• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳನ್ನು ಉಕ್ರೇನಿಗೆ ಆಕರ್ಷಿಸುತ್ತಿರುವುದೇಕೆ?

ಫಾತಿಮಾ by ಫಾತಿಮಾ
February 27, 2022
in ಕರ್ನಾಟಕ
0
ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳನ್ನು ಉಕ್ರೇನಿಗೆ ಆಕರ್ಷಿಸುತ್ತಿರುವುದೇಕೆ?
Share on WhatsAppShare on FacebookShare on Telegram

ಉಕ್ರೇನಿನಾದ್ಯಂತ ಹಾರಾಡುತ್ತಿರುವ ಯುದ್ಧ ವಿಮಾನಗಳು ಮತ್ತು ಬಾಂಬ್ ಸ್ಪೋಟದ ಸದ್ದಿಗೆ ಕರ್ನಾಟಕದ ಪೋಷಕರು ಬೆಚ್ಚಿಬೀಳುತ್ತಿದ್ದಾರೆ. ಟಿ.ವಿಯಲ್ಲಿ ಕಾಣಿಸಿಕೊಳ್ಳುವ ವಿದ್ಯಾರ್ಥಿಗಳು ತಮ್ಮ ಸುರಕ್ಷಿತ ವಾಪಾಸಾತಿಗಾಗಿ ಸರ್ಕಾರದ ಬಳಿ ಸಹಾಯ ಹಸ್ತ ಚಾಚುತಿದ್ದಾರೆ. ಪೂರ್ವ ಯುರೋಪಿನ ದೇಶವೊಂದರಲ್ಲಿ ನಡೆಯುತ್ತಿರುವ ಯುದ್ಧ ಬೆಲೆ ಏರಿಕೆ, ಪೆಟ್ರೋಲ್ ತುಟ್ಟಿಯಿಂದಾಗಿ ಮಾತ್ರ ಭಾರತವನ್ನು ಕಾಡಬಹುದು ಅಂದುಕೊಂಡಿದ್ದವರ ಮುಂದೆ ಈಗ ಹೊಸ ಸಮಸ್ಯೆ ಸೃಷ್ಟಿಯಾಗಿದೆ.

ADVERTISEMENT

ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಇಷ್ಟೊಂದು ಪ್ರಮಾಣದ ಭಾರತೀಯರಿರುವುದೇ ಅಚ್ಚರಿಯಂತೆ ತೋರುತ್ತಿದೆ . ತಜ್ಞರ ಪ್ರಕಾರ, ಕೈಗೆಟುಕುವ ಶುಲ್ಕ, ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೇ ಇರುವುದು ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನಿಗೆ ಕೈ ಬೀಸಿ ಕರೆಯುತ್ತಿದೆ.

“ಯಾವುದೇ ಪ್ರವೇಶ ಪರೀಕ್ಷೆಗಳಿಲ್ಲ ಮತ್ತು ಭಾರತಕ್ಕೆ ಹೋಲಿಸಿದರೆ ಶಿಕ್ಷಣದ ವೆಚ್ಚವೂ ಕೈಗೆಟುಕುವ ಕಾರಣ ಉಕ್ರೇನ್ ಅಥವಾ ರಷ್ಯಾದ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಸುಲಭ” ಎನ್ನುತ್ತಾರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಮಾಜಿ ಉಪಕುಲಪತಿ. “ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು NEET ಮೂಲಕ ಸೀಟ್ ಪಡೆಯಲು ಅನರ್ಹರಾದವರಾಗಿರುತ್ತಾರೆ ಅಥವಾ ಮ್ಯಾನೇಜ್‌ಮೆಂಟ್ ಕೋಟಾದ ಅಡಿಯಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದೇ ಇರುವವರು” ಎಂದು ಅವರು ವಿವರಿಸಿದರು.

ತಜ್ಞರ ಪ್ರಕಾರ, ಸರಾಸರಿ 10,000 ವಿದ್ಯಾರ್ಥಿಗಳು ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಪಶುವೈದ್ಯಕೀಯ ಪದವಿ ಪಡೆಯಲು ಉಕ್ರೇನಿಗೆ ಪ್ರಯಾಣಿಸುತ್ತಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಪಿ.ಜಿ.ಗಿರೀಶ್ ಮಾತನಾಡಿ, “ ಖಾಸಗಿ ವೈದ್ಯಕೀಯ ಕಾಲೇಜುಗಳು ವಿಧಿಸುವ ಒಂದು ವರ್ಷದ ಶುಲ್ಕವನ್ನು ಖರ್ಚು ಮಾಡುವ ಮೂಲಕ ಉಕ್ರೇನ್‌ನಲ್ಲಿ ಸಂಪೂರ್ಣ ಎಂಬಿಬಿಎಸ್ ಕೋರ್ಸ್ ಅನ್ನು ಪಡೆಯಬಹುದು” ಎನ್ನುತ್ತಾರೆ.

ಆದರೆ ಬೋಧನೆ ಮತ್ತು ಸಂಶೋಧನೆಯ ಗುಣಮಟ್ಟ ಮತ್ತು ಸುಧಾರಿತ ವಿಧಾನಗಳಲ್ಲಿ ಉಕ್ರೇನ್‌ಗಿಂತ ಭಾರತದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಉತ್ತಮವಾಗಿವೆ ಎಂದು ಡಾ ಗಿರೀಶ್ ಹೇಳುತ್ತಾರೆ. “ಈ ಕಾರಣಕ್ಕಾಗಿಯೇ ಕೇಂದ್ರವು ಸಾಗರೋತ್ತರ ವಿಶ್ವವಿದ್ಯಾಲಯಗಳಿಂದ ವೈದ್ಯಕೀಯ ಪದವಿಗಳನ್ನು ಪೂರ್ಣಗೊಳಿಸಿದವರಿಗೆ ಕಡ್ಡಾಯ ಅರ್ಹತಾ ಪರೀಕ್ಷೆಯನ್ನು ಪರಿಚಯಿಸಿತು. ಅರ್ಹತೆ ಪಡೆಯಲು ವಿಫಲರಾದರೆ, ಅವರು ಇಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಲು ಅರ್ಹರಲ್ಲ.

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಾಜಿ ನಿರ್ದೇಶಕ ಕೆ ಎಸ್ ಗಂಗಾಧರ್ ಅವರ ಪ್ರಕಾರ, ಕರ್ನಾಟಕವು ಸುಮಾರು 63 ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ 20 ಸರ್ಕಾರಿ ಕಾಲೇಜುಗಳಾಗಿವೆ. ಉಳಿದವುಗಳು ಖಾಸಗಿ ಅಥವಾ ಡೀಮ್ಡ್ ವಿಶ್ವವಿದ್ಯಾಲಯಗಳಾಗಿವೆ. ಅವರು ತಮ್ಮ ಒಟ್ಟು ಸೀಟುಗಳಲ್ಲಿ 40% ಅನ್ನು ಸರ್ಕಾರಿ ಕೋಟಾ ವಿದ್ಯಾರ್ಥಿಗಳಿಗೆ ನೀಡಿದರೆ, 60% ಸೀಟುಗಳನ್ನು ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ದಾಖಲಾಗಲು ಸಾಧ್ಯವಿಲ್ಲದವರು ಹೆಚ್ಚಾಗಿ ಉಕ್ರೇನ್, ರಷ್ಯಾಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ದಾಖಲಾಗುತ್ತಾರೆ.

ಉಕ್ರೇನ್, ಚೀನಾ, ಫಿಲಿಪೈನ್ಸ್ ಮತ್ತು ರಷ್ಯಾದಿಂದ ವೈದ್ಯಕೀಯ ಪದವಿ ಹೊಂದಿರುವ ವಿದ್ಯಾರ್ಥಿಗಳು ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಯಲ್ಲಿ (FMGE) ಪರೀಕ್ಷೆಯನ್ನು ಕಡ್ಡಾಯವಾಗಿ ಭಾರತದಲ್ಲಿ ತೆಗೆದುಕೊಳ್ಳಲೇಬೇಕು. ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (NMC) ಸಂಬಂಧಿಸಿದ ಮೂಲಗಳ ಪ್ರಕಾರ, ಉಕ್ರೇನ್‌ನಂತಹ ದೇಶಗಳ ವೈದ್ಯಕೀಯ ಪದವೀಧರರಲ್ಲಿ 18% ಸಹ ಭಾರತದಲ್ಲಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ.

ಎನ್‌ಎಂಸಿಯ ಸ್ನಾತಕೋತ್ತರು ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿದ್ದ RGUHS ನ ಉಪಕುಲಪತಿ ಡಾ.ಎಂ.ಕೆ.ರಮೇಶ್ ಮಾತನಾಡಿ, ಶಿಕ್ಷಣದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಎಫ್‌ಎಂಜಿಇ ತೇರ್ಗಡೆಯಾದವರಿಗೆ ಕಡ್ಡಾಯ ಇಂಟರ್ನ್‌ಶಿಪ್ ಅನ್ನು ಸಹ ಎನ್‌ಎಂಸಿ ಪರಿಚಯಿಸಿದೆ ಎನ್ನುತ್ತಾರೆ.

Tags: KarnatakaMediacl StudentsRussiaRussianRussiaUkraineCrisisUkraineUkraine Crisis and India's StanceUkraine President Volodymyr ZelenskyUkraineConflictUkraineInvasionUkraineUnderAttackWhat attracts Karnataka medical students to Ukraine?
Previous Post

Gujarat Election ಗೆಲ್ಲಲು ಮಾಸ್ಟರ್ ಪ್ಲಾನ್ : ಕೌರವರ ಪಟ್ಟಿಯನ್ನು ಸಿದ್ದಪಡಿಸಿ ಎಂದ ರಾಹುಲ್ ಗಾಂಧಿ !

Next Post

ರೂಪಾಂತರಿ ತಳಿ ಆಹಾರಕ್ಕೆ ಅನುಮತಿ ನೀಡಿದ ಹಿನ್ನೆಲೆ: FSSAIಗೆ ದ್ವೇಷಭರಿತ ಇಮೈಲ್ !

Related Posts

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಗೊಂದಲಕ್ಕೆ ತೆರೆ: KPCL ಅಧಿಕೃತ ಸ್ಪಷ್ಟನೆ
Top Story

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಗೊಂದಲಕ್ಕೆ ತೆರೆ: KPCL ಅಧಿಕೃತ ಸ್ಪಷ್ಟನೆ

by ಪ್ರತಿಧ್ವನಿ
July 12, 2026
0

ಬೆಂಗಳೂರು: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಬಗ್ಗೆ ಹರಡಿರುವ ಸುದ್ದಿಗಳಿಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಅಧೀಕೃತ ಸ್ಪಷ್ಟನೆ ನೀಡಿದೆ. https://youtu.be/bDNDeS0JMK0?si=wll7H9RZqriYtIzB ಈ ಬಗ್ಗೆ ಪ್ರಕಟಣೆ ಹೊರಡಿಸಿರುವ...

Read moreDetails
DK Vs HDK

ಕಂಬಳದಿಂದ ವೈಶಿಷ್ಟ್ಯಪೂರ್ಣ ದಸರಾದ ಘನತೆಗೆ ಧಕ್ಕೆ ಬೇಡ : ಸರ್ಕಾರದ ನಡೆಗೆ HDK ವಿರೋಧ..!

July 11, 2026
Janardhan Reddy Vs Naidu

ಜನಾರ್ದನ ರೆಡ್ಡಿಗೆ ನಾಯ್ಡು ಸರ್ಕಾರದ ಶಾಕ್‌ : ಬ್ರಾಹ್ಮಣಿ ಸ್ಟೀಲ್ಸ್‌ಗೆ ನೀಡಿದ್ದ ಜಮೀನು ವಾಪಸ್..!

July 11, 2026
M P prakash Statue inaurgated BY Siddaramaiah

ದಿ. ಎಂ.ಪಿ. ಪ್ರಕಾಶ್‌ ಪ್ರತಿಮೆ ಅನಾವರಣಗೊಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ..

July 11, 2026
Zameer Vs Governer

ಮಾಜಿ ಸಚಿವ ಜಮೀರ್‌ಗೆ ಬಿಗ್‌ ಶಾಕ್‌ : ರಾಜ್ಯಪಾಲರ ಬಳಿ ಲೋಕಾಯುಕ್ತ ಕೇಳಿಕೊಂಡಿದ್ದೇನು..?

July 11, 2026
Next Post
ರೂಪಾಂತರಿ ತಳಿ ಆಹಾರಕ್ಕೆ ಅನುಮತಿ ನೀಡಿದ ಹಿನ್ನೆಲೆ: FSSAIಗೆ ದ್ವೇಷಭರಿತ ಇಮೈಲ್ !

ರೂಪಾಂತರಿ ತಳಿ ಆಹಾರಕ್ಕೆ ಅನುಮತಿ ನೀಡಿದ ಹಿನ್ನೆಲೆ: FSSAIಗೆ ದ್ವೇಷಭರಿತ ಇಮೈಲ್ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada