ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಈ ತನಕ ಸಾಂಪ್ರದಾಯಿಕ ಎದುರಾಳಿಗಳಿಂದ ಪ್ರಚುರದಲ್ಲಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಹಿರಿಯ ಮುಖಂಡರ ನಡುವಷ್ಟೇ ಪೈಪೋಟಿ ಇತ್ತು. ಕಾಂಗ್ರೆಸ್ ಕಿಮ್ಮನೆ ರತ್ನಾಕರ್ ಮತ್ತು ಬಿಜೆಪಿ ಹಾಲಿ ಮಂತ್ರಿ ಆರಗ ಜ್ಞಾನೇಂದ್ರ ನಡುವೆ ಸೋಲು ಗೆಲುವಿನ ಲೆಕ್ಕಾಚಾರವಿತ್ತು ಆದ್ರೆ ಈಗ ಎಲ್ಲಾ ಕಡೆಯಂತೆ ತೀರ್ಥಹಳ್ಳಿಯಲ್ಲೂ ಸಹ ಕಾಂಗ್ರೆಸ್ ಬಣ ಆರಂಭವಾಗಿದೆ. ಅದರಲ್ಲೂ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಆರ್ ಎಂ ಮಂಜುನಾಥ್ ಗೌಡ ಕಿಮ್ಮನೆಗೆ ತಲೆನೋವಾಗಿದ್ದಾರೆ. ಕಳೆದ ವರ್ಷ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಮಂಜುನಾಥ್ ಗೌಡ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಟಿಕೆಟ್ ಬೇಕು ಎಂದು ಲಾಭಿ ಮಾಡುತ್ತಿದ್ದಾರೆ. ಅವೆಲ್ಲದಕ್ಕೂ ಇದು ಉತ್ತರ ನೀಡಿದ್ದಾರೆ. ಹೌದು ನಾನೂ ಕೂಡ ಆಕಾಂಕ್ಷಿ ಆದರೆ ಟಿಕೆಟ್ ಯಾರಿಗೇ ನೀಡಿದರೂ ಕೆಲಸ ಮಾಡ್ತೀನಿ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿ ಮೊದಲು ತೀರ್ಥಹಳ್ಳಿ ಶಾಸಕ, ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ವಿರುದ್ಧ ಹರಿಹಾಯ್ದರು.
ಗೃಹ ಸಚಿವರು ಗೃಹ ಇಲಾಖೆಯನ್ನ ಇಷ್ಟು ಸರಳ ಮಾಡಿದರಲ್ಲ..! ಗೃಹ ಸಚಿವರು ವಾರವಿಡೀ ತೀರ್ಥಹಳ್ಳಿಯಲ್ಲಿ ಕೂತುಕೊಂಡು ಬಿಡುತ್ತಾರೆ. ಈ ಸಚಿವಾಲಯವನ್ನು ಇಷ್ಟು ಅದ್ಭುತವಾಗಿ ನಿರ್ವಹಿಸಿರುವುದನ್ನು ನಾನು ಈತನಕ ನೋಡಿಲ್ಲ ಎಂದು ವ್ಯಂಗ್ಯವಾಡಿದರು.
ದೇವೇಗೌಡರು ಪ್ರಧಾನ ಮಂತ್ರಿ ಆದಾಗ ಹಾಸನದಲ್ಲಿ ಹೋಟೆಲ್,ಪೆಟ್ರೋಲ್ ಬಂಕ್ ಉದ್ಘಾಟನೆಗೆ ಬರ್ತಾರೆ ಅಂತ ಆಡ್ಕೊಳ್ತಿದ್ರು. ಆದ್ರೆ ತೀರ್ಥಹಳ್ಳಿ ಮಟ್ಟಿಗೆ ನಾನು ಈ ವಿಷಯಗಳನ್ನು ಹೇಳಬಾರದು, ಯಾರು ಅಂದು ಟೀಕೆ ಮಾಡುತ್ತಿದ್ದರೋ ,ಅದನ್ನು ಮೀರಿ ಈಗ ಬಿಜೆಪಿ ಸಚಿವರೇ ಸ್ಥಳೀಯ ಹೀಗಿದ್ದಾರೆ. ಇದೊಂದು ನಾಚಿಕೆಗೇಡಿನ ಪರಿಸ್ಥಿತಿ.
ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಈ ತನಕ ಸಾಂಪ್ರದಾಯಿಕ ಎದುರಾಳಿಗಳಿಂದ ಪ್ರಚುರದಲ್ಲಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಹಿರಿಯ ಮುಖಂಡರ ನಡುವಷ್ಟೇ ಪೈಪೋಟಿ ಇತ್ತು. ಕಾಂಗ್ರೆಸ್ ಕಿಮ್ಮನೆ ರತ್ನಾಕರ್ ಮತ್ತು ಬಿಜೆಪಿ ಹಾಲಿ ಮಂತ್ರಿ ಆರಗ ಜ್ಞಾನೇಂದ್ರ ನಡುವೆ ಸೋಲು ಗೆಲುವಿನ ಲೆಕ್ಕಾಚಾರವಿತ್ತು ಆದ್ರೆ ಈಗ ಎಲ್ಲಾ ಕಡೆಯಂತೆ ತೀರ್ಥಹಳ್ಳಿಯಲ್ಲೂ ಸಹ ಕಾಂಗ್ರೆಸ್ ಬಣ ಆರಂಭವಾಗಿದೆ. ಅದರಲ್ಲೂ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಆರ್ ಎಂ ಮಂಜುನಾಥ್ ಗೌಡ ಕಿಮ್ಮನೆಗೆ ತಲೆನೋವಾಗಿದ್ದಾರೆ. ಕಳೆದ ವರ್ಷ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಮಂಜುನಾಥ್ ಗೌಡ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಟಿಕೆಟ್ ಬೇಕು ಎಂದು ಲಾಭಿ ಮಾಡುತ್ತಿದ್ದಾರೆ. ಅವೆಲ್ಲದಕ್ಕೂ ಇದು ಉತ್ತರ ನೀಡಿದ್ದಾರೆ. ಹೌದು ನಾನೂ ಕೂಡ ಆಕಾಂಕ್ಷಿ ಆದರೆ ಟಿಕೆಟ್ ಯಾರಿಗೇ ನೀಡಿದರೂ ಕೆಲಸ ಮಾಡ್ತೀನಿ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿ ಮೊದಲು ತೀರ್ಥಹಳ್ಳಿ ಶಾಸಕ, ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ವಿರುದ್ಧ ಹರಿಹಾಯ್ದರು.
ಗೃಹ ಸಚಿವರು ಗೃಹ ಇಲಾಖೆಯನ್ನ ಇಷ್ಟು ಸರಳ ಮಾಡಿದರಲ್ಲ..! ಗೃಹ ಸಚಿವರು ವಾರವಿಡೀ ತೀರ್ಥಹಳ್ಳಿಯಲ್ಲಿ ಕೂತುಕೊಂಡು ಬಿಡುತ್ತಾರೆ. ಈ ಸಚಿವಾಲಯವನ್ನು ಇಷ್ಟು ಅದ್ಭುತವಾಗಿ ನಿರ್ವಹಿಸಿರುವುದನ್ನು ನಾನು ಈತನಕ ನೋಡಿಲ್ಲ ಎಂದು ವ್ಯಂಗ್ಯವಾಡಿದರು.
ದೇವೇಗೌಡರು ಪ್ರಧಾನ ಮಂತ್ರಿ ಆದಾಗ ಹಾಸನದಲ್ಲಿ ಹೋಟೆಲ್,ಪೆಟ್ರೋಲ್ ಬಂಕ್ ಉದ್ಘಾಟನೆಗೆ ಬರ್ತಾರೆ ಅಂತ ಆಡ್ಕೊಳ್ತಿದ್ರು. ಆದ್ರೆ ತೀರ್ಥಹಳ್ಳಿ ಮಟ್ಟಿಗೆ ನಾನು ಈ ವಿಷಯಗಳನ್ನು ಹೇಳಬಾರದು, ಯಾರು ಅಂದು ಟೀಕೆ ಮಾಡುತ್ತಿದ್ದರೋ ,ಅದನ್ನು ಮೀರಿ ಈಗ ಬಿಜೆಪಿ ಸಚಿವರೇ ಸ್ಥಳೀಯ ಹೀಗಿದ್ದಾರೆ. ಇದೊಂದು ನಾಚಿಕೆಗೇಡಿನ ಪರಿಸ್ಥಿತಿ.