ದುರ್ಗಾ ದೇವಿ ಮೂರ್ತಿ ವಿರೂಪಗೊಳಿಸಿ ನವರಾತ್ರಿ ವೇಳ ಶಾಂತಿ ಸುವ್ಯವಸ್ಥೆ ಕದಡಲು ಯತ್ನಿಸಿದ ಇಬ್ಬರು ಮುಸ್ಲಿಂ ಮಹಿಳೆಯರನ್ನು ಬಂಧಿಸಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಬಾದಿನ ಖೈರತಾಬಾದ್ನಲ್ಲಿ ನಡೆದಿದೆ.
ವಿಷಯ ತಿಳಿಯುತ್ತಿದಂತೆ ಸ್ಥಳದಲ್ಲಿ ಜಮಾಯಿಸಿದವರ ಮೇಲೆ ಈ ಇಬ್ಬರು ಮಹಿಳೆಯರು ಸ್ಪ್ಯಾನರ್ ಹಾಗೂ ಸುತ್ತಿಗೆಯಿಂದ ಹೆಲ್ಲೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಮಹಿಳೆಯರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಯಾವುದಾದರು ನಿಷೇಧಿತ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಇರುವ ಬಗ್ಗೆ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್ ಸೆಂಟ್ರಲ್ ಡಿಸಿಪಿ ಚಂದ್ರ ಮೊದಲಿಗೆ ಚರ್ಚ್ ಬಳಿ ಕಾಣಿಸಿಕೊಂಡ ಈ ಇಬ್ಬರು ಮಹಿಳೆಯರು ಚರ್ಚ್ ಹೊರಭಾಗದಲ್ಲಿರುವ ವರ್ಜಿನ್ ಮೇರಿ ವಿಗ್ರಹವನ್ನ ವಿರೂಪಗೊಳಿಸಿದ್ದಾರೆ ನಂತರ ನವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಿದ ದುರ್ಗಾ ಮಾತೆಯ ಮೂರ್ತಿಯನ್ನು ವಿರೂಪಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಠಾಣೆಯ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿದ್ದರು ಮತ್ತು ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.