
ಢಾಕಾ :ಬಾಂಗ್ಲಾದೇಶದಲ್ಲಿ ನಾಗರಿಕ ಸೇವೆಗಳಿಗೆ ನೇಮಕಾತಿ ವಿಚಾರದಲ್ಲಿ ಸರ್ಕಾರ ಮೀಸಲಾತಿ ನಿರ್ಣಯವನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಗಲಭೆಯಲ್ಲಿ ಇದುವರೆಗೂ 40 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ.ಪೊಲೀಸರು ಪ್ರತಿಭಟನಾಕಾರ ಮೇಲೆ ರಬ್ಬರ್ ಬುಲೆಟ್ ನಿಂದ ದಾಳಿ ನಡೆಸಿದ್ದರು. ಇದರಿಂದ ಉದ್ರಿಕ್ತರಾದ ಗುಂಪು ಪೊಲೀಸರನ್ನು ಅಟ್ಟಿಸಿಕೊಂಡು ಹೋಗಿ ಪೊಲೀಸ್ ಠಾಣೆ ಮತ್ತು ಕಚೇರಿಗಳಿಗೆ ಬೆಂಕಿಯಿಕ್ಕಿದೆ. ಗಲಭೆಯಲ್ಲಿ ಹಲವು ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ.
Sheikh Haseena is rigging elections over the years. She had all the opposition in prison. The main opposition leader has not been allowed to travel abroad for treatment. Only the rich & elite #Bangladeshi support her. She has given total power to Police.
— Sam (@SamKhan999) July 18, 2024
pic.twitter.com/P7BDRWo1KA
ಗಲಭೆಯ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಟಿವಿ ಚಾನಲ್ಗಳ ಮೂಲಕ ಹರಡುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಕರೆಗಳು ಹಾಗೂ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಂಡಿದೆ. ಜೊತೆಗೆ ಬಾಂಗ್ಲಾದೇಶದ ಹಲವು ವೆಬ್ಸೈಟ್ಗಳನ್ನೂ ಸಹ ನಿರ್ಬಂಧಪಡಿಸಲಾಗಿದ್ದು, ಅವುಗಳ ಸೋಷಿಯಲ್ ಮೀಡಿಯಾ ಖಾತೆಗಳನ್ನೂ ಸಹ ರದ್ದುಪಡಿಸಲಾಗಿದೆ.




