ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಿಲಾವರ್ ಸಾಬ್ ದರ್ಗಾಕ್ಕೆ 50 ಲಕ್ಷ ದೇಣಿಗೆ ಕೊಡುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ದಿಲಾವರ್ ಸಾಬ್ ದರ್ಗಾದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದರ್ಗಾಗೆ ವೈಯಕ್ತಿಕವಾಗಿ ದೇಣಿಗೆ ಕೊಡುವುದಾಗಿ ಹರಕೆ ಕಟ್ಟಿಕೊಂಡರು.
ಚುನಾವಣೆಯಲ್ಲಿ ಮತ್ತೊಮ್ಮೆ ಮಹಾಂತೇಶ್ ಕೌಜಲಗಿ ಶಾಸಕರಾಗಬೇಕು, ಕಾಂಗ್ರೆಸ್ ಗೆಲ್ಲಬೇಕು. ಸರ್ಕಾರ ಆಗುತ್ತೆ ನಾವು ಕೊಡಬೇಕು ಕೊಡುತ್ತೇವೆ. ಅದನ್ನ ಬಿಟ್ಟಾಕಿ. ನನ್ನಿಂದ ವೈಯಕ್ತಿಕವಾಗಿ ಐವತ್ತು ಲಕ್ಷ ಹಣ ಕೊಡುತ್ತೇನೆ ಎಂದು ಅವರು ಹೇಳಿದರು.
ಉರುಸ್ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರ್ತಾರೆ ಕೊಠಡಿ ವ್ಯವಸ್ಥೆ ಇಲ್ಲಾ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದರೆ ಮೂರು ತಿಂಗಳ ಒಳಗಾಗಿ ಹಣ ಕೋಡುತ್ತೇನೆ. ಇಡೀ ದೇಶದಲ್ಲಿ ನನಗೆ ಸಿಕ್ತಿರುವ ಪ್ರೀತಿ ಯಾವ ರಾಜಕಾರಣಿಗೂ ಸಿಕ್ಕಿಲ್ಲ. ತಕ್ಷಣಕ್ಕೆ ಐದು ಲಕ್ಷ ದೇಣಿಗೆಯನ್ನ ಜಮೀರ್ ಅಹ್ಮದ್ ದರ್ಗಾಕ್ಕೆ ನೀಡಿದರು.
ಅಲ್ಪ ಸಂಖ್ಯಾತರಿಗೆ ಇದು ಪರೀಕ್ಷೆಯ ಸಮಯ. ಮುಂದೆ ಎಲ್ಲಾ ಒಳ್ಳೆಯದಾಗುತ್ತೆ. ಕಾಂಗ್ರೆಸ್ ಪಕ್ಷ ನಂಗೆ ಎಲ್ಲವನ್ನೂ ನೀಡಿದೆ. ನಾವು ದೇಶದ್ರೋಹಿಗಳಲ್ಲ. ದೇಶಪ್ರೇಮಿಗಳು. ನಮ್ಮನ್ನ ತುಳಿಯುವರಿಂದ ಎಚ್ಚರಿಕೆಯಿಂದ ಇರಬೇಕು ಎಂದು ರಾಜಕೀಯ ವಿರೋಧಿಗಳಿಗೆ ಜಮೀರ್ ಅಹ್ಮದ್ ಹಿಗ್ಗಾಮುಗ್ಗಾ ಬೈದರು.