ಹುಬ್ಬಳ್ಳಿಯಲ್ಲಿ ಕೊಲೆಯಾದ ವಿದ್ಯಾರ್ಥಿನಿ ನೇಹಾ ತಂದೆ ಯೂಟರ್ನ್ ಹೊಡೆದಿದ್ದಾರೆ. ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸ್ತಿಲ್ಲ, ಕನಿಷ್ಠ ಪಕ್ಷ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ ಎಂದು ಕಿಡಿಕಾರಿದ್ದರು. ಆ ಬಳಿಕ ನೇಹಾ ಹತ್ಯೆ ವಿಚಾರದಲ್ಲಿ ಬಿಜೆಪಿ ದೊಡ್ಡ ಮಟ್ಟದ ರಾಜಕೀಯ ಶುರು ಮಾಡಿತ್ತು. ರಾಜ್ಯಾದ್ಯಂತ ಪ್ರತಿಭಟನೆ ಮಾಡಿತ್ತು. ನೇಹಾ ಕುಟುಂಬಸ್ಥರಿಗೆ ನಾಯಕರೆಲ್ಲರೂ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡಿದ್ದರು. ನೇಹಾ ಪ್ರಕರಣ ರಾಜಕೀಯವಾಗಿ ತಿರುವು ಪಡೆಯುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್ ತಡವಾಗಿ ಆದರೂ ಎಚ್ಚೆತ್ತುಕೊಂಡಿದೆ.
ವಿದ್ಯಾರ್ಥಿನಿ ನೇಹಾ ಪೋಷಕರ ಜೊತೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ನೇಹಾ ಮನೆಗೆ ಭೇಟಿ ನೀಡಿದ್ದ ಸಚಿವ H.K ಪಾಟೀಲ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಆ ಬಳಿಕ ಹೆಚ್.ಕೆ ಪಾಟೀಲ್ ಸಿಎಂ ಸಿದ್ದರಾಮಯ್ಯಗೆ ಫೋನ್ ಕರೆ ಮಾಡಿ ನಿರಂಜನ್ ಹಿರೇಮಠಗೆ ಕೊಟ್ರು. ಈ ವೇಳೆ ನಿರಂಜನ್ ಹಿರೇಮಠಗೆ ಸಾಂತ್ವನ ಹೇಳಿದ ಸಿಎಂ ಸಿದ್ದರಾಮಯ್ಯ, Very Sorry ಎಂದಿದ್ದಾರೆ. ಜೊತೆಗೆ ನಾವು ನಿಮ್ಮ ಜೊತೆ ಇರ್ತೀವಿ ಅಂತಾ ಧೈರ್ಯ ಹೇಳಿದ್ದಾರೆ. ನೇಹಾ ತಂದೆ ನಿರಂಜನ್ ಕೂಡಾ, CID ತನಿಖೆಗೆ ಪ್ರಕರಣ ಹಸ್ತಾಂತರ ಮಾಡಿದ್ದಕ್ಕೆ ಸಮಾಧಾನ ಇದೆ ಎಂದಿದ್ದಾರೆ.
ನೇಹಾ ಹಿರೇಮಠ ಕೊಲೆಯಾದ ಬಳಿಕ ಬಿಜೆಪಿ ನಾಯಕರು ಹೇಳಿಕೆ ರೀತಿಯಲ್ಲೇ ಮಾತನಾಡ್ತಿದ್ದ ನಿರಂಜನ್ ಹಿರೇಮಠ, ಹತ್ಯೆ ಸಂಬಂಧ ದಿನಕ್ಕೊಂದು ಹೇಳಿಕೆ ನೀಡ್ತಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಮಾತನಾಡಿದ ಬಳಿಕ ನಿರಂಜನ್ ಹಿರೇಮಠ ವರಸೆ ಬದಲಿಸಿದ್ದಾರೆ.. ಮಾಹಿತಿ ಕೊರತೆಯಿಂದ ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದೆ. ಘಟನೆ ಬಗ್ಗೆ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿದೆ.. ಶಾಸಕರು, ಜಿಲ್ಲಾಧ್ಯಕ್ಷರು, ಮುಖಂಡರು ನಮ್ಮ ಪರ ನಿಂತಿದ್ದಾರೆ.. ವಿಶೇಷ ಕೋರ್ಟ್ ಸ್ಥಾಪನೆ ನಿರ್ಣಯಕ್ಕೆ ಧನ್ಯವಾದ ಹೇಳುತ್ತೇನೆ.. ನನ್ನ ಬೆನ್ನ ಹಿಂದೆ ರಾಜ್ಯ ಸರ್ಕಾರ ಕೆಲಸ ಮಾಡಿದೆ.. ನಾನು ತಪ್ಪಾಗಿ ಮಾತನಾಡಿದ್ದರೆ ಕ್ಷಮಿಸಿ ಅಂತಾ ಹೇಳಿದ್ದಾರೆ..