ಬೆಂಗಳೂರು : ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಂಗೂ ಫ್ರೀ, ನಂಗೂ ಫ್ರೀ ಎಂದಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಉಲ್ಟಾ ಹೊಡೆದಂತಿದೆ . ಗ್ಯಾರಂಟಿ ಯೋಜನೆ ಕುರಿತಂತೆ ಇಂದು ಸಂಪುಟ ಸಭೆ ಕರೆದಿದ್ದ ಕಾಂಗ್ರೆಸ್ ನಾಯಕರು ಸಂಪುಟ ಸಭೆಯನ್ನು ನಾಳೆಗೆ ಮುಂದೂಡಿದ್ದಾರೆ. ಈ ವಿಚಾರವಾಗಿ ಇಂದು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಎಲ್ಲಾ ಯೋಜನೆಗಳಿಗೆ ಮಾನದಂಡ ಹಾಕುವುದು ಅನಿವಾರ್ಯ ಎಂದಿದ್ದಾರೆ.
ಸರ್ಕಾರದ ಪ್ರತಿಯೊಂದು ರೂಪಾಯಿಗೂ ಮಾನದಂಡ ಇರುತ್ತದೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಗೆ ಮಾನದಂಡ ಹಾಕುವುದು ಅನಿವಾರ್ಯ . ಪ್ರಧಾನಿ ಮೋದಿಯವರ ಯೋಜನೆಯಲ್ಲಿಯೂ ಮಾನದಂಡ ಇದೆ ಅಲ್ಲವೇ..? ಎಂದು ಪ್ರಿಯಾಂಕ್ ಖರ್ಗೆ ವಿಪಕ್ಷಗಳಿಗೆ ಪ್ರಶ್ನಿಸಿದ್ದಾರೆ.
ನಾವು ಬಡವರಿಗೆ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತೇವೆ. ಗ್ಯಾರಂಟಿ ಕಾರ್ಡ್ ಜಾರಿ ಬಗ್ಗೆ ಫ್ರೇಮ್ವರ್ಕ್ ನಡೆಯುತ್ತಿದೆ. ಶೀಘ್ರದಲ್ಲಿಯೇ ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆ ತಲುಪಿಸುತ್ತೇವೆ ಎಂದಿದ್ದಾರೆ.