• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಐ.ಎಸ್. ಮುಖ್ಯಸ್ಥ ಬಾಗ್ದಾದಿ ಯಾರು ಮತ್ತು ಎಂತಹ ಕ್ರೂರಿ?

by
October 31, 2019
in ದೇಶ
0
ಐ.ಎಸ್. ಮುಖ್ಯಸ್ಥ ಬಾಗ್ದಾದಿ ಯಾರು ಮತ್ತು ಎಂತಹ ಕ್ರೂರಿ?
Share on WhatsAppShare on FacebookShare on Telegram

ಇಲ್ಲಿ ಮೂಡಿ ಅಲ್ಲಿ ಸರಿದು ಹೋಗುವ ನೆರಳಿನಂತೆ ಬದುಕಿದ್ದ ಬಾಗ್ದಾದಿ. ಸಾರ್ವಜನಿಕವಾಗಿ ಅವನು ಕಾಣಿಸಿಕೊಂಡಿದ್ದು ಕೈ ಬೆರಳುಗಳಲ್ಲಿ ಎಣಿಸಬಹುದಾದಷ್ಟು ಸಲ ಮಾತ್ರ. ಅವನ ದನಿ ಹೊರಗೆ ಕೇಳಿಬಂದದ್ದೂ ವಿರಳವೇ. ಇಸ್ಲಾಮ್ ಧರ್ಮದ ಪಠ್ಯಗಳ ಅತಿ ಕಠಿಣ ಕ್ರೂರ ವ್ಯಾಖ್ಯಾನಗಳಿಗೆ ಹೆಸರಾಗಿದ್ದ ಅವನು. ಇಸ್ಲಾಮಿ ವಿರೋಧಿಗಳಿಗೆ ಅವನು ನಿಗದಿ ಮಾಡಿದ್ದ ಏಕೈಕ ಶಿಕ್ಷೆ ಮರಣ. ತೀವ್ರವಾದಿ ಸಿದ್ಧಾಂತ ಮತ್ತು ವಾಸ್ತವವಾದಿ ಮಿಲಿಟರಿ ಬಲದ ಹದವರಿತ ಮಿಶ್ರಣವೇ ಇವನ ಕ್ಷಣಿಕ ಯಶಸ್ಸಿನ ಗುಟ್ಟು. ಸೋತ ಸದ್ದಾಮ್ ಹುಸೇನನ ಸೇನೆಯ ಬಹುತೇಕ ದಳಪತಿಗಳು ಇವನ ನೇತೃತ್ವದ ಇಸ್ಲಾಮಿಕ್ ಸ್ಟೇಟ್ ಬೆನ್ನಿಗೆ ನಿಂತಿದ್ದರು.

ADVERTISEMENT

ಖಿಲಾಫತ್ತು ಎಂಬುದು ಕಾಲ್ಪನಿಕ ಮುಸ್ಲಿಂ ಪ್ರಭುತ್ವ. ಅದರ ಮುಖ್ಯಸ್ಥ ಖಲೀಫಾ. ಮಹಮ್ಮದ್ ಪೈಗಂಬರರ ರಾಜಕೀಯ-ಧಾರ್ಮಿಕ ಉತ್ತರಾಧಿಕಾರಿ ಹಾಗೂ ಇಡೀ ಮುಸ್ಲಿಂ ಸಮುದಾಯದ ಮುಖ್ಯಸ್ಥ ಎಂದು ಅರ್ಥ. ಇರಾಕಿನವನಾದ ಬಾಗ್ದಾದಿಯನ್ನು 2014ರಲ್ಲಿ ಇಸ್ಲಾಮಿಕ್ ಸ್ಟೇಟ್ ಖಲೀಫ ಎಂದು ಆಯ್ಕೆ ಮಾಡಿಕೊಂಡಿತ್ತು.

ಯಾಜಿದಿಗಳನ್ನು ಲೈಂಗಿಕ ಗುಲಾಮರನ್ನಾಗಿ ಬಳಕೆ ಮಾಡಿಕೊಂಡು ಅವರ ಮಾರಣಹೋಮ ನಡೆಸಿದ್ದ. ಸಂಘಟಿತ ಅತ್ಯಾಚಾರ, ಮರಣದಂಡನೆಗಳನ್ನು ಜರುಗಿಸಿದ. ನರಸಂಹಾರಗಳನ್ನು ನಿರ್ದೇಶಿಸಿದ. ಸಾಮೂಹಿಕವಾಗಿ ಶಿಲುಬೆಗೇರಿಸಿದ, ಜನಾಂಗೀಯ ಹತ್ಯೆ ನಡೆಸಿದ, ಲೈಂಗಿಕ ಗುಲಾಮಗಿರಿಯ ಹಾಗೂ ಕೊಚ್ಚುವ, ಕಲ್ಲಿನಿಂದ ಹೊಡೆಯುವ ಹಾಗೂ ಸುಡುವ ಮೂಲಕ ಕೊಲ್ಲುವ ವಿಡಿಯೋಗಳನ್ನು ಮಾಡಿ ಜಗತ್ತಿನಾದ್ಯಂತ ಇಸ್ಲಾಮಿಕ್ ಸ್ಟೇಟ್ ನ ಪ್ರಚಾರ ನಡೆಸಿದ. ಮಿತಿಯಿಲ್ಲದ ಕ್ರೌರ್ಯ ಅವನದಾಗಿತ್ತು.

ಕನಿಷ್ಠ ಮೂರು ಸಲ ಮದುವೆಯಾಗಿದ್ದ ಅವನಿಗೆ ಕನಿಷ್ಠ ಆರು ಮಕ್ಕಳಿದ್ದರು ಎನ್ನಲಾಗಿದೆ. ಆದರೆ, 2013ರಲ್ಲಿ ಸಿರಿಯಾದಿಂದ ಅಪಹರಿಸಲಾದ ಅಮೆರಿಕೆಯ ಮಾನವ ಹಕ್ಕು ಹೋರಾಟಗಾರ್ತಿ 26 ವರ್ಷ ವಯಸ್ಸಿನ ಕೇಲಾ ಮುಲ್ಲರ್ ಸೇರಿದಂತೆ ಲೆಕ್ಕವಿಲ್ಲದಷ್ಟು ಯಾಜಿದಿ ಹೆಣ್ಣು ಸೆರೆಯಾಳುಗಳನ್ನು ತನ್ನ ಲೈಂಗಿಕ ಗುಲಾಮರನ್ನಾಗಿಸಿ ಇರಿಸಿಕೊಂಡಿದ್ದ. 2015ರಲ್ಲಿ ಮುಲ್ಲರ್ ಳನ್ನು ತಲೆಕಡಿದು ಬರ್ಬರ ಹತ್ಯೆಗೆ ಗುರಿ ಮಾಡಿದ. ಇಸ್ಲಾಮ್ ಮತಾವಲಂಬಿಗಳಲ್ಲದ ಯಾಜಿದಿ ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಬಾಗ್ದಾದಿ. ಹದಿನೈದು ವರ್ಷದ ಬಾಲೆಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದ್ದ.

ನಲವತ್ತಮೂರನೆಯ ವಯಸ್ಸಿಗಾಗಲೇ ಜಾಗತಿಕ ಭಯೋತ್ಪಾದನಾ ಜಾಲವನ್ನು ಕಟ್ಟಿ ಬೆಳೆಸಿದ್ದ. ನೂರು ದೇಶಗಳಿಂದ ಸಾವಿರಾರು ಮಂದಿ ಮುಸ್ಲಿಂ ಯುವಕರನ್ನು ಈ ಜಾಲಕ್ಕೆ ಸೆಳೆದು ಸೇರಿಸಿಕೊಂಡ. ಇವನ ಭಯೋತ್ಪಾದಕ ಸಂಘಟನೆ ಒಂದು ಹಂತದಲ್ಲಿ ಬ್ರಿಟನ್ನಿನಷ್ಟು ದೊಡ್ಡ ಭೂಪ್ರದೇಶವನ್ನು ನಿಯಂತ್ರಿಸುತ್ತಿತ್ತು. 36ಕ್ಕೂ ಹೆಚ್ಚು ದೇಶಗಳಲ್ಲಿ ಭಯೋತ್ಪಾದನೆ ಚಟುವಟಿಕೆಯನ್ನು ನಿರ್ದೇಶಿಸಿದ ಮತ್ತು ಪ್ರೇರೇಪಿಸಿದ.

ಸತ್ತಾಗ ಅವನ ವಯಸ್ಸು 48 ವರ್ಷ. 2014ರಿಂದ 2019ರ ನಡುವಣ ಐದು ವರ್ಷಗಳ ಕಾಲ ಭಯೋತ್ಪಾದನೆಯ ನೆತ್ತರಿನ ಹುಚ್ಚು ಹೊಳೆಯನ್ನೇ ಹರಿಸಿದ. 80 ದೇಶಗಳ 30-35 ಸಾವಿರ ಇಸ್ಲಾಮಿಕ್ ಹೋರಾಟಗಾರರು ಐ.ಎಸ್. ನಲ್ಲಿದ್ದರು. 2014ರಲ್ಲಿ ಖಿಲಾಫತ್ ನ್ನು (ಮುಸ್ಲಿಮ್ ಸಾಮ್ರಾಜ್ಯ) ಘೋಷಣೆ ಮಾಡಿದಾಗ ಒಂದು ಲಕ್ಷ ಚದರ ಕಿ.ಮೀ. ಪ್ರದೇಶ ಐ.ಎಸ್. ಅಧೀನದಲ್ಲಿತ್ತು. ಒಂದು ಹಂತದಲ್ಲಿ ಐ.ಎಸ್. ನ ದಿನನಿತ್ಯದ ತೈಲ ಆದಾಯ ಹತ್ತು ಲಕ್ಷದಿಂದ 20 ಲಕ್ಷ ಡಾಲರುಗಳಷ್ಟಿತ್ತು. 200 ಕೋಟಿ ಡಾಲರುಗಳಷ್ಟು ಆಸ್ತಿಪಾಸ್ತಿ ಹೊಂದಿತ್ತು. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಯೋತ್ಪಾದನಾ ಸಂಘಟನೆ ಎನಿಸಿತ್ತು. ಐ.ಎಸ್.ವಶಪಡಿಸಿಕೊಂಡಿದ್ದ ಭೂಪ್ರದೇಶವನ್ನು ಸಂಪೂರ್ಣವಾಗಿ ಬಿಡಿಸಿಕೊಳ್ಳಲು ಐದು ವರ್ಷಗಳೇ ಹಿಡಿದಿದ್ದವು.

ಶತಮಾನಗಳಷ್ಟು ಹಳೆಯ ಚರ್ಚುಗಳನ್ನು ಬಾಂಬ್ ಫ್ಯಾಕ್ಟರಿಗಳನ್ನಾಗಿ ಪರಿವರ್ತಿಸಿದ್ದ.

2017ರಲ್ಲಿ ಇವನ ಅವನತಿ ಆರಂಭ ಆಗಿತ್ತು. ಸಿರಿಯಾದ ರಾಜಧಾನಿ ರಾಕ್ಕಾ ಮತ್ತು ಇರಾಕ್ ನ ಮೋಸುಲ್ ಪಟ್ಟಣಗಳ ಮೇಲೆ ಐ.ಎಸ್. ಹಿಡಿತ ಕಳೆದುಕೊಂಡಿತ್ತು 2019ರ ಮಾರ್ಚ್ ವೇಳೆಗೆ ಅದರ ಕಟ್ಟಕಡೆಯ ನೆಲೆಯಾದ ಬಾಘುಜ್ ನಿಂದಲೂ ಓಡಿಸಲಾಗಿತ್ತು. ಹತ್ತು ವರ್ಷಗಳ ಕಾಲ ಇವನಿಗಾಗಿ ಜಾಗತಿಕ ಬೇಟೆ ಜರುಗಿತು. ತುಂಬ ನಂಬಿಕೆಯ ಸಹವರ್ತಿಗಳನ್ನು ಭೇಟಿ ಮಾಡುವಾಗಲೂ ತೀರಾ ಅತಿರೇಕದ ಸುರಕ್ಷಾ ಮುನ್ನೆಚ್ಚರಿಕೆ ವಹಿಸುತ್ತಿದ್ದ. ಯಾರನ್ನೂ ನಂಬುತ್ತಿರಲಿಲ್ಲ. ಇವನನ್ನು ಜೀವಸಹಿತ ಇಲ್ಲವೇ ಜೀವರಹಿತ ಹಿಡಿದು ತಂದವರಿಗೆ ಎರಡೂವರೆ ಕೋಟಿ ಡಾಲರುಗಳ ಬಹುಮಾನವನ್ನು ಘೋಷಿಸಿತ್ತು ಅಮೆರಿಕಾ ಸರ್ಕಾರ.

ಇವನ ಆಡಳಿತದಲ್ಲಿ ಹಾದರದ ಅಪಾದನೆ ಹೊತ್ತ ಹೆಂಗಸರನ್ನು ಕಲ್ಲುಗಳಿಂದ ಹೊಡೆದು ಕೊಲ್ಲಲಾಯಿತು. ಕಳ್ಳರ ಕೈಗಳನ್ನು ಕತ್ತರಿಸಲಾಯಿತು. ಈ ಭಯೋತ್ಪಾದಕರ ಆದೇಶ ಮೀರಿದವರ ತಲೆ ಕಡಿಯಲಾಯಿತು. ಇಸ್ಲಾಮಿಕ್ ಧರ್ಮಗ್ರಂಥಗಳಲ್ಲೂ ಕಾಣದ ಶಿಕ್ಷೆಗಳನ್ನು ನೀಡಲಾಯಿತು. ಜೋರ್ಡಾನಿನ ಪೈಲಟ್ ಒಬ್ಬನನ್ನು ಜೀವಂತ ಸುಡಲಾಯಿತು. ಡ್ರೋನ್ ವಿಮಾನಗಳನ್ನು ಬಳಸಿ ಸುಡುವ ಚಿತ್ರೀಕರಣ ಮಾಡಲಾಯಿತು. ಗೂಢಚಾರಿಕೆಯ ಆರೋಪ ಹೊತ್ತವರನ್ನು ಪಂಜರದಲ್ಲಿ ಕೂಡಿ ಹಾಕಿ ನೀರಿನಲ್ಲಿ ಮುಳುಗಿಸಲಾಯಿತು. ಅವರು ಕಡೆಯ ಉಸಿರೆಳೆಯುವ ಸಂಕಟವನ್ನು ನೀರಿನಡಿ ಚಿತ್ರೀಕರಿಸಲಾಯಿತು. ಟಿ-55 ಟ್ಯಾಂಕ್ ಗಳನ್ನು ಹತ್ತಿಸಿ ಜಜ್ಜಿ ಕೊಲ್ಲಲ್ಪಟ್ಟವರು ಅದೆಷ್ಟೋ ಮಂದಿ. ಕಸಾಯಿ ಖಾನೆಗಳಲ್ಲಿ ತಲೆ ಕೆಳಗಾಗಿ ತೂಗು ಹಾಕಿ ಮಾಂಸದ ಪ್ರಾಣಿಗಳನ್ನು ಕತ್ತರಿಸುವಂತೆ ಕತ್ತರಿಸುತ್ತಿದ್ದುದೂ ಉಂಟು. ಇವುಗಳ ಚಿತ್ರೀಕರಣವನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡಲಾಗುತ್ತಿತ್ತು.

ಇವನ ಕ್ರೌರ್ಯ, ಹಿಂಸೆ ಆಟಾಟೋಪಗಳು ಇವನನ್ನು ಬಗ್ಗು ಬಡಿಯಬೇಕೆಂಬ ಅಮೆರಿಕಾ ನೇತೃತ್ವದ ಸಮ್ಮಿಶ್ರ ಪಡೆಗಳ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದವು. ಹತ್ತು ವರ್ಷಗಳ ಹಿಂದೆಯೇ ಅವನು ಮೊಬೈಲ್ ಫೋನ್ ಬಳಕೆಯನ್ನು ಕೈ ಬಿಟ್ಟಿದ್ದ. ದೂತರು ತಲುಪಿಸುತ್ತಿದ್ದ ಸಂದೇಶಗಳನ್ನೇ ನೆಚ್ಚುತ್ತಿದ್ದ.

Tags: Abu Bakr al-BaghdadiIslamic StateSyriaUnited States of AmericaUS President Donald Trumpಅಬೂ ಬಾಕರ್ ಅಲ್ ಬಾಗ್ದಾದಿಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಇಸ್ಲಾಮಿಕ್ ಸ್ಟೇಟ್ಸಿರಿಯಾ
Previous Post

ನಿಮ್ಮ ‘ಅಪತ್ಕಾಲದ ಬಂಧು’ ಚಿನ್ನದ ಮೇಲೂ ಮೋದಿ ಸರ್ಕಾರ ಕಣ್ಣಿಟ್ಟಿದೆಯೇ ?

Next Post

ಉತ್ತರ ಪ್ರದೇಶದಲ್ಲಿ ಗ್ಯಾಂಗ್‌  ರೇಪ್‌ ಪ್ರಕರಣಗಳು ದೇಶದಲ್ಲೇ ಅತ್ಯಧಿಕ

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ಉತ್ತರ ಪ್ರದೇಶದಲ್ಲಿ ಗ್ಯಾಂಗ್‌  ರೇಪ್‌ ಪ್ರಕರಣಗಳು ದೇಶದಲ್ಲೇ ಅತ್ಯಧಿಕ

ಉತ್ತರ ಪ್ರದೇಶದಲ್ಲಿ ಗ್ಯಾಂಗ್‌  ರೇಪ್‌ ಪ್ರಕರಣಗಳು ದೇಶದಲ್ಲೇ ಅತ್ಯಧಿಕ

Please login to join discussion

Recent News

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?
Top Story

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

by ಪ್ರತಿಧ್ವನಿ
December 14, 2025
ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್
Top Story

ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 14, 2025
ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ
Top Story

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

by ಪ್ರತಿಧ್ವನಿ
December 14, 2025
ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ
Top Story

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

by ಪ್ರತಿಧ್ವನಿ
December 14, 2025
Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!
Top Story

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

by ಪ್ರತಿಧ್ವನಿ
December 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

December 14, 2025
ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

December 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada