• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಾಟ್ಸಪ್ಪ್ status ಕಣ್ರೀ..ಯಾಕೆ ಕೇಳ್ತಿರಾ ಆ …ಸ್ಟೇಟಸ್….ಸ್ಟೇಟಸ್….. ಸ್ಟೇಟಸ್…

ಪ್ರತಿಧ್ವನಿ by ಪ್ರತಿಧ್ವನಿ
June 25, 2025
in Top Story, ಜೀವನದ ಶೈಲಿ
0
ವಾಟ್ಸಪ್ಪ್ status ಕಣ್ರೀ..ಯಾಕೆ ಕೇಳ್ತಿರಾ ಆ …ಸ್ಟೇಟಸ್….ಸ್ಟೇಟಸ್….. ಸ್ಟೇಟಸ್…
Share on WhatsAppShare on FacebookShare on Telegram

ADVERTISEMENT

ಹುಟ್ಟು ಹಬ್ಬಕ್ಕೆ ಸಾವಿನ ವಿಷಯಕ್ಕೆ


ಕೋಪ ದ್ವೇಷ ಅಹಂಕಾರಕ್ಕೂ ಎಲ್ಲಾ ಸ್ಟೇಟಸ್
ಹೀಗೆ ಒಬ್ಬ ವ್ಯಕ್ತಿಯ ಮನಸ್ಥಿತಿ ಅರ್ಥ ಮಾಡ್ಕೊಳ್ಳೋಕೆ ನಾವು ಅವರ ವಾಟ್ಸಪ್ ಸ್ಟೇಟಸ್ ನೋಡಿದ್ರೇನೇ ಸಾಕು
ಒಬ್ಬ ದುರ್ಬಲ ವ್ಯಕ್ತಿಯ ಮನಸ್ಥಿತಿಯನ್ನ ಗುರ್ತಿಸೋದು ಬಹಳ ಸುಲಭ, ಹೇಗಪ್ಪಾ ಅಂದ್ರೆ
ಅವರ ಒಂದು ವಾಟ್ಸಪ್ಪ್ ಸ್ಟೇಟಸ್ ಕೇವಲ,
ಯಾರನ್ನು ಪ್ರೀತಿಸ್ಬೇಡಿ ಯಾರನ್ನು ನಂಬಬೇಡಿ,
ಯಾರು ಯಾರಿಗೂ ಆಗೋದಿಲ್ಲ,
ನಾನು ಯಾರನ್ನು ಸುಮ್ಮನೆ ಬಿಡುವುದಿಲ್ಲ,
ಜೀವನಾ ಸರಿಯಿಲ್ಲ,
ಎಲ್ಲವೂ ಮೋಸ……..ಇಂತಹ ಸಾಕಷ್ಟು ನಕಾರಾತ್ಮಕ ವಿಚಾರಗಳೇ ಜೊತೆಗೆ ಕೋಪ, ದ್ವೇಷ, ಸೇಡು ಮತ್ತು ಅಹಂಕಾರಗಳ ವಿಚಾರಗಳೇ ತುಂಬಿ ತುಳುಕಾಡುವಷ್ಟು ಕೆಟ್ಟ ಮನಸ್ಥಿತಿಯೇ ಅವರನ್ನ ಆವರಸಿಕೊಂಡಿರುತ್ತೆ,
ಇನ್ನೂ ಪ್ರಬಲ ವ್ಯಕ್ತಿಯ ಮನಸ್ಥಿತಿ ಅಥವಾ ಸ್ಟೇಟಸ್ ಬಗ್ಗೆ ಹೇಳುವುದಾದ್ರೆ ಅವರ ಸ್ಟೇಟಸ್ ಕೇವಲ,

Zameer Ahmed :  ನಾನು ಹಣ ಪಡೆದ್ರೆ ದೇವ್ರು ಒಳ್ಳೇದು ಮಾಡ್ತಾನಾ #pratidhvani

ಖುಷಿಯ ಸಂಗತಿಗಳು,
ಒಳ್ಳೆಯ ವಿಚಾರ ವಿನಿಮಯಗಳು,
ಸೋತವರಿಗೆ ಸ್ಪಂದಿಸುವ ವಿಚಾರಗಳು,
ಬದುಕಲು ಅಥವಾ ಜೀವಿಸಲು ಪ್ರೇರಣೆ ಕೊಡುವಂಥ ಮಾತುಗಳು,

ತಾನು ನಕ್ಕು ತನ್ನವರನ್ನ ನಗಿಸಲು ಹಾಕುವ ಕೆಲವು ಕಾಮಿಡಿಗಳು, ಕೊನೆಯ ವಿದಾಯ ವ್ಯಕ್ತ ಪಡಿಸುವ ನೋವು, ಸಾಧ್ಯವಾದಷ್ಟು ಎಲ್ಲರಿಗೂ ಸಂತೋಷಕ್ಕಾಗಿಯೇ ಬಳಸುವ ಸ್ಟೇಟಸ್ ಗಳಾಗಿರುತ್ತೆ ..

ವಾಟ್ಸಪ್ಪ್ ಬರುವುದಕ್ಕಿಂತ ಮುಂಚೆ ಎಲ್ಲ ರೀತಿಯ (ಎಮೋಷನ್ಸ್ ಗಳನ್ನು) ಭಾವನೆಗಳನ್ನ ತಲುಪಬೇಕಾದವಿರಿಗೆ ತಲುಪಿಸಿ ಸಂತಸವೋ ಅಥವಾ ದುಃಖವನ್ನ ವ್ಯಕ್ತ ಪಡಿಸ್ತಿದ್ವಿ ಆದರೆ ಈಗ ಹಾಗಿಲ್ಲ…

. ಮೊದಲಾಗಿದ್ದರೆ ನಮ್ಮ ಹುಟ್ಟು ಹಬ್ಬಕ್ಕೆ 20 ಕರೆಗಳಾದ್ರು ಬರುತಿತ್ತು. ಈಗ ಆಗಿಲ್ಲ… ಒಂದು ಎರಡು ಬರುವುದು ಸಹ ಹೆಚ್ಚು. ಸ್ಟೇಟಸ್ ಗೆ ಹಾಕಿಕೊಂಡರೆ ಆಯ್ತಲ್ಲ wish ಮಾಡಿದ ಹಾಗೇನೇ ಅಥವಾ ಸ್ಟೇಟಸ್ ಹಾಕದೆ ಇರುವವರು ಮೆಸೇಜ್ ಮಾಡಿದ್ರೆ ಸಾಕಪ್ಪ ಅಥವಾ ಮೆಸೇಜ್ ಮಾಡುವುದರಲ್ಲೂ ಚೋಟ ಮೆಸೇಜ್ ಫ್ರಾಕ್ಷನ್ ಆಫ್ ಸೆಕೆಂಡಲ್ಲಿ ಕೆಲಸ ಮುಗಿಸಬೇಕು ಅನ್ನುವ ಕಾಲ ಮತ್ತೆ phone ಮಾಡಿ ಸಮಯ ವ್ಯರ್ಥ ಮಾಡಿಕೊಳ್ಳಬೇಕೆ ಎನ್ನುವ ಯೋಚನೆ…(ಆದರೂ ಅವರವರ ವೈಯಕ್ತಿಕ ವಿಚಾರ ಮೆಸೇಜ್ ಮಾಡ್ಲಿಲ್ಲ ಅಂತ ಕೋಪಾನು ಇಲ್ಲ ಬೇರೆಯವರು ಮೆಸೇಜ್ ಮಾಡಬೇಕು ಅಂತ ಏನಿಲ್ಲ

ಕೆಲವರು ಎರಡನ್ನೂ ಮಾಡುತ್ತಾರೆ, ಅಂಥವರು ನಮ್ಮವರಿಗಾಗಿ, ನಮಗಾಗಿ 1 ಸೆಕೆಂಡ್ ಸಮಯ ಕೊಟ್ಟರು ನಾವು ಅವರನ್ನ ಅಭಿನಂದಿಸುವುದು ನಮ್ಮ ಕರ್ತವ್ಯ.

ಹೀಗೆ ದುರ್ಬಲ ಹಾಗೂ ಪ್ರಬಲ ವ್ಯಕ್ತಿ ಗಳ ಸ್ಟೇಟಸ್ ನೋಡಿಯೇ ಎಷ್ಟೋ ಜನರು ಪ್ರೇರಣೆ ಹೊಂದುತ್ತಾರೆ ಅದು ಕೆಟ್ಟದಾಗಿಯೂ ಹಾಗೂ ಒಳ್ಳೆರಾಗಿಯೂ ಆಗಬಹುದು… ಅವರ ಅವರ ದೃಷ್ಟಿಕೋನದಲ್ಲಿ ಒಳ್ಳೆಯವರು ಒಳ್ಳೆಯದನ್ನೆ , ಕೆಟ್ಟವರು ಕೆಟ್ಟದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ..

ಸ್ನೇಹಿತರೇ ನಮ್ಮ ಸ್ಟೇಟಸ್ ಗಳು ನೋಡುವವರಿಗೆ ಖುಷಿಯೂ ಹಾಗೂ ಪ್ರೇರಣೆ ತರುವಂತಾಗಲಿ. ಅದನ್ನ ಒಬ್ಬರನ್ನು ನೋಹಿಸುವ ಸಂದೇಶಗಳನ್ನು ಹಾಕುವುದುಕ್ಕೋಸ್ಕರ ಅಥವಾ ಚುಚ್ಚು ಮಾತುಗಳನ್ನ ಹಾಕಲು ಬಳಸಬೇಡಿ

FIR Against Anant Kumar Hegde, Gunman and Driver : ಅನಂತ್‌ ಕುಮಾ‌ರ್ ಹೆಗಡೆ ಸೇರಿ ಮೂವರ ಮೇಲೆ FIR

ಸ್ನೇಹಿತರೆ, ನಿಮೆಲ್ಲರಲ್ಲೂ ನನ್ನದೊಂದು ವಿನಂತಿ , ಸ್ಟೇಟಸ್ ಹಾಕುವ ಮುಂಚೆ ನೂರು ಬಾರಿ ಯೋಚನೆ ಮಾಡಿ… ಹಾಕುವುದಾದದ್ರೆ ಯಾವಾಗಲು ಪಾಸಿಟಿವ್ ವಿಷಯಗಳನ್ನೇ ಹಾಕಿ… ನೀವು ನೆಗೆಟಿವ್ ವಿಷಯಗಳನ್ನು ಹಾಕುವುದಾದ್ರೆ ನೀವು ದುರ್ಬಲ ವ್ಯಕ್ತಿ ಎಂದು ಗೊತ್ತಾದರೆ ಯಾರೂ ಸಹ ನಿಮ್ಮ ಜೊತೆ ಸ್ನೇಹವನ್ನಾಗಲಿ ವ್ಯವಹಾರವನ್ನಾಗಲಿ ಮಾಡಲು ಇಷ್ಟ ಪಡುವುದಿಲ್ಲ. ನಿಮ್ಮಿಂದ ಜನರು ದೂರ ಇರಲು ಬಯಸುತ್ತಾರೆ. ದಯವಿಟ್ಟು ಅಂತಹ ಒಂದು ತಪ್ಪನ್ನು ಯಾರು ಮಾಡ್ಬೇಡಿ
ನಿಮ್ಮ ವಾಟ್ಸಾಪ್ ಸ್ಟೇಟಸ್ ನ ವೀಕ್ಷಣೆಗಳು ದಿನೇ ದಿನೇ ಕಡಿಮೆ ಆಗುತ್ತಿದ್ದರೆ ಅರ್ಥ ಮಾಡಿಕೊಳ್ಳಿ ನಿಮ್ಮ ಸ್ಟೇಟಸ್ ಗಳು ಎಲ್ಲರಿಗೂ ಬೇಸರ ತರಿಸುತ್ತಿವೆ ಅಂತ.. ನಿಮ್ಮ ನಿಮ್ಮ ಸ್ಟೇಟಸ್ ನೋಡಿ ಖುಷಿಯಾಗಿ reply ಮಾಡೋ ಥರ ಇರಬೇಕು, ಹಾಗಂತ ಬರೀ ಜೋಕ್ಸ್ ಸ್ಟೇಟಸ್ ಹಾಕಬೇಡಿ ನಿಮಗೆ ಏನು ಕೆಲಸ ಇಲ್ಲ ಅಂತ ಅಂದುಕೊಳ್ಳುತ್ತಾರೆ,fake ಮೆಸೇಜ್, ರಾಜಕೀಯ, ಅಪಘಾತ ದ ವಿಡಿಯೋ ಗಳು ತೀರಾ ಅಸಹ್ಯ ಹಾಗೂ ಬೇಜಾರ ನ್ನೂ ಮೂಡಿಸುತ್ತವೆ. ಉತ್ತಮ ವ್ಯಕ್ತಿತ್ವ ರೂಡಿಸಿಕೊಳ್ಳಿ, ನಿಮ್ಮ ದೌರ್ಬಲ್ಯಗಳನ್ನು ಪ್ರದರ್ಶಿಸಬೇಡಿ.
ನೀವು ದುಃಖದಲ್ಲಿ ಬೇಜಾರಿನಲ್ಲಿ ಗೊಂದಲದಲ್ಲಿ ಇದ್ದೀರಾ ಅಂತ ನಿಮ್ಮ ಸ್ಟೇಟಸ್ ಮೂಲಕ ತೋರಿಸುವ ಪ್ರಯತ್ನ ಬೇಡ, ಗೊತ್ತಾದರೆ ಕಪಟ ಕಾಳಜಿ ತೋರಿಸುವವರು ನಿಮಗೆ ಹತ್ತಿರ ಆಗುತ್ತಾರೆ ಆಮೇಲೆ ಅದರ ಪರಿಣಾಮ ಏನಾಗುತ್ತೆ ಅಂತ ನಾನು ಮತ್ತೆ ಇಲ್ಲಿ ವಿವರಿಸಬೇಕಿಲ್ಲ ಅಲ್ವಾ.


ಮನಸ್ಸನ್ನು ಯಾರಿಗೋಸ್ಕರನೋ ಯಾವುದುಕ್ಕೋಸ್ಕರನೋ ಕಲ್ಮಶ ಮಾಡ್ಕೊಬಿಡಿ. ಹಾಗೆ ಅಂತಹ ಸ್ಟೇಟಸ್ ಗಳ ಅವಶ್ಯಕತೆ ಬೇಡ….. ಇದು ನಾನು ಒಂದು ಒಳ್ಳೆ ಉದ್ದೇಶಕ್ಕೆ ಹಾಗೂ ಮನಸ್ಥಿತಿಯನ್ನು ಹೊಂದಿರಿ ಎನ್ನುವುದಕ್ಕೆ ಹೇಳುತ್ತಿದ್ದೇನೆ. ಇದನ್ನ ನೀವು ಎಲ್ಲರೂ ಸರಿಯಾದ ರೀತಿಯಲ್ಲಿ ಸ್ವೀಕರಿಸುತ್ತೀರ ಎಂದು ಭಾವಿಸುತ್ತೇನೆ.
ನಮೆಲ್ಲರಿಗೂ ಅರ್ಥವಾಗಲಿ ನಮ್ಮ ದುರ್ಬಲ ಹಾಗೂ ಪ್ರಬಲ ಮನಸ್ಥಿತಿಯ ಸ್ಟೇಟಸ್ ಗಳ ಆಟಗಳು ನಮ್ಮನು ಹಾಗೂ ನಮ್ಮ ವ್ಯಕ್ತಿತವನ್ನು ಹೇಗೆ ರೂಪಿಸುತಿವೆಯೆಂದು
ಎಲ್ಲರಿಗು ಒಳ್ಳೆಯದಾಗಲಿ. ಜಾಸ್ತಿ ಮೊಬೈಲ್ ನೋಡುವುದನ್ನು ಬಿಡಿ ಪುಸ್ತಕಗಳು ಪತ್ರಿಕೆಗಳನ್ನ ಓದಿ ಮನೆ ಮುಂಭಾಗ ಶಟಲ್ ಕಾಕ್ ಆಡಿ ವಾಲಿಬಾಲ್ ಮಕ್ಕಳ ಜೊತೆ ಬಿಡುವಿನ ವೇಳೆಯಲ್ಲಿ ಕಾಲಹರಣ ಮಾಡಿ ಮೊಬೈಲ್ ಕಡಿಮೆ ಮಾಡುವ ವಿಧಾನ ಮಕ್ಕಳಿದ್ದಾಗ ಮೊಬೈಲ್ ನೋಡುವುದನ್ನು ಬಿಡಬೇಕು
ನವೀನ ಹೆಚ್ ಎ
ಹನುಮನಹಳ್ಳಿ ಅಂಕಣಕಾರರು ಲೇಖಕರು
ಕೆಆರ್ ನಗರ

Tags: deleting social mediahow social media affects mental healthhow to quit social medialife without social mediamaratona social mediaquit social mediaquitting social mediaSocial Mediasocial media addictionsocial media de elitesocial media detoxsocial media effectssocial media gamesocial media impactsocial media quitsocial media soundssocial media strategysocial media vs realitywhy i quit social media
Previous Post

ವಿಶೇಷ ಚೇತನ ಮಕ್ಕಳಿಗಾಗಿ ‘ಸಿತಾರೆ ಜಮೀನ್ ಪರ್’ ಚಿತ್ರದ ವಿಶೇಷ ಪ್ರದರ್ಶನ

Next Post

ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು CM ಮನವಿ..!

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
Next Post

ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು CM ಮನವಿ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada