• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಅಸ್ಸಾಂ ನಲ್ಲಿ ಚಿರತೆಯನ್ನ ಹೊಡೆದು ಸಾಯಿಸಿದ ಯುವಕರ ತಂಡ!

by
June 8, 2020
in ದೇಶ
0
ಅಸ್ಸಾಂ ನಲ್ಲಿ ಚಿರತೆಯನ್ನ ಹೊಡೆದು ಸಾಯಿಸಿದ ಯುವಕರ ತಂಡ!
Share on WhatsAppShare on FacebookShare on Telegram

ಕೇರಳದ ಪಾಲಕ್ಕಾಡ್‌ ನಲ್ಲಿ ಹಂದಿ ಬೇಟೆಗಾಗಿ ತೆಂಗಿನಕಾಯಿಯಲ್ಲಿ ಇರಿಸಿದ ಸ್ಫೋಟಕದಿಂದಾಗಿ ಅದನ್ನು ತಿಂದ ಗರ್ಭಿಣಿ ಆನೆ ಸತ್ತಿರುವ ಘಟನೆ ಮಾಸುವ ಮುನ್ನವೇ ಅಸ್ಸಾಂ ನ ಗುವಾಹಟಿಯಲ್ಲಿ ವಸತಿ ಪ್ರದೇಶಕ್ಕೆ ನುಗ್ಗಿದ್ದ ಚಿರತೆಯೊಂದನ್ನು ಗುಂಪೊಂದು ಭೀಕರವಾಗಿ ಥಳಿಸಿ ಕೊಂದು ಹಾಕಿದೆ. ಮಾತ್ರವಲ್ಲದೇ ಕೊಂದು ಹಾಕಿದ ಚಿರತೆಯನ್ನ ಊರೆಲ್ಲಾ ಮೆರವಣಿಗೆ ನಡೆಸಿರುವ ತಂಡ ಅದನ್ನ ವೀಡಿಯೋ ಮಾಡಿ ಜಾಲತಾಣದಲ್ಲಿ ವೈರಲ್‌ ಮಾಡಿವೆ. ಅಷ್ಟಕ್ಕೇ ಸುಮ್ಮನಾಗದ ಯುವಕರ ಗುಂಪು ನಂತರ ಅದರ ಹಲ್ಲು, ಉಗುರು ಹಾಗೂ ಚರ್ಮವನ್ನೂ ಕಿತ್ತು ಹಾಕಿದೆ.

ADVERTISEMENT

ಘಟನೆ ಸಂಬಂಧ ಈಗಾಗಲೇ ಪೊಲೀಸರು ಆರು ಮಂದಿಯನ್ನ ಬಂಧಿಸಿದ್ದಾರೆ. ಅಲ್ಲದೇ ಉಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ವಸತಿ ಪ್ರದೇಶಕ್ಕೆ ಚಿರತೆ ನುಗ್ಗಿದ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತಾದರೂ ಅವರು ಸ್ಥಳಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಒಂದು ವೇಳೆ ಅವರು ತಕ್ಷಣವೇ ಬರುತ್ತಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಅನ್ನೋದಾಗಿ ಅಲ್ಲಿನ ಸ್ಥಳೀಯರು ಹೇಳಿಕೊಂಡಿದ್ದಾರೆ.

ಭಾನುವಾರ ಬೆಳಿಗ್ಗೆಯೇ 5 ಗಂಟೆಗೆ ಮಾಹಿತಿ ಪಡೆದಿದ್ದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದಿದ್ದರಾದರೂ ಆ ನಂತರ ಅಲ್ಲಿಂದ ಆ ಚಿರತೆ ಓಡಿ ಹೋಗಿತ್ತು. ಇದರಿಂದಾಗಿ ಅರಣ್ಯಾಧಿಕಾರಿಗಳು ಸುಮ್ಮನಾಗಿದ್ದಾರೆ. ಆದರೆ ಆನಂತರ ಘಟನೆ ನಡೆದ ಬಳಿಕವಷ್ಟೇ ಅವರು ಎಚ್ಚೆತ್ತುಕೊಂಡಿದ್ದಾರೆ. ಅದಾಗಲೇ ಜಾಲತಾಣ ತುಂಬಾ ಯುವಕರ ತಂಡದ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಆದರೆ ಅಸ್ಸಾಂ ರಾಜ್ಯ ಸರಕಾರದ ಮೂಲದ ಪ್ರಕಾರ, ಚಿರತೆಯನ್ನ ಬೆನ್ನಟ್ಟಿದ್ದ ಜನರು ಅದನ್ನ ಮೀಸಲು ಅರಣ್ಯ ಪ್ರದೇಶದಲ್ಲಿಯೇ ಕೊಂದು ಹಾಕಿದ್ದಾಗಿ ತಿಳಿಸಿದೆ. ಆದರೆ ಕಳೆದ ಒಂದು ವರುಷದಲ್ಲಿ ಅಸ್ಸಾಂ ನಲ್ಲಿ ಐದು ಚಿರತೆಗಳ ಹತ್ಯೆಯಾಗಿರುವುದು ವರದಿಯಾಗಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎಪ್ರಿಲ್‌ ತಿಂಗಳ ಲಾಕ್‌ಡೌನ್‌ ಸಮಯದಲ್ಲಿಯೇ ನಾಲ್ಕು ಚಿರತೆಗಳನ್ನ ಹತ್ಯೆಯಾಗಿತ್ತು ಎನ್ನಲಾಗಿದೆ. ಅರಣ್ಯಾಧಿಕಾರಿಗಳ ಬೇಜವಾಬ್ದಾರಿ ಹಾಗೂ ಮುನ್ನೆಚ್ಚರಿಕಾ ಕ್ರಮ ವಹಿಸದ ಕಾರಣ ಅದು ಮುಂದುವರೆದಿದೆ ಅನ್ನೋ ಮಾತು ಅಲ್ಲಿನ ಪರಿಸರ ಪ್ರೇಮಿಗಳಿಂದ ಕೇಳಿ ಬಂದಿದೆ.

ಆದರೆ ಗುವಾಹಟಿ ವನ್ಯಜೀವಿ ರಕ್ಷಣಾ ವಿಭಾಗದ ಅಧಿಕಾರಿ ಜಿತೇಂದರ್‌ ಕುಮಾರ್‌ ಹೇಳಿಕೆ ಪ್ರಕಾರ, “ಚಿರತೆ ಫಾತಾಸಿಲ್‌ ಎಂಬ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿದ್ದ ಚಿರತೆಯನ್ನೇ ತಂಡ ಬೇಟೆಯಾಡಿದೆ. ಚಿರತೆ ಎಲ್ಲೂ ತನ್ನ ಗಡಿ ದಾಟಿ ಬಂದಿರಲಿಲ್ಲ. ಬದಲಿಗೆ ತಂಡವೇ ಅಲ್ಲಿಗೆ ತೆರಳಿತ್ತು. ನಾವು ಅಲ್ಲಿಗೆ ಬೆಳಿಗ್ಗೆ 7.30 ರ ವೇಳೆಗೆ ಹೋಗಿದ್ದೆವು. ಅಲ್ಲದೇ ಗುವಾಹಟಿಯ ಮೃಗಾಲಯದ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೆವು. ಅದನ್ನ ಸುರಕ್ಷಿತವಾಗಿ ಹಿಡಯುವಂತೆಯೂ ಸೂಚಿಸಿದ್ದೆವು. ಆದರೆ ಆ ಸಮಯದಲ್ಲಿ ಅದು ತಪ್ಪಿಸಿಕೊಂಡು ಓಡಿ ಹೋಗಿತ್ತು. ಆದರೆ ಆ ಬಳಿಕ ಆ ಚಿರತೆಯನ್ನ ಹತ್ಯೆಗೈಯಲಾಗಿದೆ” ಎಂದಿದ್ದಾರೆ.

“ಅದಾಗಲೇ ಗಾಯಗೊಂಡು ಓಡಿ ಹೋಗಿದ್ದ ಚಿರತೆಯನ್ನ ಹಿಂಬಾಲಿಸದಂತೆಯೂ ನಾನು ಹೇಳಿದ್ದೆ. ಆ ಬಳಿಕ ಅಲ್ಲಿಂದ ಹತ್ತು ಗಂಟೆ ವೇಳೆಗೆ ನಾನು ಅಲ್ಲಿಂದ ಹೊರಟಿದ್ದೇನೆ. ಆದರೆ ಮಧ್ಯಾಹ್ನದ ನಂತರ ರೇಂಜ್‌ ಆಫೀಸರ್‌ ನನಗೆ ಮಾಹಿತಿ ನೀಡಿದಾಗ ವಿಷಯ ತಿಳಿಯಿತು” ಅಂತಾ ಜಿತೇಂದರ್‌ ಸಿಂಗ್ ತಿಳಿಸಿದ್ದಾರೆ.

ಅಲ್ಲದೇ ಅದಾಗಲೇ ಓಡಿ ಹೋಗಿದ್ದ ಚಿರತೆಗೆ ಯಾವುದೇ ರೀತಿಯಲ್ಲೂ ತೊಂದರೆ ನೀಡದಂತೆ ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಸೂಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸ್ಥಳೀಯರು ಮಾತ್ರ, ಚಿರತೆ ತಮ್ಮ ಸಾಕು ಆಡು, ಕೋಳಿ ಹಾಗೂ ನಾಯಿಗಳನ್ನ ಬೇಟೆಯಾಡಿತ್ತು ಎಂದಿದ್ದಾರೆ.

ಕಳೆದ ಎಪ್ರಿಲ್‌ ಇದೇ ಅಸ್ಸಾಂ ರಾಜ್ಯದ ಗೊಲಾಘಾಟ್‌ ಜಿಲ್ಲೆಯಲ್ಲಿ ಚಿರತೆ ಬೇಟೆಯಾಡಿದ ಸಂಬಂಧ ವೀಡಿಯೋ ಫೂಟೇಜ್‌ ಆಧಾರದ ಮೇಲೆಯೇ ಐವರನ್ನ ಬಂಧಿಸಲಾಗಿತ್ತು. ಇದು ಮಾತ್ರವಲ್ಲದೇ ಇದೇ ಜಿಲ್ಲೆಯಲ್ಲಿ ಮತ್ತೂ ಮೂರು ಚಿರತೆಗಳನ್ನ ಸ್ಥಳೀಯರು ಕೊಂದು ಹಾಕಲಾಗಿದ್ದರೆ, ಐದು ಚಿರತೆಗಳನ್ನ ಅರಣ್ಯ ಸಿಬ್ಬಂದಿಗಳು ರಕ್ಷಿಸಿದ್ದರು. ಇದೆಲ್ಲವೂ ಎಪ್ರಿಲ್‌ ತಿಂಗಳ ಲಾಕ್‌ಡೌನ್‌ ಸಮಯದಲ್ಲಷ್ಟೇ ನಡೆದಿತ್ತು. ಇನ್ನೊಂದು ಚಿರತೆಯನ್ನ ಪೊಳಿಸ್‌ ಸಿಬ್ಬಂದಿಯೊಬ್ಬ ಜೊರ್ಹಾಟ್‌ ಜಿಲ್ಲೆಯಲ್ಲಿ ಶೂಟ್‌ ಮಾಡಿ ಕೊಂದು ಹಾಕಿದ್ದ.

ಒಟ್ಟಿನಲ್ಲಿ ಅಸ್ಸಾಂ ರಾಜ್ಯವೊಂದರಲ್ಲೇ ಈ ರೀತಿ ಹಲವು ಚಿರತೆಗಳನ್ನ ಮಾಂಸದ ಉದ್ದೇಶಕ್ಕಾಗಿಯೂ ಅಲ್ಲಿನ ಸ್ಥಳೀಯರು ಬೇಟೆಯಾಡುತ್ತಲೇ ಬಂದಿದ್ದಾರೆ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಆದರೆ ಕೇರಳದ ಗರ್ಭಿಣಿ ಆನೆ ಸಾವು ಪ್ರಕರಣದಿಂದಾಗಿ ಚಿರತೆ ಹತ್ಯೆ ಪ್ರಕರಣ ಬಹುದೊಡ್ಡದಾಗಿ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಸಂರಕ್ಷಿತ ಅರಣ್ಯ ವಲಯ ಅಥವಾ ಪ್ರಕೃತಿ ಮೇಲಿನ ಮಾನವನ ಹಸ್ತಕ್ಷೇಪ ಅತಿಯಾಗಿದ್ದರಿಂದಲೇ ಚಿರತೆ ಹಾಗೂ ಮನುಷ್ಯರ ನಡುವಿನ ಮುಖಾಮುಖಿ ಅತಿಯಾಗತೊಡಗಿದೆ ಅಂತಾ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Tags: Assamguwahatileopard murderಅಸ್ಸಾಂಗುವಾಹಟಿಚಿರತೆ ಹತ್ಯೆ
Previous Post

ಶಿಕ್ಷಕರ ಪರೀಕ್ಷೆಯಲ್ಲಿ ಅಕ್ರಮ: ಟಾಪರ್‌ಗೆ ರಾಷ್ಟ್ರಪತಿಯ ಹೆಸರೇ ಗೊತ್ತಿಲ್ಲ!

Next Post

ಬೆಂಗಳೂರು ಮಾಡೆಲ್‌ ಎದುರು ಸೋತ ಗುಜರಾತ್‌ ಮಾಡೆಲ್

Related Posts

ಹ್ಯಾಪಿ ಬರ್ತ್ ಡೇ ರಾಹುಲ್ ಗಾಂಧಿ..! – ರಾಗಾ ಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ ! 
Top Story

ಹ್ಯಾಪಿ ಬರ್ತ್ ಡೇ ರಾಹುಲ್ ಗಾಂಧಿ..! – ರಾಗಾ ಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ ! 

by Chetan
June 20, 2025
0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul gandhi) ನಿನ್ನೆ (ಜೂನ್.19) 55ನೇ ವರ್ಷಕ್ಕೆ ಕಾಲಿಟ್ಟಿದ್ದು,ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಜೊತೆಗೆ  ಅಭಿಮಾನಿಗಳು ತಮ್ಮ...

Read moreDetails
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
Next Post
ಬೆಂಗಳೂರು ಮಾಡೆಲ್‌ ಎದುರು ಸೋತ ಗುಜರಾತ್‌ ಮಾಡೆಲ್

ಬೆಂಗಳೂರು ಮಾಡೆಲ್‌ ಎದುರು ಸೋತ ಗುಜರಾತ್‌ ಮಾಡೆಲ್

Please login to join discussion

Recent News

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್
Top Story

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

by ಪ್ರತಿಧ್ವನಿ
June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 
Top Story

ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 

by Chetan
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

June 20, 2025
ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada