ಉಳ್ಳಾಲ ಕ್ಷೇತ್ರದಲ್ಲಿನ ಕಾರ್ಯಕ್ರಮದ ನಿಮಿತ್ತ ಪ್ರಯಾಣಿಸುತ್ತಿದ್ದಾಗ ಶಾಸಕರ ಕಾರು ಕಣ್ಣೂರು ಸಮೀಪ ಬ್ರೇಕ್ ಡೌನ್ ಆಗಿದೆ.
ಮಂಗಳೂರು:ವಿಧಾನಸಭೆಯ ವಿಪಕ್ಷದ ಉಪನಾಯಕ, ಶಾಸಕ ಹಾಗೂ ಯು.ಟಿ.ಖಾದರ್ ಅವರು ಪ್ರಯಾಣಿಸುವಾಗ ಕಾರಿನ ಬ್ರೇಕ್ ಡೌನ್ ಆಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಉಳ್ಳಾಲ ಕ್ಷೇತ್ರದಲ್ಲಿನ ಕಾರ್ಯಕ್ರಮದ ನಿಮಿತ್ತ ಪ್ರಯಾಣಿಸುತ್ತಿದ್ದಾಗ ಶಾಸಕರ ಕಾರು ಕಣ್ಣೂರು ಸಮೀಪ ಬ್ರೇಕ್ ಡೌನ್ ಆಗಿದೆ.
ಘಟನೆಯಲ್ಲಿ ಶಾಸಕ ಯು.ಟಿ.ಖಾದರ್ ಸೇರಿ ಯಾರಿಗೂ ಅಪಾಯವಾಗಿಲ್ಲ.ಬಳಿಕ ಶಾಸಕರು ಬೇರೆ ವಾಹನದ ಮೂಲಕ ಕಾರ್ಯಕ್ರಮಕ್ಕೆ ತೆರಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕರು ಇಂದು ಸುದ್ದಿಗೋಷ್ಠಿಯಲ್ಲಿ ಕೂಡ ಮಾತನಾಡಿದ್ದರು, ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಗೂಂಡಾಗಿರಿ ಬಗ್ಗೆ ಪ್ರತಿಕ್ರಿಯಿಸಿ ರಾಜ್ಯ ಸರಕಾರ ಗೂಂಡಾಗಳ ಕೈಗೆ ಅಧಿಕಾರ ನೀಡಿ ಮೌನವಾಗಿದೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಕಾರ್ಯವೂ ಗೂಂಡಾಗಳಿಂದ ನಡೆಯುತ್ತಿದೆ ಎಂದು ಹೇಳಿದ್ದಾರೆ.






