ಭಾರತ ಕ್ರಿಕೆಟ್ ತಂಡ ಬರೋಬ್ಬರಿ 17 ವರ್ಷಗಳ ಬಳಿಕ ಟಿ-20 ವಿಶ್ವಕಪ್ನಲ್ಲಿ ಗೆಲುವು ದಾಖಲಿಸಿದ ಟೀ ಇಂಡಿಯಾ, ಕ್ರಿಕೆಟ್ ಇತಿಹಾಸವನ್ನು ಮರುಕಳಿಸುವಂತೆ ಮಾಡಿದೆ. ಭಾರತದ ಕಲಿಗಳು ವೆಸ್ಟ್ ಇಂಡೀಸ್ನ ಬಾರ್ಬಡಸ್ನಲ್ಲಿ ನಡೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ಪಾರುಪತ್ಯ ಸಾಧಿಸಿದೆ. ಆದರೆ ಭಾರತ ತಂಡದ ಸಾಧನೆಗೂ ಕರ್ನಾಟಕಕ್ಕೂ ಸಂಬಂಧವೊಂದು ಹರಿದಾಡ್ತಿದೆ.
![](https://pratidhvani.com/wp-content/uploads/2024/06/WhatsApp-Image-2024-06-29-at-6.26.45-PM.jpeg)
ಯಾವುದೇ ದೇಶ ಕ್ರಿಕೆಟ್ನಲ್ಲಿ ICC ಆಯೋಜನೆ ಮಾಡುವ ಸರಣಿಯಲ್ಲಿ ವಿಜಯಶಾಲಿ ಆಗಬೇಕು ಅನ್ನೋದು ಕನಸು. 2007 ರಲ್ಲಿ ಆರಂಭವಾದ ಟಿ-20 ವಿಶ್ವಕಪ್ ಸರಣಿಯನ್ನು ಎಂ.ಎಸ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಗೆದ್ದು ಬೀಗಿತ್ತು. ಆ ಬಳಿಕ 2011 ರಲ್ಲಿ ಮತ್ತೆ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ತನ್ನದಾಗಿಸಿಕೊಂಡಿತ್ತು. ಅಂದಿನಿಂದ ಇಂದಿನವರೆಗೂ 13 ವರ್ಷಗಳ ಕಾಲ ಭಾರತ ICC ಸರಣಿಯಲ್ಲಿ
![](https://pratidhvani.com/wp-content/uploads/2024/06/13darshan.jpg)
ಟೀಂ ಇಂಡಿಯಾ 2ನೇ ಬಾರಿಗೆ ಟಿ-20 ವಿಶ್ವಕಪ್ನಲ್ಲಿ ಪ್ರಶಸ್ತಿ ಗೆದ್ದಿದೆ. ಬಾರ್ಬಡೋಸ್ನಲ್ಲಿ ನಡೆದ ಫೈನಲ್ ಮ್ಯಾಚ್ನಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 8 ನಷ್ಟಕ್ಕೆ ವಿಕೆಟ್ಗೆ 169ರನ್ ಗಳಿಸಿ ಸೋಲು ಅನುಭವಿಸಬೇಕಾಯ್ತು. ಇದೇ ರೀತಿ 2011 ರಲ್ಲೂ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು ಭಾರತ. ಆಗಲೂ ದರ್ಶನ್ ಜೈಲು ಪಾಲಾಗಿದ್ದರು.
![](https://pratidhvani.com/wp-content/uploads/2024/06/1716969124_1714586482_1714303999_T20-World-Cup-18-2024-04-5902100465a2e6bbca7131f3b71b8d00-1024x768.webp)
ದರ್ಶನ್ ಜೈಲಿನಲ್ಲಿ ಇರೋದಕ್ಕೆ ಈ ಬಾರಿ ಟಿ 20 ವಿಶ್ವಕಪ್ ಗೆದ್ದಿರುವುದು ಅನ್ನೋ ನಂಬಿಕೆ ದರ್ಶನ್ ಅಭಿಮಾನಿಗಳದ್ದು. ದರ್ಶನ್ ಜೈಲಿಗೆ ಹೋಗಿದ್ದರಿಂದಲೇ ಭಾರತ ಟೀಂ ಗೆಲ್ಲುವುದಕ್ಕೆ ಸಾಧ್ಯವಾಯಿತು. ಈ ಮೊದಲು 2011 ರಲ್ಲೂ ದರ್ಶನ್ ಜೈಲಿಗೆ ಹೋಗಿದ್ದರು. ಆಗಲೂ ಭಾರತದ ಗೆಲುಗಿನಲ್ಲಿ ದರ್ಶನ್ ಪಾತ್ರ ಇತ್ತು. ಈಗಲೂ ಟಿ 20 ವಿಶ್ವಕಪ್ ಗೆಲುವಿನಲ್ಲಿ ದರ್ಶನ್ ಪಾತ್ರವಿದೆ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.
![](https://pratidhvani.com/wp-content/uploads/2024/06/rfg-1024x576.jpg)