ತುಂಗಭದ್ರಾ ಜಲಾಶಯಕ್ಕೆ ನಾಳೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ ಮಾಡಲಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆಗೆ ಸಿದ್ದತೆ ಮಾಡಿಕೊಳ್ತಿದ್ದಾರೆ ಅಧಿಕಾರಿಗಳು. ರಸ್ತೆ, ಕಟ್ಟಡಗಳಿಗೆ ತೇಪೆ ಹಚ್ಚುವ ವರ್ಕ್ ಶುರು ಆಗಿದೆ. ಮುನಿರಾಬಾದ್ನಲ್ಲಿರುವ ನೀರಾವರಿ ಇಲಾಖೆಯ ಕಟ್ಟಡ, ಜಲಾಶಯದ ಭಾಗದಲ್ಲಿ ಸುಣ್ಣ ಬಣ್ಣ ಹೊಡೆಯಲಾಗ್ತಿದೆ. ಮುನಿರಾಬಾದ್ನ ರಸ್ತೆ ಗುಂಡಿ ಮುಚ್ಚುವ ಕಾರ್ಯವೂ ನಡೆಯುತ್ತಿದೆ. ಜಲಾಶಯದ ಭಾಗದ ರಸ್ತೆಗಳಿಗೆ ಡಾಂಬರ್ ಭಾಗ್ಯ ಸಿಗ್ತಿದೆ.
ಇತ್ತೀಚಿಗಷ್ಟೇ ಟಿಬಿ ಡ್ಯಾಂನ 19ನೇ ಗೇಟ್ ಕಿತ್ತು ಹೋಗಿತ್ತು. ಆ ಬಳಿಕ ಸಾಕಷ್ಟು ನೀರು ನದಿಗೆ ಹರಿದು ಹೋಗಿತ್ತು. ಆ ಬಳಿಕ ಹರಿವ ನೀರಿನಲ್ಲೇ ಡ್ಯಾಂಗೆ ಗೇಟ್ ಅಳವಡಿಸುವ ಕೆಲಸ ನಡೆದಿತ್ತು. ಯಶಸ್ವಿ ಕೂಡ ಆಗಿತ್ತು. ಇದೀಗ ಮತ್ತೆ ತುಂಗಾಭದ್ರಾ ಡ್ಯಾಂ ತುಂಬಿದ್ದು, ನಾಳೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ. ಎರಡನೇ ಬಾರಿಗೆ ಡ್ಯಾಂ ತುಂಬಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.