ರಾಜ್ಯದಲ್ಲಿ ಪೂರ್ವ ಮುಂಗಾರಿನ(Pre-Monsoon) ಅಬ್ಬರ ಜೋರಾಗಿದೆ.. ಕಳೆದೊಂದು ವಾರದಿಂದ ರಾಜ್ಯದ ಬಹುತೇಕ ಕಡೆ ವರುಣಾರ್ಭಟ ಜೋರಾಗಿದ್ದು, ಮುಂದಿನ ನಾಲ್ಕೈದು ದಿನ ಮಳೆ ಅಬ್ಬರಿಸೋ ಬಗ್ಗೆ ಹವಾಮಾನ ಇಲಾಖೆ(Weather Department) ಮುನ್ಸೂಚನೆ ನೀಡಿದೆ.. ಮಳೆ ಆರ್ಭಟ ಹಿನ್ನೆಲೆ ಮಳೆ ಹಾನಿ ಪ್ರದೇಶಗಳಿಗೆ ಸಿಎಂ, ಡಿಸಿಎಂ ಬಸ್ನಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.. ನಾಯಂಡಹಳ್ಳಿ(Nayandahalli), ಗಾಳಿ ಆಂಜನೇಯ ದೇಗುಲದ ಬಳಿ ಪರಿಶೀಲನೆ ನಡೆಸಿ, ಕಾಲುವೆ ನಿರ್ಮಾಣಕ್ಕೆ ಅಂದಾಜು ವೆಚ್ಚದ ಮಾಹಿತಿ ಪಡೆದು ಸದ್ಯ ಹೊಸ ಕಾಲುವೆ ನಿರ್ಮಾಣಕ್ಕೆ 11.5 ಕೋಟಿ ಅನುದಾನ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ರು.
![](https://pratidhvani.com/wp-content/uploads/2024/05/Rain-2023-11-2b6e6e308b3aeda4577265fe5e68a8d9-3x2-2-1024x576.jpg)
ಸಿಟಿ ರೌಂಡ್ಸ್(City Rounds) ಬಳಿಕ ಸಿಎಂ ಮಾಧ್ಯಮಗಳ ಜೊತೆಗೆ ಮಾತನಾಡಿ ಇವತ್ತು ನಾನು, ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar) ಸೇರಿ ಬೆಂಗಳೂರು ರೌಂಡ್ಸ್ ಮಾಡಿದ್ದೇವೆ.. ನಮ್ಮ ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನಗರ ಶಾಸಕರು(Legislature), ಸಚಿವರಿದ್ದರು.. ಜೂನ್ನಿಂದ ನಮ್ಮಲ್ಲಿ ಮುಂಗಾರು ಪ್ರಾರಂಭ ಆಗಲಿದೆ.. ಈ ಬಾರಿ ಪೂರ್ವ ಮುಂಗಾರು ವಾಡಿಕೆಗಿಂತ ಹೆಚ್ಚಾಗಿಯೇ ಆಗಲಿದೆ.. ಇದರಿಂದಾಗಿ ಕೆಲವು ಕಡೆಗಳಲ್ಲಿ ಪ್ರವಾಹ ಆಗಿದೆ ಅಂತ ವರದಿಯಾಗಿತ್ತು. ಹೀಗಾಗಿ ಭೇಟಿ ಮಾಡಿದ್ದೇವೆ ಎಂದಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಕೂಡ ಯಲಹಂಕ(Yelahanka) ಕಡೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಲ್ಲಿನ ಸಮಸ್ಯೆಯನ್ನು ಈಗಾಗಲೇ ಬಗೆಹರಿಸಿದ್ದೇವೆ.. ಆ ಬಳಿಕ ಮೊದಲು ಗಾಳಿ ಆಂಜನೇಯ ದೇವಸ್ಥಾನದ ಬಳಿ ರಾಜಕಾಲುವೆ ವೀಕ್ಷಣೆ ಮಾಡಿದ್ದೇವೆ.. ಅಲ್ಲಿ ಮಳೆ ಜಾಸ್ತಿ ಬಂದಾಗ ನೀರು ಹರಿಯೋದಕ್ಕೆ ಎತ್ತರ ಸಾಕಾಗಲ್ಲ.. ಈ ರಾಜಕಾಲುವೆಯಲ್ಲಿ(Royal Canal) ಹೂಳು ಎತ್ತೋ ಕೆಲಸ ಪ್ರಗತಿಯಲ್ಲಿದೆ.. ಹೀಗಾಗಿ ಇಲ್ಲಿಂದಲೇ ಇನ್ನೊಂದು ಕಾಲುವೆ ನಿರ್ಮಾಣ ಮಾಡಲು ಸೂಚನೆ ಕೊಟ್ಟಿದ್ದೇನೆ ಎಂದಿದ್ದಾರೆ.
![](https://pratidhvani.com/wp-content/uploads/2024/05/IMG-20240518-WA0002-1-1024x745.jpg)
ಸಿಟಿ ರೌಂಡ್ಸ್ ವೇಳೆ ಬೆಂಗಳೂರಿನ ರಸ್ತೆಗಳ ಅಸಲಿ ದರ್ಶನ ಸಿಎಂ ಸಿದ್ದರಾಮಯ್ಯನವರಿಗೆ ಆಗಿರುವಂತಿದೆ.. ಹೀಗಾಗಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿ(BBMP) ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಮೇ 31ರವರೆಗೆ ಗಡುವು ನೀಡಿದ್ದಾರೆ. ಸದ್ಯ ಬೆಂಗಳೂರಿನ ವಾರ್ಡ್ ರಸ್ತೆಗಳಲ್ಲಿ 5,500 ಗುಂಡಿಗಳಿವೆ.. ತ್ವರಿತವಾಗಿ ಗುಂಡಿಗಳನ್ನು ಕ್ಲಿಯರ್ ಮಾಡಬೇಕು ಎಂದು ಹೇಳಿದ್ದಾರೆ. ಇನ್ನು ರಾಜಕಾಲುವೆ ಸಮಸ್ಯೆಯಿಂದ ನೆರೆ ಉಂಟಾದ್ರೆ ಬಿಬಿಎಂಪಿ ಇಂಜಿನಿಯರ್ಗಳನ್ನೇ (Engineer)ಹೊಣೆ ಮಾಡಲಾಗುವುದು ಅಂತಾ ಎಚ್ಚರಿಕೆ(Warning) ಕೊಟ್ಟಿದ್ದಾರೆ.
![](https://pratidhvani.com/wp-content/uploads/2024/05/Rain_Casual_Images-1.jpg)