ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಇದೀಗ ಇದೇ ಸೂತ್ರವನ್ನು ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಘೋಷಣೆ ಹಾಗೂ ಕರ್ನಾಟಕ ಮಾಡೆಲ್ ಇಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಪ್ರಚಾರ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳು ಬರುತ್ತಿವೆ
ಮಧ್ಯಪ್ರದೇಶ, ರಾಜಸ್ಥಾನ ಛತ್ತೀಸ್ಗಢದಲ್ಲಿ ಮತ್ತು ತೆಲಂಗಾಣ ದಲ್ಲಿ ಮುಂಬರುವ ಚುನಾವಣೆಗಳಲ್ಲಿ ‘ಕರ್ನಾಟಕ ಮಾದರಿ’ಯನ್ನು ಬಳಸಿಕೊಂಡು ಚುನಾವಣಾ ತಂತ್ರವನ್ನ ರೂಪಿಸಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಈ ರಾಜ್ಯಗಳಲ್ಲಿನ ಫಲಿತಾಂಶಗಳು 2024 ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಬಹುದು ಎಂಬ ಮಾತುಗಳು ಬಹುತೇಕ ಕೇಳಿಬರುತ್ತಿದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯ ರಾಜಕೀಯ ಸಲಹೆಗಾರರಾಗಿ ನೇಮಕಗೊಂಡಿರುವ ರಾಜಕೀಯ ಚತುರ ಸುನೀಲ್ ಕಾನುಗೋಲು 2024ರ ವರೆಗೆ ಬೇರೆ ಬೇರೆ ರಾಜ್ಯಗಳ ಚುನಾವಣೆಗಳತ್ತ ಗಮನ ಹರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಒಂಬತ್ತು ತಿಂಗಳಿನಿಂದ ಕರ್ನಾಟಕ ಚುನಾವಣೆಯಲ್ಲೇ ಬ್ಯುಸಿಯಾಗಿದ್ದ ಸುನೀಲ್, ಇದೀಗ ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಯತ್ತ ಗಮನ ಹರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಇದೀಗ ವಿವಿಧ ರಾಜ್ಯಗಳಲ್ಲಿ ನಡೆಲಿರುವ ಚುನಾವಣೆಗೆ ಕರ್ನಾಟಕದ ಚುನಾವಣಾ ರಣತಂತ್ರವನ್ನು ಅಳವಡಿಸಲು ಯೋಜನೆಯ ರೂಪಿಸಿದ್ದಾರೆ ಎನ್ನಲಾಗಿದೆ. ಇನ್ನು ರಾಹುಲ್ ಗಾಂಧಿ ಅಮೆರಿಕದ ಪ್ರವಾಸದಲ್ಲಿದ್ದು ಅಮೆರಿಕದಲ್ಲಿ ಕರ್ನಾಟಕದ ಚುನಾವಣಾ ವಿಚಾರವನ್ನು ಪ್ರಸ್ತಾಪಿಸಿರುವ ಅವರು ದ್ವೇಷದ ರಾಜಕೀಯ, ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಜನರ ಮತ ಎಂದು ಹೇಳುವುದರ ಜೊತೆಗೆ ಕರ್ನಾಟಕ ಚುನಾವಣೆಯ ರಣತಂತ್ರವನ್ನ ಪ್ರಸ್ತಾಪಿಸಿದ್ದಾರೆ.
ಸದ್ಯದ ಮಟ್ಟಿಗೆ ಈಗ ವಿವಿಧ ರಾಜ್ಯಗಳ ಚುನಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಹದ್ದಿನ ಕಣ್ಣನ್ನ ಇಟ್ಟಿದ್ದು ಕಾಂಗ್ರೆಸ್ನ ಒಂದಷ್ಟು ಹಿರಿಯ ನಾಯಕರುಗಳು ಕೂಡ ಕರ್ನಾಟಕದಲ್ಲಿ ಬಳಸಲಾದ ಗ್ಯಾರಂಟಿ ಯೋಜನೆಗಳ ಅಸ್ತ್ರವನ್ನು ಬೇರೆ ಬೇರೆ ರಾಜ್ಯಗಳಲ್ಲೂ ಬಳಸಿದರೆ ಅಲ್ಲಿನ ಚುನಾವಣಾ ತೀರ್ಪು ಕಾಂಗ್ರೆಸ್ ನ ಪರವಾಗಿ ತಿರುಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಒಂದು ವೇಳೆ ಈ ಗ್ಯಾರೆಂಟಿ ಯೋಜನೆ ಹಾಗೂ ಕರ್ನಾಟಕ ಮಾಡೆಲ್ ಇತರ ರಾಜ್ಯಗಳ ಚುನಾವಣೆಯಲ್ಲಿ ಸಕ್ಸಸ್ ಆಯ್ತು ಅಂದ್ರೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಇದೆ ಅಸ್ತ್ರವನ್ನ ಕಾಂಗ್ರೆಸ್ ಬಳಸುವ ಸಾಧ್ಯತೆ ಇದೆ ಅಂತ ಹಲವು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ