• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ʼಮೇಕ್‌ ಇನ್‌ ಇಂಡಿಯಾʼಕ್ಕೆ ಇದು ಸಕಾಲ.. ಆದರೆ ಅಷ್ಟೊಂದು ಸುಲಭವಲ್ಲ!

by
June 20, 2020
in ದೇಶ
0
ʼಮೇಕ್‌ ಇನ್‌ ಇಂಡಿಯಾʼಕ್ಕೆ ಇದು ಸಕಾಲ.. ಆದರೆ ಅಷ್ಟೊಂದು ಸುಲಭವಲ್ಲ!
Share on WhatsAppShare on FacebookShare on Telegram

ಭಾರತ-ಚೀನಾ ಗಡಿ ಪ್ರದೇಶವಾದ ಲಡಾಖ್‌ ನ ಗಾಲ್ವಾನ್‌ ಕಣಿವೆ ಪ್ರದೇಶದಲ್ಲಿ ನಡೆದ ಸಂಘರ್ಷದ ಬಳಿಕ ಭಾರತೀಯರ ಆಕ್ರೋಶ ಹೆಚ್ಚಾಗಿದೆ. ಈ ಹಿಂದೆ ಟಿಕ್‌ಟಾಕ್‌ ಗಷ್ಟೇ ಸೀಮಿತವಾಗಿದ್ದ ಆಕ್ರೋಶ, ಈಗ ಮನೆಯಲ್ಲಿರುವ ಚೀನಾ ಉತ್ಪನ್ನಗಳ ಮೇಲೂ ವ್ಯಕ್ತವಾಗತೊಡಗಿದೆ. ಪರಿಣಾಮ ತಮ್ಮ ಕೈಯಾರೆ ಚೀನಾ ವಸ್ತುಗಳಿಗೆ ಮುಕ್ತಿ ನೀಡ ತೊಡಗಿದ್ದಾರೆ. ಮಾತ್ರವಲ್ಲದೇ ಚೀನಾ ಜೊತೆ ಭಾರತ ನಡೆಸಿರುವ ಒಪ್ಪಂದಗಳನ್ನು ಕೈ ಬಿಡುವಂತೆಯೂ ಸರಕಾರವನ್ನ ಆಗ್ರಹಿಸುತ್ತಿದ್ದಾರೆ. ʼಆಲ್‌ ಇಂಡಿಯಾ ಟ್ರೇಡರ್ಸ್‌ʼ ಅಂಗಸಂಸ್ಥೆ ʼಕಾನ್ಫಿಡರೇಶನ್‌ ಆಫ್‌ ಆಲ್‌ ಇಂಡಿಯಾ ಟ್ರೇಡರ್ಸ್‌ʼ (CAIT) ಚೀನಾ ಸರಕುಗಳ ಬಹಿಷ್ಕಾರಕ್ಕೆ ಸೆಲೆಬ್ರಿಟಿಗಳ ಬೆಂಬಲವನ್ನೂ ಯಾಚಿಸಿದ್ದು ಮಾತ್ರವಲ್ಲದೇ, ಅಮಿತಾಬ್‌ ಬಚ್ಚನ್‌, ಅಕ್ಷಯ್‌ ಕುಮಾರ್‌, ಮಹೇಂದ್ರ ಸಿಂಗ್‌ ಧೋನಿ, ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ಅಮೀರ್‌ ಖಾನ್‌, ಕತ್ರಿನಾ ಕೈಫ್‌, ಸಲ್ಮಾನ್‌ ಖಾನ್‌, ದೀಪಿಕಾ ಪಡುಕೋಣೆ, ಆಯುಷ್ಮಾನ್‌ ಖುರ್ರಾನ ಇನ್ನೂ ಹಲವರಿಗೆ ಮನವಿಯನ್ನೂ ಮಾಡಿದೆ. “ಭಾರತೀಯ ಸಾಮಾನ್‌- ಹಮಾರಾ ಅಭಿಮಾನ್” ಅನ್ನೋ ಘೋಷವಾಕ್ಯದಡಿ ನಡೆಯಲಿರುವ ಅಭಿಯಾನಕ್ಕೆ ಬೆಂಬಲಿಸುವಂತೆ ಕೋರಿದೆ. ಆದರೆ ಈ ರೀತಿ ಮನವಿ ಮಾಡಿದ ದಿನಗಳ ನಂತರವೂ ಸೆಲೆಬ್ರಿಟಿಗಳಿಂದ ಯಾವುದೇ ರೀತಿಯ ಸ್ಪಂದನೆ ಬಹುವಾಗಿ ಸಿಕ್ಕಿಲ್ಲ ಅನ್ನೋದು ಮುಖ್ಯವಾಗುತ್ತಿದೆ. ಇದರಲ್ಲಿ ಸಲ್ಮಾನ್‌ ಖಾನ್,‌ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಅಭಿಮಾನಿಗಳಿಂದ ಬಹಿಷ್ಕಾರಗೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಟ್ವಿಟ್ಟರ್‌ ನಲ್ಲೂ Boycottsalmankhan ಅನ್ನೋ ಅಭಿಯಾನವೂ ನಡೆಯುತ್ತಿರುವುದು ವಿಪರ್ಯಾಸವೇ ಸರಿ.

This video shows love for sushant from Patna… #CBIEnquiryForSushantSinghRajput #boycottsalmankhan #BoycottKaranJoharGang
pic.twitter.com/JKAAgTpVgA

— nishit (@nishit2754) June 20, 2020


ಅದೇನೆ ಇರಲಿ ಭಾರತೀಯ ಸೆಲೆಬ್ರಿಟಿಗಳನ್ನ ಅಭಿಯಾನಕ್ಕೆ ಆಹ್ವಾನಿಸುವ ಮೂಲಕ ವ್ಯಾಪಾರಿಗಳಿಗೆ ಚೀನಾ ಸರಕುಗಳನ್ನ ವ್ಯಾಪಾರ ಮಾಡದಂತೆ ಹಾಗೂ ಖರೀದಿದಾರರಿಗೂ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಉತ್ತೇಜನ ನೀಡುವುದೇ ನಮ್ಮ ಉದ್ದೇಶ ಅನ್ನೋದಾಗಿ CAIT ತಿಳಿಸಿದೆ. ಅಲ್ಲದೇ “ಗಡಿಯಲ್ಲಿ ಚೀನಾ ನಡೆಸಿದ ದಾಳಿಯು ಅತ್ಯಂತ ಕ್ರೂರತನದ್ದಾಗಿದ್ದು, ಇದು ಪ್ರತಿಯೊಬ್ಬ ಭಾರತೀಯನನ್ನು ಕೆರಳುವಂತೆ ಮಾಡಿದೆ. ಆದ್ದರಿಂದ ಅವರ ವರ್ತನೆ ವಿರುದ್ಧ ಇಂತಹದ್ದೊಂದು ಅಭಿಯಾನದ ಅಗತ್ಯವಿದೆ” ಅಂತಾ CAIT ತಿಳಿಸಿದೆ.

We request Bollywood & Sports fraternity to join hands with CAIT for boycott of Chinese goods in the larger interest of the nation & urging celebrities who are endorsing Chinese products to immediately stop such endorsements: Confederation Of All India Traders (CAIT) pic.twitter.com/tMTrMihrzr

— ANI (@ANI) June 18, 2020


ADVERTISEMENT

ಈಗಾಗಲೇ ಕೇಂದ್ರ ಸರಕಾರವೇ ತನ್ನ ಅಧೀನದ BSNL ಗೆ ಈ ರೀತಿಯ ಸೂಚನೆ ನೀಡಿದ್ದು, ಆದ್ದರಿಂದ 4G ಸೇವೆಗಳನ್ನ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಯಾವುದೇ ಚೀನಾ ಸರಕುಗಳನ್ನ ಬಳಸದೇ ಇರಲು ನಿರ್ಧರಿಸಿದೆ. ಅಲ್ಲದೇ ಬಿಎಸ್‌ಎನ್‌ಎಲ್‌ ಈ ನಿಟ್ಟಿನಲ್ಲಿ ಟೆಂಡರ್‌ ಪ್ರಕ್ರಿಯೆಯನ್ನ ಮರು ಪರಿಶೀಲಿಸಲೂ ಮುಂದಾಗಿದೆ. ಅಲ್ಲದೇ ಖಾಸಗಿ ನೆಟ್‌ ವರ್ಕ್‌ ಸಂಸ್ಥೆಗಳಿಗೂ ಕೇಂದ್ರ ಸರಕಾರ ಮಾಹಿತಿಯನ್ನ ನೀಡಿದೆ. ಮಾತ್ರವಲ್ಲದೇ ಚೀನಾ ಮೂಲದ Oppo ಇದರ ನೂತನ ಸ್ಮಾರ್ಟ್‌ ಫೋನ್ ಬಿಡುಗಡೆಯ ಜಾಹೀರಾತನ್ನ ತಡೆ ಹಿಡಯಲಾಗಿದೆ. ಆದರೆ ದೆಹಲಿಯ ಹೃದಯ ಭಾಗದಲ್ಲಿರುವ ಅತ್ಯಂತ ದೊಡ್ಡ ಸಗಟು (Wholesale) ಮಾರುಕಟ್ಟೆ ವ್ಯಾಪಾರಿಗಳು, ಇಲ್ಲಿ ಭಾರೀ ಪ್ರಮಾಣದ ಚೀನಾ ಸರಕುಗಳು ತುಂಬಿಕೊಂಡಿದ್ದು, ಆದ್ದರಿಂದ CAIT ಹಾಗೂ ಕೇಂದ್ರ ಸರಕಾರದ ನಿರ್ಧಾರವನ್ನ ಪ್ರಶ್ನಿಸಿದ್ದಾರೆ. ದಾಸ್ತಾನುವಿರಿಸಿರುವ ಕೋಟ್ಯಾಂತರ ರೂಪಾಯಿ ಸರಕುಗಳನ್ನ ನಿಷೇಧಿಸಿದರೆ ಮರು ಹೊಂದಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಭಾರತದಲ್ಲಿ ʼಮೇಕ್‌ ಇಂಡಿಯಾʼ ಘೋಷಣೆಯ ಹೊರತಾಗಿಯೂ ತೆರಿಗೆಗಳು ಅಧಿಕವಿದ್ದ ಪರಿಣಾಮ ದೇಶಿ ಉತ್ಪನ್ನ ಮಾರುಕಟ್ಟೆಗಳು ಮಗುಮ್ಮಾಗಿ ಮಲಗಿಕೊಂಡಿದೆ. ಆದ್ದರಿಂದ ಕಳೆದ ಎರಡು ವರುಷಗಳಿಂದ ಭಾರತದಲ್ಲಿ ಅದೆಷ್ಟೋ ಸಣ್ಣ ಕೈಗಾರಿಕೆಗಳು ನಷ್ಟ ಅನುಭವಿಸಿ ಮುಚ್ಚಿ ಕೊಂಡಿದ್ದಾವೆ.

ಇನ್ನು ಕಳೆದ ಬಾರಿ ಪರಿಸರ ಕಾಳಜಿಯಿಂದ ಸುಪ್ರೀಂ ಕೋರ್ಟ್‌ ಪಟಾಕಿ ಸಿಡಿಸಲು ನಿಷೇಧ ಹೇರಿದ್ದರಿಂದ ಚೀನಾ ಪಟಾಕಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯವಾಗಿಲ್ಲ. ಇದು ಭಾರತೀಯ ಉದ್ಯಮಿಗಳಿಗೂ ಸಾಕಷ್ಟು ನಷ್ಟು ಅನುಭವಿಸುವಂತೆ ಮಾಡಿತ್ತು. ಹಾಗಂತ ಚೀನಾ ಮಾರುಕಟ್ಟೆಯ ಸರಕು ಅನ್ನೋದು ಇನ್ನೊಂದು ರೂಪದಲ್ಲಿ ಮಾರುಕಟ್ಟೆಯನ್ನ ಸೇರಿಕೊಂಡಿತ್ತು. ದೀಪಾವಳಿ ಬಳಸುವ ದೀಪಗಳು, ಫ್ಯಾನ್ಸಿ ಲೈಟ್ಸ್‌, ಅಲಂಕಾರಿಕ ಉಡುಗೊರೆಗಳು ಹೀಗೆ ಚೀನಾ ಸರಕುಗಳು ಭಾರತದ ಮಾರುಕಟ್ಟೆಯಲ್ಲಿ ಅಜರಾಮರವಾಗಿ ಕಾಣುವಂತಾಗಿತ್ತು.

2017-18 ರಲ್ಲಿ ಚೀನಾ ಸರಕುಗಳ ಬಹಿಷ್ಕಾರ ಅಭಿಯಾನದಿಂದಾಗಿ ಮಾಡಿರುವುದರಿಂದ, ಚೀನಾದಿಂದ ಖರೀದಿಸಬಹುದಾದ ವಾರ್ಷಿಕ 76 ಬಿಲಿಯನ್‌ ಡಾಲರ್‌ ಬೆಲೆಯ ಸರಕುಗಳನ್ನ ಭಾರತ ಕೈ ಬಿಟ್ಟಿತ್ತು ಅಂತಾ CAIT ಮುಖ್ಯ ಕಾರ್ಯದರ್ಶಿ ಪ್ರವೀಣ್‌ ಖಾಂಡೇಲ್‌ವಾಲ್‌ ತಿಳಿಸಿದ್ದಾರೆ. ಅಲ್ಲದೇ ಇದು ಮುಂದುವರಿದು 2021 ರ ವರ್ಷಾಂತ್ಯಕ್ಕೆ 1 ಲಕ್ಷ ಕೋಟಿ ಮೌಲ್ಯದ ಸರಕುಗಳ ಆಮದಿನಲ್ಲಿ ಕಡಿತಗೊಳಿಸುವ ಯೋಜನೆಯನ್ನ ಹಾಕಿಕೊಂಡಿದೆ ಎಂದಿದ್ದಾರೆ.

ಆದರೆ ಚೀನಾ ವಸ್ತುಗಳ ಬಹಿಷ್ಕಾರ ಮಾಡುತ್ತಲೇ, ʼಮೇಕ್‌ ಇನ್‌ ಇಂಡಿಯಾʼ ಕ್ಕೆ ಪ್ರೇರಣೆ ಸಿಗಬಹುದು, ದೇಶೀಯ ಕಂಪೆನಿಗಳು ತಲೆ ಎತ್ತಬಹುದು ಅನ್ನೋ ಲೆಕ್ಕಾಚಾರವೂ ಸುಲಭದ್ದಲ್ಲ. ಯಾಕೆಂದರೆ ಸದ್ಯ ಇಲ್ಲಿ ಅಂತಹ ಅವಕಾಶಗಳೇ ಕಾಣಸಿಗುತ್ತಿಲ್ಲ. ತಲೆ ಬುಡವಿಲ್ಲದ ತೆರಿಗೆ ಲೆಕ್ಕಚಾರಗಳು ಈಗಾಗಲೇ ಹಲವು ಕಂಪೆನಿಗಳನ್ನ ಬಾಗಿಲು ಮುಚ್ಚುವಂತೆ ಮಾಡಿವೆ. ಅಲ್ಲದೇ ಚೀನಾ ವಸ್ತುಗಳಿಗೆ ಪರ್ಯಾಯ ಸರಕುಗಳು ಭಾರತದಲ್ಲಿ ಇಲ್ಲದೇ ಇರುವುದು ಕೂಡಾ ಅಷ್ಟು ಸುಲಭವಾಗಿ ಚೀನಾವನ್ನ ಬಿಟ್ಟು ಸರಿಯುವಂತಿಲ್ಲ ಅನ್ನೋ ಹಾಗಾಗಿದೆ. ಆದ್ದರಿಂದ ಕೇಂದ್ರ ಸರಕಾರ ಸಣ್ಣ ಕೈಗಾರಿಕೆಗಳಿಗೆ, ಬಿಡಿಭಾಗಗಳನ್ನ ಉತ್ಪಾದಿಸುವ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಹಾಗಿದ್ದಲ್ಲಿ ಮಾತ್ರ ಭಾರತ ತನ್ನ ʼಮೇಕ್‌ ಇನ್‌ ಇಂಡಿಯಾʼ ಜೊತೆಗೆ ಚೀನಾ ವಸ್ತುಗಳ ಬಹಿಷ್ಕಾರ ಅನ್ನೋ ಅಭಿಯಾನಕ್ಕೆ ಅರ್ಥ ಬಂದೀತು.

Tags: India-china stand offMake in IndiaPM Modiಚೀನಾ-ಭಾರತ ಗಡಿ ಸಂಘರ್ಷಪ್ರಧಾನಿ ಮೋದಿಮೇಕ್ ಇನ್ ಇಂಡಿಯಾ
Previous Post

“ಮೋದಿ ಚೀನಾಕ್ಕೆ ಶರಣಾಗಿದ್ದಾರೆ..” ಪ್ರಧಾನಿ ಮೇಲಿನ ಭರವಸೆ ಕಳೆದುಕೊಂಡ ನಿವೃತ್ತ ಯೋಧರು

Next Post

ಭಾರತದಲ್ಲಿ 14,516 ಹೊಸ ಕರೋನಾ ಪ್ರಕರಣಗಳು ಪತ್ತೆ

Related Posts

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ
Top Story

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

by ಪ್ರತಿಧ್ವನಿ
June 26, 2025
0

ಮೋದಿ ಸರ್ಕಾರದ ಬದ್ಧತೆ ಪುನರುಚ್ಚರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಉದ್ಯಮ ವಲಯದ ಸಾಧಕ ಕಂಪನಿಗಳಿಗೆ ಗೋಲ್ಡನ್ ಪೀಕಾಕ್ ಪ್ರಶಸ್ತಿ ಪ್ರದಾನ ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಪರಿಸರ...

Read moreDetails

Tiger: ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಸೇರಿ ಮೂರು ಹುಲಿ ಮರಿಗಳ ಅಸಹಜ ಸಾವು ತನಿಖೆಗೆ ಸಚಿವರ ಆದೇಶ

June 26, 2025

Santosh Lad: ಅನ್ನದಾತನಿಗೆ ಜೋಡಿ ಎತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 26, 2025

Heartattack:1 ತಿಂಗಳಲ್ಲಿ 14 ಜನ ಸಾವು, 24 ಗಂಟೆಗಳಲ್ಲಿ ಹಾಸನದ ಇಬ್ಬರು ಹೃದಯಾಘಾತಕ್ಕೆ ಬಲಿ.

June 26, 2025

BJP Ex Renukacharya vs Congress MLA Shivaganga: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ರೇಣುಕಾಚಾರ್ಯ: ಎಂಎಲ್‌ಎ ಶಿವಗಂಗಾ

June 26, 2025
Next Post
ಭಾರತದಲ್ಲಿ 14

ಭಾರತದಲ್ಲಿ 14,516 ಹೊಸ ಕರೋನಾ ಪ್ರಕರಣಗಳು ಪತ್ತೆ

Please login to join discussion

Recent News

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ
Top Story

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

by ಪ್ರತಿಧ್ವನಿ
June 26, 2025
ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು
Top Story

ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು

by ಪ್ರತಿಧ್ವನಿ
June 26, 2025
ಕೊಡಗು ಮಳೆಹಾನಿ ಕುರಿತು ವರದಿಗೆ ಸೂಚನೆ: ಸಚಿವ ಎನ್.ಎಸ್.ಬೋಸರಾಜು
Top Story

ಕೊಡಗು ಮಳೆಹಾನಿ ಕುರಿತು ವರದಿಗೆ ಸೂಚನೆ: ಸಚಿವ ಎನ್.ಎಸ್.ಬೋಸರಾಜು

by ಪ್ರತಿಧ್ವನಿ
June 26, 2025
ಒಂದೇ ರಾಜ್ಯದವರಾಗಿ ನಾವು ನಾವೇ ನೀರಿಗಾಗಿ ಕಿತ್ತಾಡುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಒಂದೇ ರಾಜ್ಯದವರಾಗಿ ನಾವು ನಾವೇ ನೀರಿಗಾಗಿ ಕಿತ್ತಾಡುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 26, 2025
Top Story

Anil Shetty: ಸ್ಟಾರ್ಟಪ್ ಉದ್ಯಮಿ ಹಾಗೂ ಯುವರಾಜಕಾರಣಿ ಅನಿಲ್ ಶೆಟ್ಟಿ ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ

by Pratidhvani
June 26, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

June 26, 2025
ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು

ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು

June 26, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada