ಸ್ಯಾಂಡಲ್ವುಡ್(sandalwood) ನಟ, ನವರಸ ನಾಯಕ ಜಗ್ಗೇಶ್(jaggesh) ಅಭಿನಯದ ʻರಾಘವೇಂದ್ರ ಸ್ಟೋರ್ಸ್ʼ(raghavendra stores) ಸಿನಿಮಾ, ಕಳೆದ ವಾರವಷ್ಟೇ ಬಿಡುಗಡೆಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಇಂದು ಬೆಂಗಳೂರಿನ(bangalore) ಖಾಸಗಿ ಹೋಟೆಲ್ ಒಂದರಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ನಟ ಜಗ್ಗೇಶ್, ನಟಿ ಶ್ವೇತಾ ಶ್ರೀವತ್ಸವ್, ದತ್ತಣ್ಣ, ರವಿಶಂಕರ್ಗೌಡ, ಮಿತ್ರ, ನಿರ್ದೇಶಕ ಸಂತೋಷ್ ಆನಂದ್ ರಾಮ್(santhosh anandram) ಸೇರಿ ಅನೇಕರು ಭಾಗಿಯಾಗಿದ್ರು.
![](https://pratidhvani.com/wp-content/uploads/2023/05/200b9a31-ac33-4e2f-b09d-555f7b8b783b-1024x576.jpg)
ಕಾರ್ಯಕ್ರಮದಲ್ಲಿ ಮಾತ್ನಾಡಿದ ನಟ ಜಗ್ಗೇಶ್ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು. ʻನಾನು ಅಷ್ಟಾಗಿ ಪ್ರೇಕ್ಷಕರ ಜೊತೆ ನನ್ನ ಸಿನಿಮಾ ನೋಡೋಕೆ ಹೋಗಲ್ಲ. ಆದ್ರೆ ಈ ಸಲ ಸುಮಾರು 20 ಥಿಯೇಟರ್ಗಳಿಗೆ ಭೇಟಿ ನೀಡಿದ್ದೆ. ಅಲ್ಲಿ ʻರಾಘವೇಂದ್ರ ಸ್ಟೋರ್ಸ್ʼ(raghavendra stores) ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರ ಅಭಿಪ್ರಾಯ ಕೇಳಿ ಕಣ್ಣಲ್ಲಿ ನೀರು ಬಂತು ಅಂತ ನಟ ಜಗ್ಗೇಶ್ ಭಾವುಕರಾದರು.
![](https://pratidhvani.com/wp-content/uploads/2023/05/44230372-ca3a-409a-bc48-5f4131cef4d4-1024x576.jpg)
ನಟಿ ಶ್ವೇತಾ ಶ್ರೀವತ್ಸವ್(shwetha shrivatsav) ಮಾತನಾಡಿ, ʻನನಗೆ ನಮ್ಮೆಲ್ಲರ ಪ್ರೀತಿಯ ಜಗ್ಗೇಶ್ ಸರ್ ಜೊತೆ ನಟಿಸಲು ಅವಕಾಶ ಕೊಟ್ಟ ನಿರ್ದೇಶಕರಿಗೆ ಧನ್ಯವಾದಗಳು. ಮಗು ಆದ ಬಳಿಕ ʻರಾಘವೇಂದ್ರ ಸ್ಟೋರ್ಸ್ʼ ಸಿನಿಮಾದಿಂದ ಮತ್ತೆ ನನ್ನ ಸಿನಿ ಜರ್ನಿ ಸ್ಟಾರ್ ಆಗಿದೆ. ನನಗೆ ಅವಕಾಶ ಕೊಟ್ಟ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳುʼ ಎಂದರು.
![](https://pratidhvani.com/wp-content/uploads/2023/05/8306ce15-40a7-4b8a-b494-8f03e02f2067-1024x576.jpg)
ಇನ್ನು ನಟ ರವಿಶಂಕರ್ ಗೌಡ(ravishankar gowda) ಮಾತನಾಡಿ, ʻಚುನಾವಣೆ ಟೈಮ್ನಲ್ಲೇ ಯಾಕೆ ಸಿನಿಮಾ ರಿಲೀಸ್ ಮಾಡ್ತಿದ್ದೀರಾ ಅಂತ ಎಲ್ಲರೂ ಕೇಳ್ತಿದ್ರು. ನಾನು ಎಲೆಕ್ಷನ್ಗೂ ಎಂಟರ್ಟೈನ್ಮೆಂಟ್ಗೂ ಏನ್ ಸಂಬಂಧ ಅಂತಿದ್ದೆ. ಈಗ ಚಿತ್ರ ಯಶ್ವಸಿಯಾಗಿದೆʼ ಅಂತ ಹೇಳಿದ್ರು.
![](https://pratidhvani.com/wp-content/uploads/2023/05/55ae5a95-0a26-4fe5-b63f-3034e328f3c4-1024x576.jpg)
ಕೊನೆಯದಾಗಿ ಮಾತ್ನಾಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್, ʻರಾಘವೇಂದ್ರ ಸ್ಟೋರ್ಸ್ ಸಿನಿಮಾದ ಯಶಸ್ಸಿಗೆ ಕಾರಣರಾಗಿರುವ ಎಲ್ಲರಿಗೂ ನನ್ನ ಧನ್ಯವಾದ. ಮುಖ್ಯವಾಗಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಡಾಲಿ ಧನಂಜಯ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಯುವರಾಜ್ ಕುಮಾರ್ ಅವರಿಗೆ ಧನ್ಯವಾದ ತಿಳಿಸಿದರು.