ದೆಹಲಿ : ಸಿಎಂ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದು ಕೂತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದೀಗ ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಕನಸಿಗೆ ಅಡ್ಡಗಾಲು ಹಾಕಲು ಯತ್ನಿಸಿದ್ದ ಡಿಕೆಶಿ ಕೊನೆ ಕ್ಷಣದಲ್ಲಿ ಯಾಕೆ ತನ್ನ ಪಟ್ಟು ಸಡಿಲಿಸಿದರು ಎಂಬುದಕ್ಕೆ ಕೊನೆಗೂ ಕಾರಣ ಬಯಲಾಗಿದೆ.

ಡಿಕೆಶಿ ಮನವೊಲಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆ ಸಂಪೂರ್ಣವಾಗಿ ವಿಫಲರಾಗುತ್ತಿದ್ದಂತೆಯೇ ಸೋನಿಯಾ ಗಾಂಧಿ ಮಧ್ಯರಾತ್ರಿ ಡಿಕೆಶಿಗೆ ವಿಡಿಯೋ ಕಾಲ್ ಮಾಡಿದ್ದರು ಎನ್ನಲಾಗಿದೆ. ಕೆಸಿ ವೇಣುಗೋಪಾಲ್ , ಸೋನಿಯಾಗಾಂಧಿ ಹಾಗೂ ಡಿಕೆಶಿ ನಡುವೆ ನಡೆದ ವರ್ಚುವಲ್ ಮೀಟಿಂಗ್ ಬಳಿಕ ಡಿಕೆಶಿ ತಮ್ಮ ಪಟ್ಟು ಸಡಿಲಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸೋನಿಯಾ ಗಾಂಧಿ ಎದುರು ಡಿಕೆಶಿ ಸಾಕಷ್ಟು ಷರತ್ತುಗಳನ್ನು ಇರಿಸಿದ್ದಾರೆ ಎನ್ನಲಾಗಿದ್ದು ಈ ಎಲ್ಲಾ ಷರತ್ತುಗಳಿಗೆ ಸೋನಿಯಾ ಗಾಂಧಿ ಒಪ್ಪಿಕೊಂಡ ಬಳಿಕ ಸಂಧಾನ ಸಭೆ ಯಶಸ್ವಿಯಾಗಿದೆ ಎನ್ನಲಾಗಿದೆ .