ದೇಶದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಹವಾಮಾನ ವೈಪರೀತ್ಯದಿಂದಾಗಿ ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಹಮಾಮಾನ ಇಲಾಖೆಯ ಎಚ್ಚರಿಕೆ ಬೆನ್ನಲ್ಲೇ ದೇಶದಲ್ಲಿ ಯಾವುದೇ ಆಚರಣೆಗಳಿಗೆ ಅಡ್ಡಿಯಾಗಿಲ್ಲದಂತೆ ಕಾಣುತ್ತಿದೆ. ಅತಿಯಾದ ಬಿಸಿಲಿನ ಶಾಕದಲ್ಲೇ ಟಾರ್ಪಲ್ಲಿನ ನೆರಳಿನಲ್ಲಿ ಮದುವೆ ದಿಬ್ಬಣದ ಮೆರವಣಿಗೆ ಸಾಗುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರನ ಸ್ನೇಹಿತರು ಹಾಗೂ ಸಂಬಂಧಿಕರು ನೆರಳಿನಲ್ಲೇ ಭರ್ಜರಿ ಸ್ಟೆಪ್ಸ್ ಹಾಕುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ #India ಎಂಬ ಹ್ಯಾಶ್ ಟ್ಯಾಗ್ನಡಿಯಲ್ಲಿ ಇದಕ್ಕೆ ಭಾರತವನ್ನು ವೈವಿಧ್ಯಮಯ ಭೂಮಿ ಎಂದು ಕರೆಯಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಬಿಸಿಲಿನ ಹೊಡೆತದ ಮಧ್ಯದಲ್ಲೇ ದಿಬ್ಬಣ್ಣದ ಮೆರವಣಿಗೆಗೆ ಒಂದು ದಾರಿಯನ್ನ ಕಂಡುಕೊಂಡಿದ್ದಾರೆ ಎಂದು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ 18 ಸಾವಿರಕ್ಕು ಹೆಚ್ಚು ವೀಕ್ಷಣೆ ಪಡೆದಿದ್ದು ಎಲ್ಲರು ವರನ ಕಡೆಯವರು ಮಾಡಿರುವ ಉಪಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವರು ಒಂದು ವೇಳೆ ವಿದ್ಯುತ್ ತಂತಿಗಳಿಗೆ ತಗುಲಿದರೆ ಸಂಭವಿಸಬಹುದಾಗಿದ್ದ ಅಪಾಯವನ್ನು ಸಹ ಹೇಳಿದ್ದಾರೆ.
ಇನ್ನು ದೇಶದ ಹಲವೆಡೆ ಈ ರೀತಿಯ ಮೆರವಣಿಗೆಯ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.