ಭಾರತ್ ಜೋಡೋ ಪಾದಯಾತ್ರೆ ವೇಳೆ PayCm ಟಿ-ಶರ್ಟ್ ಧರಿಸಿದ ಯುವಕನಿಗೆ ಪೊಲೀಸರು ಥಳಿಸಿದ್ದು ಬಲವಂತವಾಗಿ ಅಂಗಿ ಬಿಚ್ಚಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪೊಲೀಸರು ಯಾರನ್ನೋ ಮೆಚ್ಚಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಯುವ ಕಾಂಗ್ರೆಸ್ ಅಕ್ಷಯ್ ಸಿಂದಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಗುಂಡ್ಲುಪೇಟೆಯ ಬೇಗೂರಿನಿಂದ ಮೈಸೂರು ಜಿಲ್ಲೆಯತ್ತ ಹೊರಟಿದ್ದ ವೇಳೆ ಯುವಕನನ್ನು ಪೊಲೀಸರು ಥಳಿಸಿ ವಶಕ್ಕೆ ಪಡೆದಿದ್ದಾರೆ,
ಮೂಲತಃ ವಿಜಯಪುರ ಜಿಲ್ಲೆಯವನಾದ ಯುವಕ ಶುಕ್ರವಾರ ಶುರುವಾದ ಭಾರತ್ ಜೋಡೋ ಪಾದಯಾತ್ರೆಯಲಿ ಭಾಗವಹಿಸಿದ್ದರು ಮತ್ತು ಆತ ಧರಿಸಿದದ ಟಿ-ಶರ್ಟ್ ಹಾಗೂ ಧ್ವಜ ಗಮನ ಸೆಳೆದಿತ್ತು.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರ ಮೇಲೆ ಹೌಹಾರಿರುವ ಕಾಂಗ್ರೆಸ್ ನಾಯಕರು ಭಾನುವಾರ ನಡೆಯುವ ಪಾದಯಾತ್ರೆಯಲ್ಲಿ ಪೇಸಿಎಂ ಟಿ-ಶರ್ಟ್ ಧರಿಸಿ ಹೆಜ್ಜೆ ಹಾಕುವುದಾಗಿ ಸವಾಲೆಸೆದಿದ್ದಾರೆ.
ಘಟನೆ ಕುರಿತು ಖಂಡನೆ ವ್ಯಕ್ತವಾದ ಬೆನ್ನಲ್ಲೇ ಯುವಕನ್ನು ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.