ಅಫಜಲಪುರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (congress) ಪಕ್ಷದ ಅಭ್ಯರ್ಥಿ ಎಮ್.ವೈ.ಪಾಟೀಲ (M.Y.PATIL) ಗೆಲುವು ಸಾಧಿಸಿದ ಬೆನ್ನೆಲೆ ಪಾಟೀಲ ಕುಟುಂಬದ ಅಭಿಮಾನಿ ಮತ್ತು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಕಾಂತ ಕರಜಗಿ ಅವರು (CHANDRAKANTH) ತಮ್ಮ ಸ್ವ ಗ್ರಹದಿಂದ ಮಳೇಂದ್ರ ಶಿವಾಚಾರ್ಯರ ಗದ್ದುಗೆಗೆದೀರ್ಘ ದಂಡ ನಮಸ್ಕಾರ ಹಾಕಿದರು.

ಕಾರ್ಯಕ್ರಮಕ್ಕೆ ಬಂದ ನೂರಾರು ಜನರಿಗೆ ಹೊಳಿಗೆ ಊಟದ ಜೊತೆಗೆ ವಿವಿಧ ಬಗೆಯ ಅಡುಗೆಗಳನ್ನು ಮಾಡಿ ಉಣಬಡಿಸಿದರಲ್ಲದೆ, ಶಾಸಕ ಎಮ್.ವೈ.ಪಾಟೀಲರೊಂದಿಗೆ 40 ವರ್ಷಗಳ ಸುಧೀರ್ಘ ಸ್ನೇಹ ಹೊಂದಿರುವ ಚಂದ್ರಕಾಂತ ಕರಜಗಿ ಅವರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ವ್ಯಕ್ತಿಯಾಗಿದ್ದು, ಅವರ ರಾಜಕೀಯ ಜೀವನದ್ದುದ್ದಕ್ಕೂ ಕರಜಗಿ ಅವರ ಪಾತ್ರ ಬಹುಮುಖ್ಯವಾದುದ್ದಾಗಿದೆ.

ದೀರ್ಘ ದಂಡ ನಮಸ್ಕಾರ ಮುಗಿದ ನಂತರ ಕರಜಗಿ ಅವರಿಗೆ ಅಭಿಮಾನಿಗಳಿಂದ ಸನ್ಮಾನಗಳ ಸುರಿಮಳೆ ನಡೆಯಿತು. ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜೆ.ಎಮ್.ಕೊರಬು, ಎಸ್.ವೈ.ಪಾಟೀಲ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ (ZP MEMBER) ಅರುಣಕುಮಾರ ಪಾಟೀಲ, (ARUNKUMAR) ಸಿದ್ದಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಮತೀನ ಪಟೇಲ, ಫಿರೋಜ ಜಾಗಿರದಾರ, ಎಸ್.ಎಸ್.ಪಾಟೀಲ, ಕಾಂತು ಮ್ಯಾಳೇಶಿ, ಕಾಂತು ಕೆಲಕೆರಿ, ಶರಣು ಕುಂಬಾರ, ಚಂದಪ್ಪ ಬಳಗುಂಡಿ, ಮಹಾಂತಗೌಡ ಪಾಟೀಲ, ಅಶೋಕ ಪಾಟೀಲ ಅನೇಕರು ಉಪಸ್ಥಿತರಿದ್ದರು.






