• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ದೃಶ್ಯ ಚಿತ್ರದ ಮಾದರಿಯಲ್ಲಿ ಯುವಕನ ಕೊಲೆ ..! ಏನಿದು ಪ್ರಕರಣ.?

Any Mind by Any Mind
January 7, 2023
in Top Story, ಶೋಧ
0
ದೃಶ್ಯ ಚಿತ್ರದ ಮಾದರಿಯಲ್ಲಿ ಯುವಕನ ಕೊಲೆ ..! ಏನಿದು ಪ್ರಕರಣ.?
Share on WhatsAppShare on FacebookShare on Telegram


ಮೈಸೂರು: ನಂಜನಗೂಡಿಗೆ ಬಂದಿದ್ದ ಹಾವೇರಿಯ ಯುವಕನೊಬ್ಬ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದು, ನಾಪತ್ತೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ನಂಜನಗೂಡಿನ ಬಿಳಿಗೆರೆ ಪೋಲಿಸ್ ಠಾಣೆ ಪೊಲೀಸರು ತನಿಖೆ ಕೈಗೊಂಡ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ಈ ವೇಳೆ ಹೆಚ್ಚಿನ ತನಿಖೆ ನಡೆಸಿದಾಗ, ವಿದ್ಯಾರ್ಥಿನಿಯೊಬ್ಬಳ ಅಶ್ಲೀಲ ಫೋಟೋ ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಾರಣಕ್ಕಾಗಿ ಯುವಕ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.


ಹಾವೇರಿ ಜಿಲ್ಲೆಯ ಹಿರೆಹಳ್ಳಿ ಗ್ರಾಮದ ಚಂದ್ರಗೌಡ (25) ಹತ್ಯೆಯಾದ ಯುವಕ, ಈತ ನಂಜನಗೂಡು ತಾಲೂಕಿನ ವಿದ್ಯಾರ್ಥಿಯೊರ್ವಳನ್ನ ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ಸಂಪರ್ಕ ಹೊಂದಿದ್ದಲ್ಲದೇ, ಅ ವಿಡಿಯೋ ಗಳನ್ನು ಆಕೆಯ ಅಣ್ಣನಿಗೆ ಕಳುಹಿಸಿದ ಹಿನ್ನೆಲೆಯಲ್ಲಿ ಆತನನ್ನು ನಂಜನಗೂಡು ತಾಲೂಕಿಗೆ ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.


ಹಾವೇರಿಯಿಂದ ನ.20ರಂದು ನಂಜನಗೂಡಿಗೆ ಆಗಮಿಸಿದ ಚಂದ್ರಗೌಡ ನಾಪತ್ತೆಯಾಗಿದ್ದಾನೆ ಎಂದು, ಆತನ ಪರಿಚಯಸ್ಥರಾದ ತಿ.ನರಸೀಪುರ ತಾಲೂಕಿನ ಮಂಜಪ್ಪ ಎಂಬುವವರು ಡಿ.29ರಂದು ದೂರು ನೀಡಿದ್ದರು, ಈ ಕುರಿತು ಬಿಳಿಗೆರೆ ಠಾಣೆ ಸಬ್ ಇನ್ಸ್​​​​ಪೆಕ್ಟರ್​​ ಟಿ.ಆರತಿ ತನಿಖೆ ಕೈಗೊಂಡಿದ್ದರು. ಚಂದ್ರ ಗೌಡನ ಜೊತೆ ನಾಪತ್ತೆಯಾದ ದಿನ ಇದ್ದ ಇಬ್ಬರನ್ನ ಪತ್ತೆ ಮಾಡಿ ಜ.1ರಂದು ಅವರನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಚಂದ್ರಗೌಡ ಹತ್ಯೆ ಅಗಿರುವುದು ಬಯಲಾಗಿದೆ.
ಪ್ರಕರಣದ ಹಿನ್ನೆಲೆ: ಹತ್ಯೆಗಿಡಾದ ಚಂದ್ರಗೌಡನ ಚಿಕ್ಕಪ್ಪನ ಮಗಳು ತಿ‌.ನರಸೀಪುರ ‌ತಾಲೂಕಿನ ವಸತಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕೋವಿಡ್ ಸಂಧರ್ಭದಲ್ಲಿ ಆನ್ ಲೈನ್ ಶಿಕ್ಷಣದ ವೇಳೆ ಅವರ ವಿದ್ಯಾರ್ಥಿಗಳ ಗ್ರೂಪ್‌ ನಲ್ಲಿ ತನ್ನ ದೊಡ್ಡಪ್ಪನ ಮಗ ಚಂದ್ರಗೌಡನನ್ನು ಕೂಡ ಸೇರಿಸಿದ್ದರು. ಈ ಗ್ರೂಪ್ ನಿಂದ ನಂಜನಗೂಡು ತಾಲೂಕಿನ ವಿದ್ಯಾರ್ಥಿಯೊಬ್ಬಳ ಫೋಟೋಗಳನ್ನ ಡೌನ್ ಲೋಡ್ ಮಾಡಿಕೊಂಡ ಚಂದ್ರಗೌಡ, ಅದನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ನಂಜನಗೂಡು ತಾಲೂಕಿನ ವಿದ್ಯಾರ್ಥಿನಿಯ ವಾಟ್ಸ್​ಆಯಪ್​ಗೆ ರವಾನಿಸಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ನಂತರ ಆಕೆಯನ್ನು ಮೈಸೂರಿನ ಲಾಡ್ಜ್​​​​ವೊಂದಕ್ಕೆ ಕರೆಸಿಕೊಂಡು, ಲೈಂಗಿಕ ಕ್ರಿಯೆ ನಡೆಸಿ, ಅದನ್ನೂ ಕೂಡ ವಿಡಿಯೋ ಹಾಗೂ ಫೋಟೊ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ.


ಬುದ್ದಿವಾದ ಹೇಳಿದರೂ ಹಳೆ ಚಾಳಿ ಬಿಡದ ಕೊಲೆಯಾದ ವ್ಯಕ್ತಿ: ಅನಂತರವೂ ಆತನ ಬ್ಲ್ಯಾಕ್ ಮೇಲ್ ಮುಂದುವರಿದಾಗ ವಿದ್ಯಾರ್ಥಿನಿ ಸಿಮ್ ಕಾರ್ಡ್ ಬದಲಾಯಿಕೊಂಡಿದ್ದಾಳೆ. ಕೆಲ ದಿನಗಳ ನಂತರ ಆಕೆಯ ಅಣ್ಣ ತನ್ನ ತಂಗಿಯ ಹಳೇ ಸಿಮ್ ಕಾರ್ಡ್ ಅನ್ನ ಬಳಸಲಾರಂಭಿಸಿದಾಗ ವಾಟ್ಸ್​ಆಯಪ್​ ಮೂಲಕ ತಂಗಿಯ ನಗ್ನ ಫೋಟೋ ಹಾಗೂ ಚಂದ್ರಗೌಡನೊಂದಿಗಿನ ಲೈಂಗಿಕ ಕ್ರಿಯೆ ವಿಡಿಯೋ ಗಳು ಕಂಡು ಬಂದಿವೆ. ಈ ಸಂಬಂಧ ಚಂದ್ರಗೌಡನ ಪರಿಚಯಸ್ಥರಾದ ತಿ.ನರಸೀಪುರ ತಾಲೂಕಿನ ಮಂಜಪ್ಪ ಎಂಬುವವರನ್ನ‌ ಸಂಪರ್ಕಿಸಿದ ಯುವತಿ ಅಣ್ಣ, ಚಂದ್ರಗೌಡನಿಗೆ ಬುದ್ಧಿವಾದ ಹೆಳುವಂತೆ ಕೆಳಿಕೊಂಡಿದ್ದಾನೆ.


ಅನಂತರವೂ ಯುವತಿ ಅಣ್ಣನ ವಾಟ್ಸ್​ಆಯಪ್​ಗೆ ತಂಗಿಯ ಅಶ್ಲೀಲ ಚಿತ್ರಗಳು ಬರಲಾರಂಭಿಸಿವೆ. ಈ ವೇಳೆ ಮಂಜಪ್ಪ ಅವರನ್ನ ಮತ್ತೆ ಸಂಪರ್ಕಿಸಿದ ಯುವತಿ ಅಣ್ಣ ಚಂದ್ರಗೌಡನಿಗೆ ತಂಗಿಯನ್ನು ಮದುವೆ ಮಾಡುತ್ತೇವೆ. ಅದರ ಬಗ್ಗೆ ಮಾತುಕತೆ ನಡೆಸೋಣ ಎಂದು ಆತನನ್ನ ಕರೆಸಿಕೊಂಡ ಆತ, ತನ್ನ ತಂಗಿಯ ತಂಟೆಗೆ ಬರದೇ ಇರುವಂತೆ ಪೂಜೆಯೊಂದನ್ನ ಮಾಡಿಸೋಣ ಎಂದು ತಿಳಿಸಿದ್ದಲ್ಲದೇ ಚಂದ್ರಗೌಡನನ್ನ ಕರೆಸುವಂತೆ ಕೇಳಿಕೊಂಡಿದ್ದಾನೆ.


ಅದರಂತೆ ನ.20ರಂದು ಮಂಜಪ್ಪ ಜೊತೆ ಯುವತಿಯ ಅಣ್ಣ ಹೇಳಿದಂತೆ ವರುಣಾ ಬಳಿಗೆ ಚಂದ್ರಗೌಡ ಬಂದಿದ್ದಾನೆ. ಆಗ ಯುವತಿಯ ಅಣ್ಣನ ಸಂಬಂಧಿಯೊಬ್ಬ ಕೂಡಾ ಜೊತೆಯಾಗಿದ್ದು, ಚಂದ್ರಗೌಡ ಮತ್ತು ಮಂಜಪ್ಪ ಅವರನ್ನು ಆಲ್ದೂರು ಗೇಟ್ ಬಳಿ ಬರಲು ತಿಳಿಸಿದ್ದಾರೆ. ಆನಂತರ ಉಪಾಯವಾಗಿ ಮಂಜಪ್ಪನನ್ನು‌ ತಿ.ನರಸೀಪುರಕ್ಕೆ ಕರೆದೊಯ್ದು, ಚಂದ್ರಗೌಡನ ಜೊತೆ ಸೇರಿ ಯುವತಿಯ ಅಣ್ಣ ಮತ್ತು ಸಂಬಂಧಿ ಮದ್ಯ ಸೇವನೆ ಮಾಡಿದ್ದಾರೆ. ನಂತರ ಆತನನ್ನು ಹತ್ಯೆ ಮಾಡಿ ಶವವನ್ನು

ಗೋಣಿಚೀಲದಲ್ಲಿ ತುಂಬಿ , ಬೈಕ್ ನಲ್ಲಿ ತಿ.ನರಸೀಪುರ ಹೊಸ ಸೇತುವೆಯ ಬಳಿಯ ಕಬಿನಿ ನದಿಗೆ ಬಿಸಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರೂ ಅರೋಪಿಗಳನ್ನು ಬಂಧಿಸಿ ಇದೀಗ ವಿಚಾರಣೆಗೆ ಒಳಪಡಿಸಿದ್ದಾರೆ.

Tags: ನಂಜನಗೂಡಿನ ಬಿಳಿಗೆರೆ ಪೋಲಿಸ್ ಠಾಣೆಮೈಸೂರುಹಾವೇರಿ
Previous Post

ಸ್ತಬ್ಧಚಿತ್ರ ನಿರಾಕರಣೆ; ರಾಜ್ಯದ ಗೌರವಕ್ಕೆ ಧಕೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

Next Post

ಶಿಕ್ಷಕರಿಗೆ ಇಲ್ಲಿದೆ ಗುಡ್ ನ್ಯೂಸ್ :ಫೆಬ್ರುವರಿಯಲ್ಲಿ 2,500 ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
ಶಿಕ್ಷಕರಿಗೆ ಇಲ್ಲಿದೆ ಗುಡ್ ನ್ಯೂಸ್ :ಫೆಬ್ರುವರಿಯಲ್ಲಿ 2,500 ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ

ಶಿಕ್ಷಕರಿಗೆ ಇಲ್ಲಿದೆ ಗುಡ್ ನ್ಯೂಸ್ :ಫೆಬ್ರುವರಿಯಲ್ಲಿ 2,500 ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada