2024 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಕಾವು ಪಡೆದುಕೊಳ್ಳುವುದನ್ನು ಬಿಟ್ಟು ಸಪ್ಪೆ ಸಪ್ಪೆಯಾಗಿ ಹೋಗಿದೆ.
ಸುಮಲತಾ ಅಂಬರೀಶ್ ಅವರ ಒಂದೇ ಒಂದು ರಾಜಕೀಯ
ನಡೆಯಿಂದಾಗಿ ಇಡೀ ಮಂಡ್ಯ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗಿ ಹೋಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರ, ಈ ಬಾರಿ ಬಿಜೆಪಿ ಹೈಕಮಾಂಡ್ ನಾಯಕರ ಎಂಟ್ರಿಯಿಂದ, ಸರಳ ಅಖಾಡವಾಗಿ ಮಾರ್ಪಾಟ್ಟಿದ್ದು, ಮಂಡ್ಯದಲ್ಲಿ ಈ ಬಾರಿ ಒನ್ ಸೈಡ್ ಮ್ಯಾಚ್ (one side match) ಎಂಬುವ ವಾತಾವರಣ ನಿರ್ಮಾಣವಾಗಿದೆ.
![](https://pratidhvani.com/wp-content/uploads/2024/04/WhatsApp-Image-2024-04-03-at-5.07.41-PM-1-1024x576.jpeg)
ಅಷ್ಟಕ್ಕೂ ಕಳೆದ ಬಾರಿಯ ಮಂಡ್ಯ ಅಖಾಡಕ್ಕೂ, ಈ ಬಾರಿಯ ಮಂಡ್ಯ ಅಖಾಡಕ್ಕೂ ಇರುವ ಪ್ರಮುಖ ವ್ಯತ್ಯಾಸಗಳೇನು? ಕಳೆದ ಬಾರಿಯ ವಾಕ್ಸಮರದ ಅಖಾಡಕ್ಕೆ ಹೋಲಿಸಿಕೊಂಡ್ರೆ ಈ ಬಾರಿ ಮಂಡ್ಯ ಸಪ್ಪೆ ಸಪ್ಪೆಯಾಗಿದ್ದೇಕೆ? ಅಷ್ಟಕ್ಕೂ ಮಂಡ್ಯ ಕ್ಷೇತ್ರದ ಆಖಾಡ ಹೀಗೆ ಸಪ್ಪೆ ಅನ್ನಿಸಿಕೊಳ್ಳಲು ಕಾರಣವೇನು? ಎಂಬುದನ್ನು ಹುಡುಕುತ್ತಾ ಹೋದರೆ,
![](https://pratidhvani.com/wp-content/uploads/2024/04/WhatsApp-Image-2024-04-03-at-5.07.42-PM-1.jpeg)
- ಕಳೆದ ಬಾರಿಯ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಹಾಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅಖಾಡದಲ್ಲಿ ಆದೃಷ್ಟ ಪರೀಕ್ಷೆಗೆ ಎಂಟ್ರಿಯಾಗಿದ್ದು. ಈ ಬಾರಿ ಆ ರೀತಿಯ ಯಾವುದೇ ಘಟಾನುಘಟಿ ನಾಯಕರು ಆಖಾಡದಲ್ಲಿ ಇಲ್ಲದೇ ಇರುವುದು.
- ಕಳೆದ ಬಾರಿಯ ಆಖಾಡವನ್ನು ಅಂದಿನ ಸಿಎಂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು. ಇಂದು ಮಂಡ್ಯದ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ಥಿಕವಾಗಿ ಸದೃಢರಾಗಿದ್ದರೂ, ರಾಜಕೀಯದ ಮುಖವಾಗಿ ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಿರುವುದು.
- ಪುರುಷ v/s ಮಹಿಳೆ ಅಖಾಡದಲ್ಲಿ ಜಿದ್ದಾಜಿದ್ದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಇದ್ದರು. ಎದುರಾಳಿಯಾಗಿ ಸ್ವಾಭಿಮಾನಿ ಎಂದು ಘೋಷಿಸಿಕೊಂಡು ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಕಣಕ್ಕೆ ಎಂಟ್ರಿ ಕೊಟ್ಟಿದ್ರು.
- ಚುನಾವಣೆ ಘೋಷಣೆಗೂ ಮುನ್ನವೇ ಕಳೆದ ಬಾರಿ ಮಂಡ್ಯ ಕ್ಷೇತ್ರದಲ್ಲಿ ನಾಯಕರ ವಾಕ್ಸಮರ ತಾರಕಕ್ಕೇರಿತ್ತು. ಈ ಬಾರಿ ಅಂತಹ ವಾತಾವರಣ ನಿರ್ಮಾಣವಾಗದಂತೆ ಬಿಜೆಪಿ ಹೈಕಮಾಂಡ್ ಮೊದಲೇ ಎಂಟ್ರಿ ಕೊಟ್ಟು ಎಲ್ಲವನ್ನೂ ಸರಿಪಡಿಸಿದ್ದು.
- ಇನ್ನು ಕಳೆದ ಬಾರಿ ಚುನಾವಣಾ ಆಖಾಡದಲ್ಲಿ ನಾಯಕರ ಜಟಾಪಟಿ ಮಂಡ್ಯ ಗೆಲ್ಲಲೇಬೇಕೆಂಬ ಒನ್ಲೈನ್ ಅಜೆಂಡಾ, ಇಡೀ ಕ್ಷೇತ್ರದಲ್ಲಿ ಬೆಟ್ಟಿಂಗ್ ಕಟ್ಟುವ ಹಂತಕ್ಕೆ ತಲುಪಿತ್ತು. ಆದ್ರೆ ಈ ಬಾರಿ ಯುದ್ಧ ಆರಂಭಕ್ಕೂ ಮುನ್ನವೇ ಶಸ್ತ್ರಾಸ್ತ್ರಗಳನ್ನು ನಾಯಕರುಗಳು ತ್ಯಾಗ ಮಾಡಿದ್ದು, ಇದೊಂದು ಸಾಮಾನ್ಯ ಕ್ಷೇತ್ರದಂತಾಗಿದೆ.
![](https://pratidhvani.com/wp-content/uploads/2024/04/WhatsApp-Image-2024-04-03-at-5.07.41-PM-1024x576.jpeg)
ಹೀಗೆ ಕಳೆದ ಬಾರಿಯ ಮಂಡ್ಯ ಅಖಾಡಕ್ಕೂ ಈ ಬಾರಿಯ ಅಖಾಡಕ್ಕೂ ಸಾಕಷ್ಟು ವ್ಯತ್ಯಾಸಗಳಿರುವುದು ಕಂಡು ಬರುತ್ತಿದೆ.
![](https://pratidhvani.com/wp-content/uploads/2024/04/WhatsApp-Image-2024-04-03-at-5.07.42-PM-2.jpeg)