ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಇದೀಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದೆ. ಕೀರ್ತಿ ಸುರೇಶ ಜೊತೆ ಸಿನಿಮಾ ಮಾಡುವ ಕುರಿತು ಪೋಸ್ಟರ್ ರಿಲೀಸ್ ಮಾಡಿದೆ .
ಪೋಸ್ಟರ್ ರಿಲೀಸ್ ಮಾಡಿ ಮಾತನಾಡಿದ ನಿರ್ಮಾಪಕ ವಿಜಯ ಕಿರಂದೂರು ಒಬ್ಬ ಗಟ್ಟಿಮುಟ್ಟಾದ ದೃಢ ನಿಲುವು ಹೊಂದಿರುವ ಮಹಿಳೆಯ ಕಾಮಿಡಿ ಡ್ರಾಮಾ ಈ ‘ರಘು ತಥಾ’ ಸಿನಿಮಾ ಎಂದು ಹೇಳಿದ್ದಾರೆ ..
ಹಿಂದಿನ ಕಾಲದಿಂದ ಬಂದ ರೂಢಿಗಳನ್ನು ಪ್ರಶ್ನಿಸಿ ತನ್ನ ತತ್ವಗಳನ್ನೂ ಎತ್ತಿಹಿಡಿಯುವ ಮತ್ತು ಹೋರಾಡುವ ಮೂಲಕ ಎಲ್ಲರಿಗೂ ಮಾದರಿಯಾಗುವ ದಿಟ್ಟ ಮಹಿಳೆಯ ಕಥೆ ಇದು ಎಂದು ಹೇಳಿದ್ದಾರೆ . ಖಂಡಿತ ಈ ಸಿನಿಮಾ ಮನೆಮಂದಿಯನ್ನೆಲ್ಲಾ ನಗುವಿನ ಕಡಲಿನಲ್ಲಿ ತೇಲಿಸುತ್ತದೆ ಎಂದು ತಿಳಿಸಿದ್ದಾರೆ .


ಬಹುಮುಖ ಪ್ರತಿಭೆಯಿಂದಾಗಿ ಚಿತ್ರದ ನಾಯಕಿ ಪಾತ್ರಕ್ಕೆ ಕೀರ್ತಿ ಸುರೇಶ ಅವರೇ ಸರಿಯಾದ ಆಯ್ಕೆ..ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಅವರು ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿ ಇದೆ ಎಂದಿದ್ದಾರೆ .
ಇನ್ನು ಹೊಂಬಾಳೆ ಫಿಲಂಸ್ ನಿನ್ನೆಯಷ್ಟೇ ಕೀರ್ತಿ ಸುರೇಶ ಅವರ ಜೊತೆ ಸಿನಿಮಾ ಘೋಷಿಸಿದೆ .ಮಹಿಳಾ ಪ್ರಧಾನ ಕಥೆಯಾಗಿದ್ದು, ಸಹಾನುಭೂತಿಯಾಗಿರುವ ಮಹಿಳೆ ಅಗತ್ಯವಿದ್ದಾಗ ಬಲಶಾಲಿ , ದೃಢ ನಿರ್ಧಾರ ಕೈಗೊಳ್ಳಬಲ್ಲ ಮಹಿಳೆಯ ಪಾತ್ರದಲ್ಲಿ ಕೀರ್ತಿ ಸುರೇಶ ಕಾಣಿಸಿಕೊಳ್ಳಲಿದ್ದಾರೆ..

ತನ್ನ ಜನರು ಹಾಗು ಭೂಮಿ ಗುರುತನ್ನು ಉಳಿಸಿಕೊಳ್ಳಲು ಹಲವು ಸವಾಲುಗಳನ್ನು ಎದುರಿಸುವಾಗ ತನ್ನನ್ನು ತಾನು ಕಂಡುಕೊಳ್ಳುವ ತಮಾಷೆಯ ಕಥಾ ಹಂದರ ಸಿನಿಮಾದಲ್ಲಿದೆ .
ಪ್ರಶಸ್ತಿ ವಿಜೇತ ‘ಡಿ ಫ್ಯಾಮಿಲಿ ಮ್ಯಾನ್ ‘ ವೆಬ್ ಸಿರೀಸ್ ಬರಹಗಾರ ಸುಮನ್ ಕುಮಾರ್ ಅವರು ‘ರಘು ತಥಾ ‘ ಕಥೆ ಬರೆದಿದ್ದು , ನಿರ್ದೇಶನ ಅವರೇ ಮಾಡಲಿದ್ದಾರೆ . ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ . 2023ರ ಬೇಸಿಗೆಗೆ ಚಿತ್ರ ತೆರೆಗೆ ಬರುವ ಯೋಜನೆ ಹೊಂದಿದ್ದೆ ..