• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ತೆರಿಗೆದಾರರಿಂದ ಕೇಂದ್ರ ಸರ್ಕಾರಕ್ಕೆ ಒಂದು ಪತ್ರ

by
January 28, 2020
in ದೇಶ
0
ತೆರಿಗೆದಾರರಿಂದ ಕೇಂದ್ರ ಸರ್ಕಾರಕ್ಕೆ ಒಂದು ಪತ್ರ
Share on WhatsAppShare on FacebookShare on Telegram

ಸರಕಾರದ ವಾರ್ಷಿಕ ಆಯವ್ಯಯಗಳ ಅಂದಾಜುಪಟ್ಟಿಯ ವಾರಕ್ಕೆ ಕಾಲಿಡುತ್ತಿದ್ದಂತೆ, ಮಧ್ಯಮ ವರ್ಗ ಮತ್ತು ದೇಶದ ಎಲ್ಲಾ ಪ್ರಜೆಗಳು ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹಿಂದಿನ ಬಾರಿಯ ಬಜೆಟ್ನಲ್ಲಿ ಹೆಚ್ಚಿನ ಮಟ್ಟದ ಯಾವುದೇ ಬದಲಾವಣೆಗಳಿರಲಿಲ್ಲ. ಹಾಗಾಗಿ ಈ ಬಾರಿ ಕೇಂದ್ರ ಹಣಕಾಸು ಸಚಿವರಿಂದ ನಿರೀಕ್ಷೆ ಹುಟ್ಟಿಕೊಂಡಿದೆ.

ADVERTISEMENT

ಕಳೆದ ಕೆಲವು ತ್ರೈಮಾಸಿಕಗಳಲ್ಲಿ, ಹೆಚ್ಚಿದ ಹಣದುಬ್ಬರ, ಈರುಳ್ಳಿ, ತರಕಾರಿಗಳು, ಉತ್ಪಾದಕ ವಸ್ತುಗಳು ಮುಂತಾದ ಅಗತ್ಯ ವಸ್ತುಗಳ ಬೆಲೆ, ಹೂಡಿಕೆಗಳ ಮೇಲಿನ ಬಡ್ಡಿದರಗಳು ಮತ್ತು ಉದ್ಯೋಗ ಮಾರುಕಟ್ಟೆಯು ಬಿಗಿಯಾಗಿರುವುದರಿಂದ ವಿವಿಧ ತ್ರೈಮಾಸಿಕ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸುವುದು ಮತ್ತು ಪ್ರೋತ್ಸಾಹ ಧನ ನೀಡುವಂತಹ ಕಾರ್ಪೊರೇಟ್‌ಗಳನ್ನು ಉತ್ತೇಜಿಸಲು ಸರ್ಕಾರ ವಿವಿಧ ಕ್ರಮಗಳನ್ನು ಜಾರಿಗೆ ತಂದಿದೆ. ಮುಂಬರುವ ಬಜೆಟ್‌ನಲ್ಲಿ ಹಣಕಾಸು ಸಚಿವರು ಉದ್ಯೋಗ ಸೃಷ್ಠಿಯಿಂದ ಕುಂಠಿತಗೊಂಡಿರುವ ಆರ್ಥಿಕತೆಗೆ ಚೇತರಿಕೆ ನೀಡುವ ಉದ್ದೇಶವನ್ನೂ ಸರಕಾರ ಹೊಂದಿದೆ ಹಾಗಾಗಿ ಮಧ್ಯಮ ವರ್ಗ ಮತ್ತು ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಅಗತ್ಯವಾದ ಪರಿಹಾರವನ್ನು ಈ ಬಾರಿಯ ಬಜೆಟ್‌ನಲ್ಲಿ ನೀಡುತ್ತಾರೆ ಎನ್ನುವ ನಿರೀಕ್ಷೆಗಳಿವೆ.

ಕೆಲವು ನಿರೀಕ್ಷೆಗಳು / ಸಲಹೆಗಳು:-

ವೈಯಕ್ತಿಕ ಹಣಕಾಸು

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇನ್ನಷ್ಟು ಇಳಿಸುವ ನಿರೀಕ್ಷೆ

ನಿಗದಿತ ಕಡಿತ ( ಸ್ಟ್ಯಾಂಡರ್ಡ್ ಡಿಡಕ್ಷನ್ ) ಮತ್ತು ಆದಾಯ ತೆರಿಗೆ 80 ಸಿ ಮಿತಿಗಳಂತಹ ಪ್ರಯೋಜನಗಳನ್ನು ಹೆಚ್ಚಿಸುವ ನಿರೀಕ್ಷೆ

ದೀರ್ಘಾವಧಿಯ ಉಳಿತಾಯವನ್ನು ಇನ್ನಷ್ಟು ಉತ್ತೇಜಿಸಲು ತೆರಿಗೆ ವಿನಾಯಿತಿ ಹೂಡಿಕೆಗೆ ಸಂಬಂಧಿಸಿದ ಉಳಿತಾಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದು (ಮೂಲಸೌಕರ್ಯ ಕರಾರುಗಳು ಮತ್ತು ಈಕ್ವಿಟಿ ಆಧಾರಿತ ಉಳಿತಾಯ ಯೋಜನೆ )

ಈಕ್ವಿಟಿಗಳ ಮೇಲಿನ ದೀರ್ಘಕಾಲೀನ ಬಂಡವಾಳದ ಲಾಭವನ್ನು ಹಿಂತೆಗೆದುಕೊಳ್ಳುವ ಸೌಲಭ್ಯ

ಶೇರ್‌ನಲ್ಲಿನ ಲಾಭಾಂಶ ವಿತರಣಾ ತೆರಿಗೆಯನ್ನು ಕಡಿಮೆ ಮಾಡಲು

ಇವಿಷ್ಟೂ ಪ್ರಸ್ತಾಪಗಳು ಹಣದ ಹರಿವನ್ನು ಹೆಚ್ಚಿಸುತ್ತದೆ. ಮಧ್ಯಮ ವರ್ಗದವರಿಗೆ ಹೆಚ್ಚಿನ ಸಹಾಯವಾಗಬಹುದು ಮತ್ತು ಇದರಿಂದಾಗಿ ಭವಿಷ್ಯದ ಗುರಿಗಳತ್ತ ಹೆಚ್ಚಿನ ಉಳಿತಾಯವನ್ನು ಉತ್ತೇಜಿಸುತ್ತದೆ.

ಸಮಗ್ರವಾಗಿ ಆರ್ಥಿಕತೆಯಲ್ಲಿನ ಅಂಶ:-

ನಗರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಗಮನ ನೀಡುವುದರಿಂದ ಅದು ಆರ್ಥಿಕತೆಯ ಮೇಲೆ ಸುಸ್ಥಿರವಾದ ಪರಿಣಾಮವನ್ನು ಬೀರುತ್ತದೆ.

ರಫ್ತಿನ ಪ್ರಮಾಣ ಹೆಚ್ಚಿಸುವುದು ಮತ್ತು ಹೊಸ ಉತ್ಪಾದನಾ ಘಟಕಗಳನ್ನು ಪ್ರೋತ್ಸಾಹಿಸಿ ಆ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.

ನಗರ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಅದನ್ನು ಒಂದು ನಿರ್ದಿಷ್ಟ ಸಮಯ ಮಿತಿಯೊಳಗೆ ಈಡೇರಿಸುವುದು.

ಇದರಿಂದ ನಿಜವಾದ ಪ್ರಗತಿಯನ್ನು ಕಾಣಬಹುದು ಮತ್ತು ಯಾವುದೇ ಅಧಿಕ ವೆಚ್ಚವನ್ನು ಮೀರುವುದಿಲ್ಲ. ನಗರ ಪ್ರದೆಶದಲ್ಲಿನ ಉದ್ಯೋಗಗಳು ಮತ್ತು ಮೂಲಸೌಕರ್ಯಗಳ ಮೇಲೆ ಒತ್ತು ನೀಡಲು ಕಾರಣವೆಂದರೆ ಬೆಳವಣಿಗೆ ಮತ್ತು ಬೇಡಿಕೆಯ ಮೇಲೆ ತಕ್ಷಣದ ಸಕಾರಾತ್ಮಕ ಪರಿಣಾಮವನ್ನು ಇದು ಬೀರುತ್ತದೆ ಎನ್ನುವ ಆಶಯ. ಇದು ನಗರ ಪ್ರದೆಶದಲ್ಲಿ ಮಧ್ಯಮ ವರ್ಗಕ್ಕೆ ಸಹಾಯ ಮಾಡುವುದಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕತೆ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೂ ಪ್ರಯೋಜನವಾಗುತ್ತದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಬಜೆಟ್‌ನಲ್ಲಿ ನಮಗೆ ಹೆಚ್ಚಿನ ನಿರೀಕ್ಷೆಗಳಿವೆ. ಪ್ರಾಮಾಣಿಕ ತೆರಿಗೆ ಪಾವತಿದಾರ ಮತ್ತು ಮಧ್ಯಮ ವರ್ಗದವರಿಗೆ ಮಾನ್ಯತೆ ನೀಡಬೇಕಾಗಿದೆ. ದೇಶದ ಜನತೆಗೆ ಪ್ರಯೋಜನಗಳನ್ನು ನೀಡಿದರೆ ಮತ್ತು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ದೇಶದ ಬೆಳವಣಿಗೆಯ ದರವು ಹೇಗೆ ಸುಧಾರಿಸುತ್ತದೆ ಎಂಬುದನ್ನು ನೋಡಬೇಕಾಗಿದೆ.

ಇಂತಿ,
ಪ್ರಾಮಾಣಿಕ ತೆರಿಗೆ ಪಾವತಿದಾರ

Tags: Budget 2020Budget sessionCentral GovernmentCopper ExportFinance Minister Nirmala Sitaramanimport
Previous Post

ಬೆಂಗಳೂರಿಗೂ ಕಾಲಿಟ್ಟಿತೇ ಕೊರೋನಾ ವೈರಸ್‌..!

Next Post

ಸಂಪುಟ ವಿಸ್ತರಣೆ V/S ಕಾಂಗ್ರೆಸ್ ನಾಯಕತ್ವ ಬದಲಾವಣೆ- ಯಾವುದು ಮೊದಲು?

Related Posts

WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌
Top Story

WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

by ಪ್ರತಿಧ್ವನಿ
February 6, 2026
0

ನಿನ್ನೆ ಗುಜರಾತ್‌ನ ವಡೋದರಾದಲ್ಲಿರುವ ಕೋಟಂಬಿಯ BCA ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಡೆಲ್ಲಿ ಕ್ಯಾಪಿಟಲ್ಸ್(DC)...

Read moreDetails
Drugs Case: ತಮಿಳು ಚಿತ್ರರಂಗದಲ್ಲಿ ಡ್ರ** ಘಾಟು: ನಟಿ ಸೇರಿ 8 ಮಂದಿ ಬಂಧನ

Drugs Case: ತಮಿಳು ಚಿತ್ರರಂಗದಲ್ಲಿ ಡ್ರ** ಘಾಟು: ನಟಿ ಸೇರಿ 8 ಮಂದಿ ಬಂಧನ

February 6, 2026
Oracle Layoffs: ಒರಾಕಲ್‌ನಲ್ಲಿ ಭಾರೀ ಲೇ-ಆಫ್ ಪ್ಲ್ಯಾನ್: 20–30 ಸಾವಿರ ಉದ್ಯೋಗಿಗಳಿಗೆ ಬಿಗ್‌ ಶಾಕ್‌

Oracle Layoffs: ಒರಾಕಲ್‌ನಲ್ಲಿ ಭಾರೀ ಲೇ-ಆಫ್ ಪ್ಲ್ಯಾನ್: 20–30 ಸಾವಿರ ಉದ್ಯೋಗಿಗಳಿಗೆ ಬಿಗ್‌ ಶಾಕ್‌

February 5, 2026
Sabarimala Gold Theft: ʼಶಬರಿಮಲೆ ಚಿನ್ನ ಕಳ್ಳತನ ಕೇಸ್‌ನಿಂದ ಕೇರಳ ಸರ್ಕಾರವೇ ಕುಸಿಯುವ ಭಯʼ

Sabarimala Gold Theft: ʼಶಬರಿಮಲೆ ಚಿನ್ನ ಕಳ್ಳತನ ಕೇಸ್‌ನಿಂದ ಕೇರಳ ಸರ್ಕಾರವೇ ಕುಸಿಯುವ ಭಯʼ

February 5, 2026
Ajit Pawar: ವಿಮಾನ ಅಪಘಾತ  ಮುನ್ನ ಅಜಿತ್ ಪವಾರ್ ಫೋನ್  ಸಂಭಾಷಣೆಯಲ್ಲಿ ಹೇಳಿದ್ದೇನು?

Ajit Pawar: ವಿಮಾನ ಅಪಘಾತ  ಮುನ್ನ ಅಜಿತ್ ಪವಾರ್ ಫೋನ್  ಸಂಭಾಷಣೆಯಲ್ಲಿ ಹೇಳಿದ್ದೇನು?

February 5, 2026
Next Post
ಸಂಪುಟ ವಿಸ್ತರಣೆ V/S ಕಾಂಗ್ರೆಸ್ ನಾಯಕತ್ವ ಬದಲಾವಣೆ- ಯಾವುದು ಮೊದಲು?

ಸಂಪುಟ ವಿಸ್ತರಣೆ V/S ಕಾಂಗ್ರೆಸ್ ನಾಯಕತ್ವ ಬದಲಾವಣೆ- ಯಾವುದು ಮೊದಲು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada