ಕಾಪಾಡು ಮಾದೇಶ್ವರ ಅಂತ ಮಲೆ ಮಹದೇಶ್ವರನ ( MM HIlls) ದರ್ಶನಕ್ಕೆ ಬಂದಿದ್ದ ಬಾಲಕಿಯೊಬ್ಬಳು ನಿರ್ಲಕ್ಷö್ಯದ ಕಾರು ಚಾಲನೆಯಿಂದ ಜೀವ ಬಿಟ್ಟಿದ್ದಾಳೆ. ಪಾರ್ಕಿಂಗ್ನಲ್ಲಿ ನಿಂತಿದ್ದ ಕಾರೊಂದು (Car) ಬಾಲಕಿ (Girl) ಎದೆ ಮೇಲೆ ಹರಿದು ದುರಂತ ನಡೆದುಹೋಯಿತು.
ತಮಿಳುನಾಡಿನ (Tamil Nadu) ಧರ್ಮಪುರಿ ಜಿಲ್ಲೆಯ ಉಳ್ಳಾಂಗ ಕೊಟ್ಟಾಯ್ ಗ್ರಾಮದ ಸುಶ್ಮಿತಾ (7) (Sushmitha) ಅಜ್ಜ ಅಜ್ಜಿ ಪೆರುಮಾಳ್ ಮತ್ತು ನಂಜಮ್ಮ ಜೊತೆ ಮಲೆ ಮಹದೇಶ್ವರನ ದರ್ಶನಕ್ಕೆ ಶನಿವಾರ ಬಂದಿದ್ದಾರೆ, ಭಾನುವಾರ ಸಂಜೆ ಊರಿಗೆ ವಾಪಸ್ ತೆರಳಲು ಬಸ್ ನಿಲ್ದಾಣಕ್ಕೆ ತೆರಳುವಾಗ, ರಂಗ ಮಂದಿರದ ಸಮೀಪದ ಕಾರ್ ಪಾರ್ಕಿಂಗ್ನಲ್ಲಿ ಕಾರು ನಿಲ್ಲಿಸಿಕೊಂಡಿದ್ದ ಮಹಿಳೆ ಏಕಾಏಕಿ ಕಾರು ಚಾಲನೆ ಮಾಡಿದ್ದರಿಂದ ಬಾಲಕಿಯ ಎದೆಯ ಮೇಲೆ ಕಾರು ಹರಿದಿದೆ.
ಏಳು ವರ್ಷದ ಬಾಲಕಿಯ ದುರಂತ ಸಾವು, ಅಜ್ಜ ಅಜ್ಜಿಯ ಗೋಳಾಟದಿಂದ ಮಲೆ ಮಾದೇಶ್ವರ ಬೆಟ್ಟದಲ್ಲಿ ಭಕ್ತರು ದುಃಖದಲ್ಲಿ ಮುಳುಗುವಂತಾಯಿತು.
#MMHills #Car #Car Accident #Girl #Death #careless #life #TamilNadu #grandparents