ಸಿಎಂ ಬೊಮ್ಮಾಯಿ ವಾಸ್ತವವಾಗಿ ಅಭಿವೃದ್ಧಿಗೆ ಆದ್ಯತೆ ನೀಡದೇ ಬರೀ ಪ್ರಚಾರದ ನಿಟ್ಟಿನಲ್ಲಿ ಬಜೆಟ್ ಮಂಡಿಸಿದ್ದನ್ನು ನೋಡಿದರೆ ಅವಧಿ ಮುನ್ನವೇ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆವಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಯುವಕರಿಗೆ ಉದ್ದೋಗ ಕೊಡುವ ನಿಟ್ಟಿನಲ್ಲಿ ಈ ಬಜೆಟ್ ಸಂಪೂರ್ಣ ನಾಶ ಮಾಡಿರುವ ಬೊಮ್ಮಾಯಿ ತಾವೇ ನೀರಾವರಿ ತಜ್ಞ, ಪರಿಣಿತ ಎಂದುಕೊಂಡಿದ್ದಾರೆ. ರಾಜ್ಯದ ಜನತೆಗೆ ನೀರಾವರಿ ವಿಷಯದಲ್ಲಿ ಮೂರು ನಾಮ ಹಾಕಲು ತಯಾರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮಗೆ ಯಾವಾಗ ಬೇಕೋ ಅವಾಗ ನಮ್ಮನ್ನು ರೈಟು, ಲೆಫ್ಟ್ ಗೆ ಉಪಯೋಗ ಮಾಡಿಕೊಳ್ಳಲು ಹತ್ತಿರ ಬರ ಮಾಡಿಕೊಳ್ಳುತ್ತಾರೆ. ನಮಗೆ ಎರಡೂ ಪಕ್ಷಗಳ ಅನುಭವವಾಗಿದೆ. ಆಗಾಗಿ ರೈಟು, ಲೆಫ್ಟ್ ಎರಡೂ ಬೇಡ ಎಂದು ನಿರ್ಧರಿಸದ ಜೆಡಿಎಸ್ ನೇರ ಹೋಗೊಣ ಎಂದು ನಿರ್ಧಸಿದೆ ಎಂದು ಹೇಳಿದ್ದಾರೆ.