್ಣ ಟಿಕೆಟ್ ದರವನ್ನು ಪಡೆದುಕೊಂಡಿದೆ. 2011ರ ಜನಗಣತಿಯಂತೆ ಭಾರತದಲ್ಲಿ 5.6 ಕೋಟಿ ಅಂತರರಾಜ್ಯ ವಲಸಿಗರಿದ್ದಾರೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರು ವಲಸೆ ಕಾರ್ಮಿಕರ ಸಂಖ್ಯೆ 6.5 ಕೋಟಿ ಎಂದು ಅಂದಾಜಿಸಿದ್ದಾರೆ. ಎಲ್ಲಾ ಕಾರ್ಮಿಕರಿಗೂ ವಾಪಸ್ ಆಗಲು ಅವಕಾಶ ಕೊಟ್ಟಿದ್ದರೆ ಅದರಿಂದ ಆಗುತ್ತಿದ್ದ ವೆಚ್ಚ ಸುಮಾರು 4,200 ಕೋಟಿ ಆಗುತ್ತಿತ್ತು ಎಂದು ಸ್ಟ್ರಾಂಡೆಡ್ ವರ್ಕರ್ಸ್ ಆಕ್ಷನ್ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುವ ಸಂಶೋಧಕರು ಲೆಕ್ಕ ಹಾಕಿದ್ದಾರೆ. ಏಪ್ರಿಲ್ ಆರಂಭದಲ್ಲೇ ವರದಿಯಾದಂತೆ ಪಿಎಂ-ಕೇರ್ಸ್ ಫಂಡ್ಗೆ ಹರಿದು ಬಂದ ಹಣ 6,500 ಕೋಟಿ ರೂಪಾಯಿ. ಆದರೂ ವಲಸೆ ಕಾರ್ಮಿಕರನ್ನು ಕೇಂದ್ರ ಸರ್ಕಾರವೇ ಸುಲಿಗೆ ಮಾಡಿತು ಎನ್ನುವುದು ನಮ್ಮ ದೇಶದ ವಲಸೆ ಕಾರ್ಮಿಕರ ಹಣೆಬರಹ.

ರೈಲು ಹೊರಟ ಮೇಲಾದರೂ ಸರಿಯಾಯಿತೇ..? ಅದೂ ಕೂಡ ವ್ಯಥೆ..!

ಶ್ರಮಿಕ್ ರೈಲುಗಳಲ್ಲಿ ಮೇ 16ರ ಅಂಕಿ ಅಂಶದಂತೆ 15 ಲಕ್ಷ ವಲಸಿಗರನ್ನು ಅವರ ಊರುಗಳಿಗೆ ತಲುಪಿಸಿದ್ದೇವೆ ಎಂದು ಭಾರತೀಯ ರೈಲ್ವೆ ಸಚಿವಾಲಯ ಪ್ರಕಟಿಸಿದೆ. ಇದು ಅತ್ಯಂತ ದೊಡ್ಡ ಮೊತ್ತವಾಗಿ ಕಾಣಿಸುತ್ತದೆ. ಭಾಷಣ ಮಾಡುವಾಗಲೂ ಇದನ್ನು ಹೇಳಿದರೆ ವಾವ್ಹ್ ಎನ್ನುವಂತಾಗುತ್ತದೆ. ಆದರೆ ಪ್ರಯಾಣಿಸಲು ಬಯಸಿದ ವಲಸೆ ಕಾರ್ಮಿಕರ ಸಣ್ಣ ಭಾಗ ಎನ್ನುವುದು ಯಾರಿಗೂ ಕಾಣಿಸುವುದೇ ಇಲ್ಲ. ಅಂತರರಾಜ್ಯ ವಲಸಿಗರಲ್ಲಿ ಕೇವಲ ಮೂರನೇ ಒಂದು ಭಾಗವೆಂದು ಅಂದಾಜು ಮಾಡಿದರೂ 1.4 ಕೋಟಿ ಜನರು ಇರುತ್ತಾರೆ. ಆದರೆ ಭಾರತೀಯ ರೈಲ್ವೆ ಸಾಗಿಸಿದ್ದು ಕೇವಲ 15 ಲಕ್ಷ. ಇನ್ನುಳಿದ ಲಕ್ಷಾಂತರ ಭಾರತೀಯರು ರಸ್ತೆಯಲ್ಲಿದ್ದಾರೆ.ತಮ್ಮ ಮಕ್ಕಳೊಂದಿಗೆ ಸಾವಿರಾರು ಕಿಲೋ ಮೀಟರ್ ದೂರ ನಡೆದುಕೊಂಡೇ ಹೋಗುತ್ತಿದ್ದಾರೆ. ಸೈಕಲ್‌ಗಳಲ್ಲಿ ತೆರಳುತ್ತಿದ್ದಾರೆ. ಸಾವಿರಾರು ರೂಪಾಯಿಗಳನ್ನು ಪಾವತಿಸಿ ಕಂಟೇನರ್ ಟ್ರಕ್‌ಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಇದ್ಯಾವುದು ಸರ್ಕಾರದ ಗಮನಕ್ಕೆ ಬರಲೇ ಇಲ್ಲ.

ಮೊದಲು “ಜೀವನ ಮುಖ್ಯವಲ್ಲ ನಮಗೆ ಜೀವ ಮುಖ್ಯ” ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಮೇ 13ರಂದು ಭಾಷಣ ಮಾಡಿ 20 ಲಕ್ಷ ಕೋಟಿ ಪ್ಯಾಕೇಜ್ ಎಂದು ಘೋಷಣೆ ಮಾಡಿದರು. ಆ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5 ದಿನಗಳ ಕಾಲ ಎಳೆಎಳೆಯಾಗಿ ದೇಶದ ಜನರನ್ನು ಸೆಳೆಯುವ ಕೆಲಸ ಮಾಡಿದರು. ಆದರೆ ಯಾರಿಗೆ ಎಷ್ಟು ಕೊಡ್ತಾರೆ..? ಯಾರಿಗೆ ಲಾಭವಾಯ್ತು ಎನ್ನುವ ಮಾಹಿತಿ ಇನ್ನೂ ಕೂಡ ಜನಸಾಮಾನ್ಯರಿಗೆ ಅರ್ಥವಾಗಿಲ್ಲ. ಜನಸಾಮಾನ್ಯರಿಗೆ ಬೇಡ, ಅರ್ಥಶಾಸ್ತ್ರಜ್ಞರು ಕೂಡ ಪ್ಯಾಕೇಜ್‌ ನಲ್ಲಿ ಏನು ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಾಂಕ್ರಾಮಿಕ ಪಿಡುಗನ್ನು ತಡೆಯಲು ಮಾಡಿದ ಕಸರತ್ತು ವ್ಯರ್ಥ ಎನ್ನುವುದು ಇಂದಿನ ಸೋಂಕಿನ ಸಂಖ್ಯೆಯನ್ನು ಗಮನಿಸಿದಾಗ ಹೊತ್ತಾಗುತ್ತದೆ. ನೂರು ಇನ್ನೂರು ಇದ್ದಾಗ ದೇಶವನ್ನು ಲಾಕ್ ಮಾಡಿದ ಪ್ರಧಾನಿ ಮೋದಿ ಲಕ್ಷ ಸೋಂಕಿತರನ್ನು ದಾಟಿದ ಬಳಿಕ ಎಲ್ಲಾ ವ್ಯವಹಾರಕ್ಕೂ ಒಪ್ಪಿಗೆ ಕೊಡುತ್ತಿರುವುದು ಜನರನ್ನು ಗೊಂದಲಕ್ಕೆ ಈಡು ಮಾಡಿದೆ.

Tags: Covid 19Migrant WorkersPM Modishramik trainಕೋವಿಡ್-19ಪ್ರಧಾನಿ ಮೋದಿವಲಸೆ ಕಾರ್ಮಿಕರುಶ್ರಮಿಕ್‌ ರೈಲು
Previous Post

ಕರ್ನಾಟಕ: 1,743 ತಲುಪಿದ ಕರೋನಾ ಪೀಡಿತರ ಸಂಖ್ಯೆ

Next Post

ವಲಸೆ ಕಾರ್ಮಿಕರ ನಿರ್ವಹಣೆಯಲ್ಲಿ ಎಡವಿದ ಕೇಂದ್ರ ಸರ್ಕಾರ; ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿಜೆಪಿ!

Related Posts

ಹ್ಯಾಪಿ ಬರ್ತ್ ಡೇ ರಾಹುಲ್ ಗಾಂಧಿ..! – ರಾಗಾ ಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ ! 
Top Story

ಹ್ಯಾಪಿ ಬರ್ತ್ ಡೇ ರಾಹುಲ್ ಗಾಂಧಿ..! – ರಾಗಾ ಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ ! 

by Chetan
June 20, 2025
0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul gandhi) ನಿನ್ನೆ (ಜೂನ್.19) 55ನೇ ವರ್ಷಕ್ಕೆ ಕಾಲಿಟ್ಟಿದ್ದು,ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಜೊತೆಗೆ  ಅಭಿಮಾನಿಗಳು ತಮ್ಮ...

Read moreDetails
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
Next Post
ವಲಸೆ ಕಾರ್ಮಿಕರ ನಿರ್ವಹಣೆಯಲ್ಲಿ ಎಡವಿದ ಕೇಂದ್ರ ಸರ್ಕಾರ; ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿಜೆಪಿ!

ವಲಸೆ ಕಾರ್ಮಿಕರ ನಿರ್ವಹಣೆಯಲ್ಲಿ ಎಡವಿದ ಕೇಂದ್ರ ಸರ್ಕಾರ; ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿಜೆಪಿ!

Please login to join discussion

Recent News

Top Story

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
June 20, 2025
ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್
Top Story

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

by ಪ್ರತಿಧ್ವನಿ
June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 20, 2025
ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada