• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಗೆ ಬಂದ ಮಮತಾ ಬ್ಯಾನರ್ಜಿ

by
April 27, 2020
in ದೇಶ
0
ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಗೆ ಬಂದ ಮಮತಾ ಬ್ಯಾನರ್ಜಿ
Share on WhatsAppShare on FacebookShare on Telegram

ಇಡೀ ದೇಶವೇ ಕೋವಿಡ್‌ ಸೋಂಕಿನ ವಿರುದ್ದ ಒಗ್ಗಟ್ಟಿನಿಂದ ಶಕ್ತಿ ಮೀರಿ ಶ್ರಮಿಸುತ್ತಿದೆ. ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್‌ ಸೋಂಕು ಹೆಚ್ಚಾಗುತಿದ್ದರೆ ಕೆಲವು ರಾಜ್ಯಗಳಲ್ಲಿ ಕಡಿಮೆಯೂ ಅಗುತ್ತಿದೆ. ಮೊದಲು ಪಶ್ಚಿಮ ಬಂಗಾಳ ರಾಜ್ಯವು ಕೋವಿಡ್‌ ಸೋಂಕನ್ನು ತಡೆಗಟ್ಟುವಲ್ಲಿ ಅಲ್ಪ ಹಿನ್ನಡೆ ಆಗಿದ್ದರೂ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷಿಪ್ರ ಕ್ರಮಗಳಿಂದ ಇಂದು ಕೋವಿಡ್‌ ವಿರುದ್ದ ಹೋರಾಟದಲ್ಲಿ ಅಪರಿಮಿತ ವೇಗವನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣ ಖುದ್ದು ಮಮತಾ ಬ್ಯಾನರ್ಜಿ ಅವರೇ ಕೋಲ್ಕತ್ತಾದ ಬಡಾವಣೆಗಳಿಗೆ ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ತೆರಳಿ ಖುದ್ದು ಜನರನ್ನು ಉದ್ದೇಶಿಸಿ ಮೈಕ್‌ ಬಳಸಿ ಮಾತಾಡುತಿದ್ದಾರೆ.

ADVERTISEMENT

“ನಾನು ಮಮತಾ ಬ್ಯಾನರ್ಜಿ.. ಹೊರಬರಲು ಮತ್ತು ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗದ ಕಾರಣ ನಿಮ್ಮ ಕ್ಷಮೆ ಕೋರಲು ನಾನು ಬಂದಿದ್ದೇನೆ. ಲಾಕ್‌ಡೌನ್ ಹಾಕಲಾಗಿರುವುದರಿಂದ ನಿಮ್ಮ ಮನೆಗಳಿಂದ ಹೊರಬರಲು ಸಾಧ್ಯವಿಲ್ಲ. ಅಂಗಡಿಗಳನ್ನು ತೆರೆಯಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ನಾವು ಒಟ್ಟಿಗೆ ಕರೋನಾವನ್ನು ನಿವಾರಿಸುವವರೆಗೆ ದಯವಿಟ್ಟು ಅದನ್ನು ಇನ್ನೂ ಕೆಲವು ದಿನಗಳವರೆಗೆ ಸಹಿಸಿಕೊಳ್ಳಿ. ಇದರಲ್ಲಿ ಸರ್ಕಾರ ನಿಮ್ಮೊಂದಿಗೆ ಇದೆ ಎಂದು ನಿಮಗೆ ಹೇಳಲು ನಾನು ಸಹ ಇಲ್ಲಿದ್ದೇನೆ. ಮನೆಯೊಳಗೆ ಇರಿ, ಸುರಕ್ಷಿತವಾಗಿರಿ.” ಇದು ಮಮತಾ ಬ್ಯಾನರ್ಜಿ ಅವರೇ ಖುದ್ದಾಗಿ ನೀಡುತ್ತಿರುವ ಸಂದೇಶವಾಗಿದೆ.

ಮುಖ್ಯಮಂತ್ರಿಗಳೇ ಈ ರೀತಿ ರಸ್ತೆಗಿಳಿಯುತ್ತಿರುವುದರಿಂದ ಆಡಳಿತ ಯಂತ್ರ ಚುರುಕುಗೊಂಡಿದ್ದು ಕೋವಿಡ್‌ ಹೋರಾಟದಲ್ಲಿರುವ ಸರ್ಕಾರಿ ಅಧಿಕಾರಿ ಸಿಬ್ಬಂದಿಗಳ ಉತ್ಸಾಹ ಹೆಚ್ಚಾಗಿದೆ. ವಿಶೇಷವೆಂದರೆ, ಏಪ್ರಿಲ್ 20 ರಂದು ಕೇಂದ್ರ ಗೃಹ ಸಚಿವಾಲಯವು ಎರಡು ಕೇಂದ್ರ ತಂಡಗಳನ್ನು (ಐಎಂಸಿಟಿ) ಬಂಗಾಳಕ್ಕೆ ಕಳುಹಿಸಿತು. ಪ್ರತೀ ತಂಡವೂ ಐದು ಹಿರಿಯ ಮಟ್ಟದ ಅಧಿಕಾರಿಗಳನ್ನು ಒಳಗೊಂಡಿದ್ದು ಲಾಕ್‌ಡೌನ್ ಉಲ್ಲಂಘನೆಯ ವರದಿಗಳ ತನಿಖೆಗಾಗಿ ಉಭಯ ತಂಡಗಳಿಗೆ ಉತ್ತರದ ಡಾರ್ಜಿಲಿಂಗ್, ಜಲ್ಪೈಗುರಿ ಮತ್ತು ಕಾಲಿಂಪಾಂಗ್, ಮತ್ತು ಹೌರಾ, ಉತ್ತರ 24 ಪರಗಣಗಳು, ಮದಿನಿಪುರ ಮತ್ತು ರಾಜ್ಯ ರಾಜಧಾನಿ ಕೋಲ್ಕತ್ತಾದ ಏಳು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯಕ್ಕೆ ನಿಯೋಜಿಸಲಾಗಿತ್ತು.

ರಾಷ್ಟ್ರೀಯ ಲಾಕ್‌ಡೌನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಒಂದು ದಿನದ ನಂತರ, ಬಂಗಾಳ ಮುಖ್ಯಮಂತ್ರಿಗಳು ಆಸ್ಪತ್ರೆಗಳಿಗೆ ಭೇಟಿ ನೀಡುವುದು, ವೈದ್ಯರನ್ನು ಭೇಟಿ ಮಾಡುವುದು, ವೈದ್ಯಕೀಯ ವೃಂದಕ್ಕೆ ಧನ್ಯವಾದ ಹೇಳುವುದು, ಸ್ಥಳೀಯ ಮಾರುಕಟ್ಟೆಗಳಿಗೆ ಹಠಾತ್‌ ಭೇಟಿ ನೀಡುವುದು, ದೈಹಿಕ ದೂರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ವೈಯಕ್ತಿಕವಾಗಿ ಅಂಗಡಿ ಮಾಲೀಕರಿಗೆ ಸೂಚನೆ ನೀಡುವುದು ಕಂಡುಬಂತು. ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ರಸ್ತೆಯಲ್ಲಿ ಪೈಂಟಿಂಗ್‌ ಮುಖಾಂತರ ಸಂದೇಶ ನೀಡಲಾಯಿತು.

ಈ ಎಲ್ಲಾ ಸಮಯದಲ್ಲಿ, ಬ್ಯಾನರ್ಜಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸುತ್ತಿದ್ದರು. ಕೇಂದ್ರದೊಂದಿಗೆ ಸಮನ್ವಯವನ್ನೂ ಸಾಧಿಸಿದರು. ಬ್ಯಾನರ್ಜಿ ಅವರು ಖುದ್ದು ವಹಿಸಿರುವ ಆಸಕ್ತಿ ಮತ್ತು ಪಾಲ್ಗೊಳ್ಳುವಿಕೆಗೆ ಬಂಗಾಳದ ಜನರು ಮೆಚ್ಚುಗೆ ವ್ಯಕ್ತಪಡಿಸುತಿದ್ದು, ಉತ್ತಮವಾಗಿ ಸ್ಪಂದಿಸುತಿದ್ದಾರೆ. ಮುಖ್ಯಮಂತ್ರಿ ಮಮತಾ ಅವರು ತಮ್ಮನ್ನು ಹವಾನಿಯಂತ್ರಿತ ಕಚೇರಿಗೆ ಮಾತ್ರ ಸೀಮಿತಗೊಳಿಸಿಕೊಂಡಿಲ್ಲ. ಆದರೆ ತನ್ನ ರಾಜ್ಯದ ಪ್ರತಿಕ್ರಿಯೆಯಲ್ಲಿ ಮತ್ತು ಕರೋನ ವೈರಸ್ ಹರಡುವಿಕೆಯನ್ನು ಒಳಗೊಂಡಿರುವ ಸನ್ನದ್ಧತೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮುಂಚೂಣಿಯಿಂದ ಮುನ್ನಡೆಸುತ್ತಿದ್ದಾರೆ.

ಮಮತಾ ಅವರ ಖುದ್ದು ಪಾಲ್ಗೊಳ್ಳುವಿಕೆ ಬಂಗಾಳದಲ್ಲಿ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಿತು. ಎಷ್ಟರಮಟ್ಟಿಗೆಂದರೆ, ಹಿಂಸಾತ್ಮಕ ರಾಜಕೀಯ ವಾತಾವರಣಕ್ಕೆ ಹೆಸರುವಾಸಿಯಾದ ರಾಜ್ಯವು ಅದರ ತೀವ್ರತೆಯನ್ನೇ ಕಡಿಮೆ ಮಾಡಿತು. ಮತ್ತು ಸಾಂಕ್ರಾಮಿಕ ರೋಗವನ್ನ ಎಲ್ಲ ಪಕ್ಷಗಳ ಮುಖಂಡರೂ ಒಂದಾದರು. ರಾಜ್ಯದ ಬಿಜೆಪಿ ಅಧ್ಯಕ್ಷ ಮತ್ತು ಮದಿನಿಪುರದ ಸಂಸದ ದಿಲೀಪ್‌ ಘೋಷ್‌ ಅವರು ಇದು ರಾಜಕೀಯ ಬೆಕ್ಕು ಕಾಳಗದ ಸಮಯವಲ್ಲ. ನಾವೆಲ್ಲರೂ ಮಾನವೀಯತೆಯ ವಿರುದ್ಧದ ಸಾಮಾನ್ಯ ಶತ್ರುಗಳ ವಿರುದ್ಧ ಹೋರಾಡುತ್ತಿದ್ದೇವೆ. ನಾವು ಒಟ್ಟಾಗಿ ಈ ಹೋರಾಟವನ್ನು ನಡೆಸಬೇಕು ಎಂದು ಕರೆ ನೀಡಿದ್ದಾರೆ. ಈ ಬಿಕ್ಕಟ್ಟಿನ ಈ ಸಮಯದಲ್ಲಿ ನಾವು ಸರ್ಕಾರದ ಪರವಾಗಿ ನಿಲ್ಲುತ್ತೇವೆ. ರಾಜಕೀಯವನ್ನು ಹಿಂದೆ ಬಿಟ್ಟು ನಾವು ಮಮತಾ ಅವರೊಂದಿಗೆ ಕೈ ಜೋಡಿಸಿದ್ದೇವೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮತ್ತು ಮಾಜಿ ರಾಜ್ಯ ಆರೋಗ್ಯ ಸಚಿವ ಸೂರ್ಯ ಕಾಂತ ಮಿಶ್ರಾ ಹೇಳಿದರು.

ವರದಿಗಳ ಪ್ರಕಾರ ಏಪ್ರಿಲ್ 9 ರ ವರೆಗೆ ಪಶ್ಚಿಮ ಬಂಗಾಳವು ಕೇವಲ 1,889 ಕೋವಿಡ್‌-19 ಪರೀಕ್ಷೆಗಳನ್ನು ನಡೆಸಿತ್ತು. ಆದರೆ ಮಹಾರಾಷ್ಟ್ರದಲ್ಲಿ 30,766 ಪರೀಕ್ಷೆಗಳನ್ನೂ ರಾಜಸ್ಥಾನದಲ್ಲಿ 18,000 ಮತ್ತು ಕೇರಳದಲ್ಲಿ 12,710 ಪರೀಕ್ಷೆಗಳನ್ನೂ ನಡೆಸಲಾಗಿತ್ತು. ಆದರೆ ಏಪ್ರಿಲ್‌ 24 ರ ಅಂಕಿ ಅಂಶಗಳ ಪ್ರಕಾರ ರಾಜ್ಯವು 8,933 ಪರೀಕ್ಷೆಗಳನ್ನು ನಡೆಸಿದೆ – ಇದು ಏಪ್ರಿಲ್ 9 ರ ಪರೀಕ್ಷಾ ಅಂಕಿ ಅಂಶಗಳಿಗಿಂತ 372% ಹೆಚ್ಚಾಗಿದೆ. ಕಳೆದ ಮೂರು ದಿನಗಳಲ್ಲಿ ರಾಜ್ಯವು ಕ್ರಮವಾಗಿ 855, 953 ಮತ್ತು 943 ಪರೀಕ್ಷೆಗಳನ್ನು ನಡೆಸಿದೆ. ಪರೀಕ್ಷೆಗಳ ವೇಗ ಇತರ ರಾಜ್ಯಗಳಿಗಿಂತ ಮುಂದಿದೆ.

2021 ರ ರಾಜ್ಯ ಚುನಾವಣೆಗೆ ಮಮತಾ ತಯಾರಾಗಲು ಸಹಾಯ ಮಾಡುತ್ತಿರುವ ಮತದಾನ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಈಗ ಕೋವಿಡ್-19 ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆ ಎಂದು ರಾಜ್ಯದ ಪ್ರಾದೇಶಿಕ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಪಶ್ಚಿಮ ಬಂಗಾಳವು ಕೋವಿಡ್‌-19 ವಿರುದ್ದ ಹೋರಾಟವಲ್ಲದೆ ಕೇಂದ್ರದೊಂದಿಗೆ ಸಂಘರ್ಷವನ್ನೂ ಅನುಭವಿಸುತ್ತಿದೆ. ಒಟ್ಟಿನಲ್ಲಿ ಕೇರಳದಂತೆಯೇ ಪಶ್ಚಿಮ ಬಂಗಾಳವೂ ಕೂಡ ಮತ್ತೊಂದು ಯಶಸ್ವಿ ರಾಜ್ಯವಾಗಲಿ.

Tags: Covid 19Lockdownmamata benerjeeWest Bengalಕೋವಿಡ್-19ಪಶ್ಚಿಮ ಬಂಗಾಳಮಮತಾ ಬ್ಯಾನರ್ಜಿಲಾಕ್‌ಡೌನ್‌
Previous Post

ತಿಹಾರ್‌ ಜೈಲಿನಿಂದಲೇ ʼರಂಝಾನ್‌ʼ ಆರಂಭಿಸುವಂತಾದ CAA ವಿರೋಧಿ ಗರ್ಭಿಣಿ ಹೆಣ್ಣು ಮಗಳು!

Next Post

“ಮುತ್ತಿನಂತಹ ಮುತ್ತುರಾಜ್” – ಸಿನಿಮಾ ನಿರ್ದೇಶಕ ಮಹೇಶ್ ಬಾಬು ಅವರ ಮನದಾಳದ ಮಾತು.

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
"ಮುತ್ತಿನಂತಹ ಮುತ್ತುರಾಜ್" - ಸಿನಿಮಾ ನಿರ್ದೇಶಕ ಮಹೇಶ್ ಬಾಬು ಅವರ ಮನದಾಳದ ಮಾತು.

"ಮುತ್ತಿನಂತಹ ಮುತ್ತುರಾಜ್" - ಸಿನಿಮಾ ನಿರ್ದೇಶಕ ಮಹೇಶ್ ಬಾಬು ಅವರ ಮನದಾಳದ ಮಾತು.

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada