ಕೊರೋನಾ ನಡುವೆ ಪಂಚ ರಾಜ್ಯ ಚುನಾವಣೆ ಗೆಲುವೇ ಬಿಜೆಪಿ ಆದ್ಯತೆ!

ಕರೋನಾ ಇರಲಿ, ಬಿಡಲಿ. ಜನ ಸಾಯಲಿ, ಬಿಡಲಿ. ಬಿಜೆಪಿಗೆ ಅಧಿಕಾರ ಹಿಡಿಯುವುದು ಮುಖ್ಯ. ಅದಕ್ಕಾಗಿ ಚುನಾವಣೆ ನಡೆಸುವುದು ಮುಖ್ಯ. ತನ್ನ ಈ ಘನಧ್ಯೋಯೋದ್ದೇಶವನ್ನು ಬಿಜೆಪಿ ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳದ ವಿಷಯದಲ್ಲಿ ಸಾಬೀತು ಪಡಿಸಿತ್ತು. ಕರೋನಾ ಎರಡನೇ ಅಲೆ ಶುರುವಾತಿನಲ್ಲಿ ಚುನಾವಣೆ ನಡೆಸಿದ ಮತ್ತು ಜವಾಬ್ದಾರಿ ಮರೆತು ಬೃಹತ್ ಸಮಾವೇಶಗಳನ್ನು ನಡೆಸಿದ ಬಿಜೆಪಿಯ ಕ್ರೂರ ವರ್ತನೆ ಬಗ್ಗೆ ವ್ಯಾಪಕವಾದ ಟೀಕೆ-ಟಿಪ್ಪಣಿಗಳು ಕೇಳಿಬಂದಿದ್ದವು. ಆದರೆ ಅವ್ಯಾವುಗಳನ್ನೂ ಬಿಜೆಪಿ ಗಂಭೀರವಾಗಿ ಪರಿಗಣಿಸಿದಂತಿಲ್ಲ. … Continue reading ಕೊರೋನಾ ನಡುವೆ ಪಂಚ ರಾಜ್ಯ ಚುನಾವಣೆ ಗೆಲುವೇ ಬಿಜೆಪಿ ಆದ್ಯತೆ!