ಬಿಗ್ ಬಾಸ್ ಮನೆಯ ಕಂಟೆಸ್ಟೆಂಟ್ಗಳು ಕೆಲವು ವಾರಗಳನ್ನ ಪೂರೈಸಿ ಯಶಸ್ವಿಯಾಗಿ ಮುನ್ನುಗ್ತಿದ್ದಾರೆ. ಸೀಸನ್ 11ರಲ್ಲಿ ಒಟ್ಟು 13 ಸ್ಪರ್ಧಿಗಳು ಮನೆ ಒಳಗಿದ್ದು ,ಕಾಂಪಿಟೇಶನ್ ಜಾಸ್ತಿಯಾಗಿದೆ.
ಇದೀಗ ಬಿಗ್ ಬಾಸ್ ಮನೆಯ ಪ್ರೋಮೋ ಹೊರ ಬಿದ್ದಿದ್ದು ,ಇವತ್ತಿನ ಟಾಸ್ಕ್ ತುಂಬಾನೇ ವಿಭಿನ್ನವಾಗಿದೆ. ಹಾಗೂ ಕಳೆದ ಸೀಸನ್ ಅಲ್ಲು ಈ ಟಾಸ್ಕ್ ಆಡಿಸಿದ್ರು. ಇವತ್ತಿನ ಟಾಸ್ಕ್ ಏನಪ್ಪಾ ಅಂತ ಹೇಳಿದ್ರೆ ಪಗಡೆ ಆಟ .ಹೌದುಮೂರು ಜನರಿರುವಂತಹ ನಾಲ್ಕು ಗುಂಪುಗಳನ್ನು ವಿಂಗಡಿಸಲಾಗಿದೆ, ಪಗಡೆ ಆಟದ ೪ ಮೂಲೆಗೂ ಒಂದೊಂದು ಗುಂಪನ್ನು ನಿಲ್ಲಿಸಲಾಗಿದೆ..

ಇನ್ನು ಪ್ರತಿ ಗುಂಪಿನ ಕಾಯಿ ಚಲಾಯಿಸುವ ದಾರಿಯಲ್ಲಿ ಕೆಲವು ವಿಚಾರಗಳನ್ನು ಬರೆಯಲಾಗಿದೇ.ಆ ಬರೆದ ಸಾಲುಗಳ ಮೇಲೆ ಕಾಯಿ ಇಟ್ಟರೆ..ಅಲ್ಲಿ ಏನು ಬರೆದಿರೋತ್ತದೋ ಹಾಗೆ ಮಾಡಬೇಕಿರುತ್ತದೆ.

ಚೈತ್ರ ಕಾಯಿ ಚಲಾಯಿಸುವಾಗ,ಎದುರಾಳಿ ತಂಡದಿಂದ ಒಬ್ಬರನ್ನು ಉಳಿಸಿ ಎಂಬ ಸಾಲುಗಳು ಬರೆದಿರುತ್ತದೆ. ಚೈತ್ರ ಅವರು ಗೌತಮಿ, ತ್ರಿ ವಿಕ್ರಂ ಹಾಗೂ ಅನುಷಾ ಅವರು ಇರುವ ಗುಂಪಿನಿಂದ ಗೌತಮಿ ಅವರನ್ನು ಪಾರು ಮಾಡುತ್ತಾರೆ, ಇದೇ ವಿಚಾರವಾಗಿ ಅನುಷಾ ಹಾಗೂ ಚೈತ್ರ ನಡುವೆ ಮಾತಿನ ಚಕಮಕಿ ನಡೆಯುತ್ತದೆ.