ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಖಂಡಿಸಿ ಶ್ರೀರಾಮ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ʻಕೊಲೆಗಳಿಗೆ ತಿರುಗಿ ಬಿದ್ದರೆ ಒಬ್ಬ ಮುಸ್ಲಿಂ ಇರಬಾರದಂತೆ ಮಾಡುತ್ತೇವೆʼ ಎಂದು ಪ್ರಚೋದನೆ ಹೇಳಿಕೆ ನೀಡಿದ್ದಾರೆ.
ಈ ಕುರಿತು ಧಾರವಾಡದಲ್ಲಿ ಮಾತನಾಡಿದ ಅವರು, ವಾರದ ಹಿಂದೆ ಕೊಲೆ ನಡೆಸಿದ್ದಕ್ಕಾಗಿ ಸೇಡಿನ ಹತ್ಯೆ ಎನ್ನಲಾಗ್ತಿದೆ. ಪ್ರವೀಣ್ ಹತ್ಯೆ ಹಿಂದೆ ಕೇರಳ ಮೂಲದ ದುಷ್ಕರ್ಮಿಗಳ ನಂಟಿದೆ. ಮೌಲ್ವಿಗಳು, ಎಸ್ಡಿಪಿಐ, ಪಿಎಫ್ಐ ಹದ್ದುಬಸ್ತಿನಲ್ಲಿಡಬೇಕು. ಇಲ್ಲದೇ ಹೋದಲ್ಲಿ ಮತ್ತಷ್ಟು ಹಿಂದೂಗಳು ಬಲಿಯಾಗುತ್ತಾರೆ ಎಂದು ಹೇಳಿದ್ದಾರೆ.
ಶಾಂತಿ ಸೌಹಾರ್ದತೆ ಬೇಕಾಗಿದ್ದರೆ ಹದ್ದು ಬಸ್ತಿನಲ್ಲಿಡಿ. ಸರ್ಕಾರ ಬೇಗನೇ ಎಸ್ಪಿಐ, ಪಿಎಫ್ಐ ಸಂಘಟನೆಗಳನ್ನುಕೂಡಲೇ ನಿಷೇಧ ಮಾಡಿ . ನಾನೂ ಮುಸ್ಲಿಂ ಸಮೂದಾಯಕ್ಕೆ ಹೇಳುತ್ತಿದ್ದೇನೆ ಕೊಲೆಗಳಿಗೆ ತಿರುಗಿ ಬಿದ್ದರೆ ಒಬ್ಬನೂ ಮುಸ್ಲಿಂ ಇರಬಾರದಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ