ಶಿವಸೇನೆ ನಾಯಕ ಸಂಜಯ್ ರಾವತ್ ಅವರ ಬಂಧನದ ಹಿಂದೆ ದ್ವೇಷ ರಾಜಕಾರಣವಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಯಾರೆಲ್ಲಾ ತಲೆ ಬಾಗಿದರೋ ಅವರೆಲ್ಲರೂ ನಮ್ಮಿಂದ ದೂರ ಆಗಿದ್ದಾರೆ. ಆದರೆ ಸಂಜಯ್ ರಾವತ್ ಆಗಲ್ಲ ಎಂದಿರುವ ಉದ್ಧವ್ ಠಾಕ್ರೆ ಅವರು, ಪುಷ್ಪ ಸಿನೆಮಾದಲ್ಲಿ ‘ತಲೆ ಬಾಗೋದಿಲ್ಲ’ ಎಂಬ ಡೈಲಾಗ್ ಇದೆ. ತಲೆ ಬಾಗದೇ ಇರೋರೇ ನಿಜವಾದ ಶಿವ ಸೈನಿಕರು. ಸಂಜಯ್ ರಾವತ್ ಎಂದಿಗೂ ತಲೆ ಬಾಗುವವರಲ್ಲ. ಅವರು ನಿಜವಾದ ಶಿವ ಸೈನಿಕ. ಅವರ ಬಗ್ಗೆ ನಮಗೆ ಗೌರವ ಇದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಸಂಜಯ್ ರಾವತ್ ಕುಟುಂಬಸ್ಥರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿದ ಉದ್ಧವ್ ಠಾಕ್ರೆ, ನಿಮ್ಮ ಪರ ನಾವಿದ್ದೇವೆ ಎಂದು ಭರವಸೆ ನೀಡಿದರು.
ಅಕ್ರಮ ಹಣ ಸಾಗಣೆ ಆರೋಪದ ಮೇಲೆ ಸಂಜಯ್ ರಾವತ್ ಅವರನ್ನು ಜಾರಿ ನಿರ್ದೇಶನಾಲಯ ನಿನ್ನೆ ಬಂಧಿಸಿತ್ತು. ನಂತರ ಆಗಸ್ಟ್ 4ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.