ಮೂಲ ಪ್ರತಿ :- ರವಿ ಕೃಷ್ಣಾರೆಡ್ಡಿ facebook ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಅಧ್ಯಕ್ಷರು

ಕನ್ನಡೇತರರು, ಅದರಲ್ಲಿಯೂ ಭ್ರಷ್ಟಾಚಾರ, ಜಾತೀಯತೆ, ಮತಾಂಧತೆಗಳಿಂದ ನರಳಿ ತಮ್ಮ ರಾಜ್ಯಗಳಲ್ಲಿ ನಮಗಿಂತ ಕೆಟ್ಟ ದುರಾಡಳಿತವನ್ನು ಅನುಭವಿಸಿ, ವಿದ್ಯೆ ಮತ್ತು ವಿವೇಚನೆಯ ಕೊರತೆಯಿಂದ ಮದ ತುಂಬಿಕೊಂಡ ಜನರು ಇಂದು ಬೆಂಗಳೂರಿನಲ್ಲಿ ದುರಹಂಕಾರ ತೋರುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಕಳ್ಳತನ, ದರೋಡೆ ಮತ್ತು ಲೈಂಗಿಕ ಬಲಾತ್ಕಾರದಂತಹ ದುಷ್ಕೃತ್ಯಗಳಲ್ಲಿ ಅವರ ಪಾಲೇ ಹೆಚ್ಚಿದೆ.
ಸ್ಥಳೀಯರಾಗಲು ಒಲ್ಲದ, ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಕುರಿತು ಗೌರವವಿಲ್ಲದ, ಹತ್ತಾರು ವರ್ಷ ಬೆಂಗಳೂರಿನಲ್ಲಿ ಇದ್ದರೂ ಕನ್ನಡ ಕಲಿಯದಿರುವುದೇ ತಮ್ಮ ಹೆಚ್ಚುಗಾರಿಕೆ ಎಂದು ಭಾವಿಸಿರುವ ಇವರಿಂದ ಕರ್ನಾಟಕಕ್ಕೆ ಅಪಾಯವೇ ಹೊರತು ಯಾವುದೇ ಲಾಭವಿಲ್ಲ. ಇಂದು ವಿಶೇಷವಾಗಿ ಉತ್ತರ ಭಾರತದಿಂದ ಬೆಂಗಳೂರಿಗೆ ವಿಪರೀತ ವಲಸೆ ಆಗುತ್ತಿದೆ ಮತ್ತು ಅದು ನಾನಾ ರೀತಿಯ ಅನಪೇಕ್ಷಿತ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.
ಉತ್ತರ ಭಾರತದಿಂದ ದಕ್ಷಿಣಕ್ಕೆ ಆಗುತ್ತಿರುವ ವಲಸೆಯನ್ನು ಈಗಲೇ ನಿಯಂತ್ರಿಸಲೇಬೇಕಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ಉತ್ತರ ಭಾರತದ ಅನೇಕ ರಾಜ್ಯಗಳು ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ದಕ್ಷಿಣ ಭಾರತದ ಅನೇಕ ರಾಜ್ಯಗಳಿಗಿಂತ ಮುಂದಿದ್ದವು. ಆದರೆ ಅಲ್ಲಿ ಬಲಗೊಂಡ ಜಾತೀಯತೆ, ಮತೀಯ ಮೂಲಭೂತವಾದ, ವಂಶಪಾರಂಪರ್ಯ ರಾಜಕಾರಣ, ಸ್ವಚ್ಚಂದ ಭ್ರಷ್ಟಾಚಾರ, ದುರಾಡಳಿತ, ಅರಾಜಕತೆಯ ಕಾರಣಕ್ಕೆ ಇಂದು ಅವು ದಕ್ಷಿಣ ರಾಜ್ಯಗಳ ಮುಂದೆ ಬನಾನಾ ರಿಪಬ್ಲಿಕ್ ರಾಜ್ಯಗಳ ರೀತಿ ಕಾಣುತ್ತಿವೆ. ದುರಾಡಳಿತ ಮತ್ತು ಬಡತನದಿಂದ ತಪ್ಪಿಸಿಕೊಳ್ಳಲು ಅಲ್ಲಿಯ ಜನ ಅವಕಾಶ ಸಿಕ್ಕ ತಕ್ಷಣ ಅಲ್ಲಿಂದ ದಕ್ಷಿಣಕ್ಕೆ ಓಡಿ ಬರುತ್ತಿದ್ದಾರೆ. ಅಲ್ಲಿಯ ಜನರನ್ನು ನಾವು ಹೆಚ್ಚು ಬರಮಾಡಿಕೊಂಡಷ್ಟೂ ಅಲ್ಲಿಯ ಭ್ರಷ್ಟ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಇನ್ನೂ ಸುಲಭವಾಗುತ್ತದೆ. ನಮ್ಮ ಹಿತ ಮಾತ್ರವಲ್ಲದೆ ಅವರ ಹಿತಕ್ಕಾಗಿಯೂ ನಾವು ಉತ್ತರ ಭಾರತೀಯರ ದಕ್ಷಿಣ ವಲಸೆಯನ್ನು ನಿಯಂತ್ರಿಸಬೇಕು, ನಿರ್ಬಂಧಿಸಬೇಕು.

ನನ್ನ ಪ್ರಕಾರ ಬೆಂಗಳೂರಿನಲ್ಲಿ ಇಂದು ನಡೆಯುವ ಅತಿಹೆಚ್ಚು ಅಪರಾಧ ಕೃತ್ಯಗಳಲ್ಲಿ ಉತ್ತರ ಭಾರತೀಯ ಬಹುದೊಡ್ಡ ಪಾಲಿದೆ. ಆದರೆ ನಮ್ಮ ಪೊಲೀಸ್ ಇಲಾಖೆ ಎಷ್ಟು ಅದಕ್ಷವೂ, ಅಯೋಗ್ಯವೂ ಆಗಿದೆ ಎಂದರೆ, ಈ ವಿಚಾರವಾಗಿ ಅಂಕಿಅಂಶಗಳ ಸಹಿತವಾದ ಒಂದು ಅಧ್ಯಯನ ವರದಿಯನ್ನು ಪ್ರಕಟಿಸಲಾರದಷ್ಟು ಹೀನಾಯ ಸ್ಥಿತಿಯಲ್ಲಿದೆ. ನಮ್ಮ ಪೊಲೀಸರು ಪರರಾಜ್ಯಗಳ ಕಳ್ಳರನ್ನು ಹಿಡಿದಾಗ ಅವರಿಂದ ವಶಪಡಿಸಿಕೊಳ್ಳುವ ವಸ್ತುಗಳನ್ನು ತಾವೇ ಇಟ್ಟುಕೊಂಡು ಕಳ್ಳರನ್ನು ಬಿಟ್ಟುಕಳುಹಿಸುತ್ತಾರೆ ಎನ್ನುವ ಸಂಶಯ ನನ್ನದು. ಕಳ್ಳರನ್ನು ಸಾಕಿಕೊಂಡಿರುವ ಪೊಲೀಸರು ನಮ್ಮಲ್ಲಿದ್ದಾರೆ. ಒಂದು ಪೊಲೀಸ್ ಠಾಣೆಯಲ್ಲಿ ಹೀಗೆ ಆದದ್ದು ನಮ್ಮ ಗಮನಕ್ಕೆ ಬಂದಿದ್ದನ್ನು ನಾನು ಈ ಹಿಂದೆಯೇ ಹಲವು ಸಲ ಪ್ರಸ್ಥಾಪಿಸಿದ್ದೇನೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಉತ್ತರ ಭಾರತೀಯ ದಬ್ಬಾಳಿಕೆ, ದೌರ್ಜನ್ಯ, ದುರಹಂಕಾರಿ ವರ್ತನೆ ಹೆಚ್ಚೆಚ್ಚು ವರದಿ ಆಗುತ್ತಿದೆ. ಇತರರಿಗೆ ನಮ್ಮ ಮನೆಯನ್ನೇ ಬಿಟ್ಟುಕೊಡುವಷ್ಟು ಉದಾರಿಗಳು ಅಥವ ಪುಕ್ಕಲರು ನಾವಾಗುವುದು ಬೇಡ. ದುರಹಂಕಾರಿಗಳಿಗೆ ತುರ್ತಾಗಿ ಒಂದೆರಡು ಒಳ್ಳೆಯ ಪಾಠ ಆಗಬೇಕಾದ ಅನಿವಾರ್ಯತೆ ಈಗಿನದು.
ಹಾಗೆಯೇ, ಅನಿಯಂತ್ರಿತ, ಅಬಾಧಿತ ವಲಸೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಕೆಲವು ನಿಯಮಾವಳಿ/ನೀತಿನಿರೂಪಣೆಗಳೂ ಸಿದ್ದವಾಗಬೇಕಿದೆ. ಇದನ್ನು ದಕ್ಷಿಣ ಭಾರತದ ರಾಜ್ಯಗಳೆಲ್ಲ ಕೂಡಿ ಮಾಡಬೇಕಿದೆ.













